ನಗರದ ಪ್ರವಾಸಿ ಮಂದಿರದಿಂದ ನೂರಾರು ಸಂಖ್ಯೆಯಲ್ಲಿ ಹೊರಟ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ‘ಪೊಲೀಸರು ಯಾರನ್ನೂ ಬಂಧಿಸಿಲ್ಲ. ಇದರಿಂದ ಪ್ರತಿಭಟನೆ ಅನಿವಾರ್ಯವಾಯಿತು. ತಾಲ್ಲೂಕಿನಲ್ಲಿ 56 ಸಾವಿರ ಮತದಾರರಿದ್ದೂ ಘಟನೆ ನಡೆದ ಸ್ಥಳಕ್ಕೆ ನಮ್ಮಿಂದ ಓಟು ಪಡೆದ ಶಾಸಕರಾಗಲಿ, ಸಂಸದರಾಗಲಿ ಅಥವಾ ಮಾಜಿ ಶಾಸಕರಾಗಲಿ ಬಂದಿಲ್ಲ’ ಎಂದು ಟೀಕಿಸಿದರು.