<p><strong>ದೊಡ್ಡಬಳ್ಳಾಪುರ:</strong>ನಂದಿಬೆಟ್ಟದ ತಪ್ಪಲಿನ ಅರ್ಕಾವತಿ ನದಿಯ ಪಾತ್ರದ ಮೊದಲ ಕೆರೆಯಾಗಿರುವ ಹೆಗ್ಗಡಿಹಳ್ಳಿ ಕೆರೆ 15 ವರ್ಷಗಳ ನಂತರ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಭಾನುವಾರ ಗ್ರಾಮಸ್ಥರು ಕೆರೆ ಕೋಡಿಯಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.</p>.<p>ಮಹಿಳೆಯರು ಹೂವಿನ ಅಲಂಕಾರದಿಂದ ಸಿಂಗರಿಸಿದ ತಂಬಿಟ್ಟು ದೀಪಾರತಿಯೊಂದಿಗೆ ಬಾಗಿನ ಅರ್ಪಿಸಿದದರು. ಕಾರ್ಯಕ್ರಮದ ಅಂಗವಾಗಿ ಗಂಗಮ್ಮ ದೇವತೆಯ ಮೆರವಣಿಗೆ ಮಾಡ<br />ಲಾಯಿತು.</p>.<p>ಪಂಚಗಿರಿ ಶ್ರೇಣಿಯ ವಿಶ್ವವಿಖ್ಯಾತ ನಂದಿಬೆಟ್ಟದ ಪಂಚ ನದಿಗಳಲ್ಲಿ ಒಂದಾದ ಅರ್ಕಾವತಿ ನದಿ ಉಗಮವಾದ ನಂತರ ಹೆಗ್ಗಡಿಹಳ್ಳಿ ಕೆರೆಗೆ ಹರಿಯಲಿದೆ. ನಂತರ ದೊಡ್ಡಬಳ್ಳಾಪುರ ನಾಗರಕೆರೆ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯ<br />ಸೇರಲಿದೆ.</p>.<p>ಹಲವು ವರ್ಷಗಳ ನಂತರ ಅರ್ಕಾವತಿ ನದಿ ಮಾತ್ರದ ಕೆರೆಗಳು ತುಂಬಿರುವುದು ನದಿ ಪಾತ್ರದ ಜನರಲ್ಲಿ ಮಂದಹಾಸ ಮೂಡಿದೆ.</p>.<p>ಕೆರೆಕಟ್ಟೆಯ ಸುತ್ತಮುತ್ತ ಗಿಡಗಳು ಹೇರಳವಾಗಿ ಬೆಳೆದಿದ್ದು, ಕೋಡಿ ಸಹ ಕಿತ್ತು ಬಂದಿರುವ ಕಾರಣ ನೀರು ವ್ಯರ್ಥವಾಗಿ ಹರಿದು ಹೊರ ಹೋಗುತ್ತಿದೆ. ಈ ಕುರಿತಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ಕೆರೆಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರುಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ:</strong>ನಂದಿಬೆಟ್ಟದ ತಪ್ಪಲಿನ ಅರ್ಕಾವತಿ ನದಿಯ ಪಾತ್ರದ ಮೊದಲ ಕೆರೆಯಾಗಿರುವ ಹೆಗ್ಗಡಿಹಳ್ಳಿ ಕೆರೆ 15 ವರ್ಷಗಳ ನಂತರ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಭಾನುವಾರ ಗ್ರಾಮಸ್ಥರು ಕೆರೆ ಕೋಡಿಯಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.</p>.<p>ಮಹಿಳೆಯರು ಹೂವಿನ ಅಲಂಕಾರದಿಂದ ಸಿಂಗರಿಸಿದ ತಂಬಿಟ್ಟು ದೀಪಾರತಿಯೊಂದಿಗೆ ಬಾಗಿನ ಅರ್ಪಿಸಿದದರು. ಕಾರ್ಯಕ್ರಮದ ಅಂಗವಾಗಿ ಗಂಗಮ್ಮ ದೇವತೆಯ ಮೆರವಣಿಗೆ ಮಾಡ<br />ಲಾಯಿತು.</p>.<p>ಪಂಚಗಿರಿ ಶ್ರೇಣಿಯ ವಿಶ್ವವಿಖ್ಯಾತ ನಂದಿಬೆಟ್ಟದ ಪಂಚ ನದಿಗಳಲ್ಲಿ ಒಂದಾದ ಅರ್ಕಾವತಿ ನದಿ ಉಗಮವಾದ ನಂತರ ಹೆಗ್ಗಡಿಹಳ್ಳಿ ಕೆರೆಗೆ ಹರಿಯಲಿದೆ. ನಂತರ ದೊಡ್ಡಬಳ್ಳಾಪುರ ನಾಗರಕೆರೆ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯ<br />ಸೇರಲಿದೆ.</p>.<p>ಹಲವು ವರ್ಷಗಳ ನಂತರ ಅರ್ಕಾವತಿ ನದಿ ಮಾತ್ರದ ಕೆರೆಗಳು ತುಂಬಿರುವುದು ನದಿ ಪಾತ್ರದ ಜನರಲ್ಲಿ ಮಂದಹಾಸ ಮೂಡಿದೆ.</p>.<p>ಕೆರೆಕಟ್ಟೆಯ ಸುತ್ತಮುತ್ತ ಗಿಡಗಳು ಹೇರಳವಾಗಿ ಬೆಳೆದಿದ್ದು, ಕೋಡಿ ಸಹ ಕಿತ್ತು ಬಂದಿರುವ ಕಾರಣ ನೀರು ವ್ಯರ್ಥವಾಗಿ ಹರಿದು ಹೊರ ಹೋಗುತ್ತಿದೆ. ಈ ಕುರಿತಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ಕೆರೆಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರುಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>