‘ಕೊರೊನಾ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ತೀರ್ಮಾನಗಳನ್ನು ವಿಶ್ವವೇ ಮೆಚ್ಚಿಕೊಂಡಿದೆ. ರೈತರ ಖಾತೆ ಗಳಿಗೆ ಹಣ ಜಮಾವಣೆ, ಜನಧನ್ ಯೋಜನೆ ಯಡಿ ಹಣ ಜಮೆ, ಮೂರು ತಿಂಗಳು ಮುಂಗಡವಾಗಿ ಕುಟುಂಬಗಳಿಗೆ ಪಡಿತರ ವಿತರಣೆ ಸೇರಿದಂತೆ ಸಂಕಷ್ಟದ ಸಮಯದಲ್ಲಿ ಯಾವುದೇ ಕುಟುಂಬವು ಹಸಿವಿನಿಂದ ಬಳಲಬಾರದು ಎಂದು ಸಮರೋಪಾದಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೀರ್ಮಾನ ಕೈಗೊಂಡು ಕೆಲಸ ಮಾಡಿದೆ’ ಎಂದರು.