ಘಟನೆ ವಿವರ: ಕಳೆದ ಹಲವು ದಿನಗಳ ಹಿಂದೆ ನಂದಗುಡಿ ಪೊಲೀಸ್ ಠಾಣೆ ಎದುರು ಅನುಜಾ ಎಂಬ ಯುವತಿ ಹಾಗೂ ಕುಟುಂಬ ಸದಸ್ಯರು ಧರಣಿ ನಡೆಸಿ, ಪ್ರಮೋದ್ ಮದುವೆ ಆಗಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದರು. ಈ ಕುರಿತು ಮಾಹಿತಿ ನೀಡಿದ ಪ್ರಮೋದ್, ಯಲಹಂಕ ಸಿಆರ್ಪಿಎಫ್ನಲ್ಲಿ ಕರ್ತವ್ಯದಲ್ಲಿದ್ದಾಗ ಅಲ್ಲಿಗೆ ಬಂದ ಅನುಜಾ ಮತ್ತು ಅವರ ಸ್ನೇಹಿತರು ಅವಾಚ್ಯವಾಗಿ ನಿಂದಿಸಿ ಜ್ಞಾನ ತಪ್ಪುವಂತೆ ಮಾಡಿದರು. ಬಲವಂತವಾಗಿ ತಾಳಿ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ. ’ನಾನು ಎಲ್ಲಿಯೂ ತಪ್ಪಿಸಿಕೊಂಡು ಹೋಗಿಲ್ಲ. ನಮ್ಮ ಕಚೇರಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ನ್ಯಾಯ’ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.