<p><strong>ಸೂಲಿಬೆಲೆ:</strong> ‘ಗ್ರಾಮ ಪಂಚಾಯಿತಿಗಳಿಗೆ, ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಬರುವಂತಹ ಹಣಕಾಸಿನ ನಿಧಿಯನ್ನು ಬಳಸಿಕೊಂಡು ಹೊಸಕೋಟೆ ತಾಲ್ಲೂಕಿನ ಗ್ರಾಮಗಳನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲಾಗುತ್ತಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.</p>.<p>ಸೂಲಿಬೆಲೆ ಹೋಬಳಿಯ ಲಕ್ಕೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದಲ್ಲಿ ಕಲ್ಯಾಣಿ, ಸೋಲಾರ್ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.</p>.<p>‘ಈಗಾಗಲೇ 8 ಪಂಚಾಯಿತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಚೊಕ್ಕಹಳ್ಳಿ ಪಂಚಾಯಿತಿಯನ್ನು ಸಂಪೂರ್ಣ ಸೋಲಾರ್ ಪಂಚಾಯಿತಿ ಮಾಡಲಾಗಿದೆ. ಸೋಲಾರ್ ವಿದ್ಯುತ್ ಬಳಕೆಯಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನ ಪಡೆದ ವಿಧಾನಸಭಾ ಕ್ಷೇತ್ರವಾಗಿದೆ’ ಎಂದರು.</p>.<p>‘ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೈಗಾರಿಕೆಗಳು ಇರುವುದರಿಂದ ಹೆಚ್ಚಿನ ಆದಾಯ ಪಂಚಾಯಿತಿಗಳಿಗೆ ಬರುವಂತಹದ್ದಾಗಿದ್ದು, ಸ್ವಂತ ಆರ್ಥಿಕ ಶಕ್ತಿಯನ್ನು ಪಂಚಾಯಿತಿಗಳು ಪಡೆದುಕೊಳ್ಳುತ್ತಿವೆ ಎಂದ ಅವರು, ಈ ದಿನ ಕಲ್ಯಾಣಿ ಮತ್ತು ಚರಂಡಿ ಕಾಮಗಾರಿ ಸೇರಿದಂತೆ ಸುಮಾರು ₹ 50 ಲಕ್ಷ ರೂಪಾಯಿ ಕಾಮಗಾರಿಗಳನ್ನು, ಪಂಚಾಯಿತಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದರು.</p>.<p>‘ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿದ್ದು, ಗ್ರಾಮಗಳನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುವಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರಿಗೆ ಕರೆ<br />ನೀಡಿದರು.</p>.<p>ಕಾರ್ಯಕ್ರಮದಲ್ಲಿ ಸಿ.ಮುನಿಯಪ್ಪ, ಬಿ.ಜಿ.ನಾರಾಯಣಗೌಡ, ತಮ್ಮೇಗೌಡ, ಪದ್ಮಾವತಿ ಮಂಜುನಾಥ್, ತಾ.ಪಂ.ಸದಸ್ಯ ಡಿ.ಟಿ.ವೆಂಕಟೇಶ್, ಪಂಚಾಯಿತಿ ಆಡಳಿತಾಧಿಕಾರಿ ನಾಗರಾಜ್, ಮುಖಂಡರಾದ ಬೈರಪ್ಪ, ಬೈರೇಗೌಡ, ಶೀನಪ್ಪ, ಗೋಪಾಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೂಲಿಬೆಲೆ:</strong> ‘ಗ್ರಾಮ ಪಂಚಾಯಿತಿಗಳಿಗೆ, ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಬರುವಂತಹ ಹಣಕಾಸಿನ ನಿಧಿಯನ್ನು ಬಳಸಿಕೊಂಡು ಹೊಸಕೋಟೆ ತಾಲ್ಲೂಕಿನ ಗ್ರಾಮಗಳನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲಾಗುತ್ತಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.</p>.<p>ಸೂಲಿಬೆಲೆ ಹೋಬಳಿಯ ಲಕ್ಕೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದಲ್ಲಿ ಕಲ್ಯಾಣಿ, ಸೋಲಾರ್ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.</p>.<p>‘ಈಗಾಗಲೇ 8 ಪಂಚಾಯಿತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಚೊಕ್ಕಹಳ್ಳಿ ಪಂಚಾಯಿತಿಯನ್ನು ಸಂಪೂರ್ಣ ಸೋಲಾರ್ ಪಂಚಾಯಿತಿ ಮಾಡಲಾಗಿದೆ. ಸೋಲಾರ್ ವಿದ್ಯುತ್ ಬಳಕೆಯಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನ ಪಡೆದ ವಿಧಾನಸಭಾ ಕ್ಷೇತ್ರವಾಗಿದೆ’ ಎಂದರು.</p>.<p>‘ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೈಗಾರಿಕೆಗಳು ಇರುವುದರಿಂದ ಹೆಚ್ಚಿನ ಆದಾಯ ಪಂಚಾಯಿತಿಗಳಿಗೆ ಬರುವಂತಹದ್ದಾಗಿದ್ದು, ಸ್ವಂತ ಆರ್ಥಿಕ ಶಕ್ತಿಯನ್ನು ಪಂಚಾಯಿತಿಗಳು ಪಡೆದುಕೊಳ್ಳುತ್ತಿವೆ ಎಂದ ಅವರು, ಈ ದಿನ ಕಲ್ಯಾಣಿ ಮತ್ತು ಚರಂಡಿ ಕಾಮಗಾರಿ ಸೇರಿದಂತೆ ಸುಮಾರು ₹ 50 ಲಕ್ಷ ರೂಪಾಯಿ ಕಾಮಗಾರಿಗಳನ್ನು, ಪಂಚಾಯಿತಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದರು.</p>.<p>‘ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿದ್ದು, ಗ್ರಾಮಗಳನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುವಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರಿಗೆ ಕರೆ<br />ನೀಡಿದರು.</p>.<p>ಕಾರ್ಯಕ್ರಮದಲ್ಲಿ ಸಿ.ಮುನಿಯಪ್ಪ, ಬಿ.ಜಿ.ನಾರಾಯಣಗೌಡ, ತಮ್ಮೇಗೌಡ, ಪದ್ಮಾವತಿ ಮಂಜುನಾಥ್, ತಾ.ಪಂ.ಸದಸ್ಯ ಡಿ.ಟಿ.ವೆಂಕಟೇಶ್, ಪಂಚಾಯಿತಿ ಆಡಳಿತಾಧಿಕಾರಿ ನಾಗರಾಜ್, ಮುಖಂಡರಾದ ಬೈರಪ್ಪ, ಬೈರೇಗೌಡ, ಶೀನಪ್ಪ, ಗೋಪಾಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>