ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕೋವಿಡ್ 19ರ ಸೋಂಕು ಬೆಳಕಿಗೆ ಬಂದು ಈವರೆಗೆ ಸರ್ಕಾರದ ಅಡಳಿತ ಸ್ತಬ್ದವಾಗಿದೆ. ಕೊರೊನಾ ಸೋಂಕಿನ ಕಡಿವಾಣಕ್ಕೆ ಖರೀದಿಸಿದ ವೈದ್ಯಕೀಯ ಪರಿಕರಗಳಲ್ಲಿ ಭ್ರಷ್ಟಾಚಾರದ ವಾಸನೆ ಇದೆ. ನೆರೆ ಪರಿಹಾರದಲ್ಲಿ ವಿಳಂಬ, ರೈತರ ಸಂಕಷ್ಟ ನಿವಾರಣೆಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಆಡಳಿತ ಚಟುವಟಕೆಗಳ ವಾಸ್ತವವನ್ನು ಮತದಾರರಿಗೆ ತಿಳಿಸಲು 2,700 ಕಿ.ಮೀ ಪಕ್ಷದ ಕಾರ್ಯಕರ್ತರಿಂದ ಜಾಥಾ ನಡೆಯಲಿದೆ’ ಎಂದು ಹೇಳಿದರು.