<p><strong>ದೇವನಹಳ್ಳಿ:</strong> ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಆಡಳಿತ ಮಂಡಳಿ ನಿದೇರ್ಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದೇವನಹಳ್ಳಿ ಮತಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್ ಗೆಲುವು ಸಾಧಿಸಿದ್ದಾರೆ.</p>.<p>ಬಿಡಿಸಿಸಿ ಬ್ಯಾಂಕ್ ದೇವನಹಳ್ಳಿ ಮತ ಕ್ಷೇತ್ರವೂ ಸಾಕಷ್ಟು ವರ್ಷಗಳಿಂದ ಜೆಡಿಎಸ್ ತೆಕ್ಕೆಯಲ್ಲಿತ್ತು. ಜೆಡಿಎಸ್ ಭದ್ರಕೋಟೆಯನ್ನು ಭೇದಿಸಿ ಕಾಂಗ್ರೆಸ್ ಮುಖಂಡ ಗೆಲುವು ಸಾಧಿಸಿದ್ದಾರೆ.</p>.<p>ದೇವನಹಳ್ಳಿ ಮತಕ್ಷೇತ್ರದಲ್ಲಿ ಒಟ್ಟು 13 ಮತಗಳ ಪೈಕಿ ಜೆಡಿಎಸ್ ತೆಕ್ಕೆಯಲ್ಲಿ 7 ಮತ ಹಾಗೂ ಕಾಂಗ್ರೆಸ್ ಬೆಂಬಲಿತರ ಪರ 6 ಮತಗಳಿತ್ತು. ಎಲ್ಲರೂ ಜೆಡಿಎಸ್ ಅಭ್ಯರ್ಥಿ ಕೆ.ವಿ.ಮಂಜುನಾಥ್ (ಕೋಡಗುರ್ಕಿ) ಅವರ ಸುಲುಭ ಜಯ ಸಾಧಿಸುತ್ತಾರೆ ಎಂದು ಅಂದಾಜಿಸಿದ್ದರು.</p>.<p>ಆದರೆ ಜೆಡಿಎಸ್ ಬೆಂಬಲಿತ ಒಬ್ಬರು ಅಡ್ಡ ಮತದಾನ ಮಾಡಿದ ಕಾರಣದ ಚುನಾವಣೆಯಲ್ಲಿ 7 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್ ಗೆಲುವು ಸಾಧಿಸಿದ್ದು, 6 ಮತಗಳನ್ನು ಪಡೆದುಕೊಂಡ ಕೆ.ವಿ.ಮಂಜುನಾಥ್ (ಕೋಡಗುರ್ಕಿ) ಪರಾಭವ ಗೊಂಡಿದ್ದಾರೆ.</p>.<p>ವಿಜೇತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್ ಗೆಲುವು ಸಾಧಿಸುತ್ತಿದ್ದಂತೆ ಮುಖಂಡರು ಮತ್ತು ಕಾರ್ಯಕರ್ತರು ಅವರನ್ನು ಅಭಿನಂದಿಸಿ ವಿಜಯೋತ್ಸವ ಆಚರಿಸಿದರು. ಸಮನ್ವಯದ ಕೊರತೆಯಿಂದ ಜೆಡಿಎಸ್ ಸಹಕಾರಿ ಕ್ಷೇತ್ರದಲ್ಲಿ ದಿನೇದಿನೆ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ ಎಂದು ರಾಜಕೀಯ ಮುಖಂಡರು ವಿಶ್ಲೇಷಣೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ:</strong> ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಆಡಳಿತ ಮಂಡಳಿ ನಿದೇರ್ಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದೇವನಹಳ್ಳಿ ಮತಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್ ಗೆಲುವು ಸಾಧಿಸಿದ್ದಾರೆ.</p>.<p>ಬಿಡಿಸಿಸಿ ಬ್ಯಾಂಕ್ ದೇವನಹಳ್ಳಿ ಮತ ಕ್ಷೇತ್ರವೂ ಸಾಕಷ್ಟು ವರ್ಷಗಳಿಂದ ಜೆಡಿಎಸ್ ತೆಕ್ಕೆಯಲ್ಲಿತ್ತು. ಜೆಡಿಎಸ್ ಭದ್ರಕೋಟೆಯನ್ನು ಭೇದಿಸಿ ಕಾಂಗ್ರೆಸ್ ಮುಖಂಡ ಗೆಲುವು ಸಾಧಿಸಿದ್ದಾರೆ.</p>.<p>ದೇವನಹಳ್ಳಿ ಮತಕ್ಷೇತ್ರದಲ್ಲಿ ಒಟ್ಟು 13 ಮತಗಳ ಪೈಕಿ ಜೆಡಿಎಸ್ ತೆಕ್ಕೆಯಲ್ಲಿ 7 ಮತ ಹಾಗೂ ಕಾಂಗ್ರೆಸ್ ಬೆಂಬಲಿತರ ಪರ 6 ಮತಗಳಿತ್ತು. ಎಲ್ಲರೂ ಜೆಡಿಎಸ್ ಅಭ್ಯರ್ಥಿ ಕೆ.ವಿ.ಮಂಜುನಾಥ್ (ಕೋಡಗುರ್ಕಿ) ಅವರ ಸುಲುಭ ಜಯ ಸಾಧಿಸುತ್ತಾರೆ ಎಂದು ಅಂದಾಜಿಸಿದ್ದರು.</p>.<p>ಆದರೆ ಜೆಡಿಎಸ್ ಬೆಂಬಲಿತ ಒಬ್ಬರು ಅಡ್ಡ ಮತದಾನ ಮಾಡಿದ ಕಾರಣದ ಚುನಾವಣೆಯಲ್ಲಿ 7 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್ ಗೆಲುವು ಸಾಧಿಸಿದ್ದು, 6 ಮತಗಳನ್ನು ಪಡೆದುಕೊಂಡ ಕೆ.ವಿ.ಮಂಜುನಾಥ್ (ಕೋಡಗುರ್ಕಿ) ಪರಾಭವ ಗೊಂಡಿದ್ದಾರೆ.</p>.<p>ವಿಜೇತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್ ಗೆಲುವು ಸಾಧಿಸುತ್ತಿದ್ದಂತೆ ಮುಖಂಡರು ಮತ್ತು ಕಾರ್ಯಕರ್ತರು ಅವರನ್ನು ಅಭಿನಂದಿಸಿ ವಿಜಯೋತ್ಸವ ಆಚರಿಸಿದರು. ಸಮನ್ವಯದ ಕೊರತೆಯಿಂದ ಜೆಡಿಎಸ್ ಸಹಕಾರಿ ಕ್ಷೇತ್ರದಲ್ಲಿ ದಿನೇದಿನೆ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ ಎಂದು ರಾಜಕೀಯ ಮುಖಂಡರು ವಿಶ್ಲೇಷಣೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>