<p><strong>ದಾಬಸ್ ಪೇಟೆ:</strong> ಇಲ್ಲಿನ ಮಣ್ಣು ಮತ್ತು ಹವಾಗುಣಕ್ಕೆ ಹೊಂದಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರು<br />ವ್ಯಾಪ್ತಿಯ ಬಹುತೇಕ ರೈತರು ಈರುಳ್ಳಿ ಬೆಳೆಯಲು ಮುಂದಾಗುವುದಿಲ್ಲ. ಆದರೆ,ನೆಲಮಂಗಲ ಬಳಿಯ ಚನ್ನೋಹಳ್ಳಿಯ ರೈತ ಹನುಮಂತರಾಯಪ್ಪ ಈರುಳ್ಳಿ ಬೆಳೆದು ಯಶಸ್ವಿಯಾಗಿದ್ದಾರೆ.</p>.<p>‘ನಾವು ಮೊದಲು ಈ ಭಾಗದ ಎಲ್ಲ ರೈತರಂತೆಸೊಪ್ಪು, ತರಕಾರಿ ಬೆಳೆಯುತ್ತಿದ್ದೆವು. ಬಳ್ಳಾರಿ ಜಿಲ್ಲೆಯ ಇಟಗಿ ಗ್ರಾಮದ ಕೆಲವು ಈರುಳ್ಳಿ ಬೆಳೆಗಾರರು ನಮಗೆ ಪ್ರೋತ್ಸಾಹ ನೀಡಿದರು. ಇಟಗಿಯಿಂದಲೇ ‘ರೆಡ್ ಡೈಮಂಡ್’ ಬೀಜ ತಂದು, ಅಲ್ಲಿನವರನ್ನೇ ಕರೆಸಿ ಬಿತ್ತನೆ ಮಾಡಲಾಯಿತು’ ಎಂದು ಹನುಮಂತರಾಯಪ್ಪ ಹೇಳಿದರು.</p>.<p><strong>ದೊರೆಯಿತು ಲಾಭ:</strong>‘ಮುಕ್ಕಾಲು ಎಕರೆಯಲ್ಲಿ ನಾಲ್ಕು ತಿಂಗಳ ಹಿಂದೆ ಈರುಳ್ಳಿ ಬಿತ್ತಲಾಯಿತು. 44 ಚೀಲ ಈರುಳ್ಳಿ ಸಿಕ್ಕಿತು. ಅದೇ ಸಂದರ್ಭದಲ್ಲಿ, ನೆರೆ ಹಾವಳಿಯಿಂದ ಉತ್ತರ ಕರ್ನಾಟಕದಲ್ಲಿನ ಬೆಳೆ ಹಾಳಾಯಿತು. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಯಿತು. ಖರ್ಚು ಕಳೆದು ₹1.60 ಲಕ್ಷ ಲಾಭ ದೊರೆಯಿತು’ ಎಂದು ಅವರು ಹೇಳಿದರು.</p>.<p>‘ಈಗಒಂದು ಎಕರೆಯಲ್ಲಿ ಬೆಳೆ ಬಂದಿದೆ. ಬೆಲೆ ಕಡಿಮೆಯಾಗಿದ್ದರೂ, ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದೇನೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಬಸ್ ಪೇಟೆ:</strong> ಇಲ್ಲಿನ ಮಣ್ಣು ಮತ್ತು ಹವಾಗುಣಕ್ಕೆ ಹೊಂದಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರು<br />ವ್ಯಾಪ್ತಿಯ ಬಹುತೇಕ ರೈತರು ಈರುಳ್ಳಿ ಬೆಳೆಯಲು ಮುಂದಾಗುವುದಿಲ್ಲ. ಆದರೆ,ನೆಲಮಂಗಲ ಬಳಿಯ ಚನ್ನೋಹಳ್ಳಿಯ ರೈತ ಹನುಮಂತರಾಯಪ್ಪ ಈರುಳ್ಳಿ ಬೆಳೆದು ಯಶಸ್ವಿಯಾಗಿದ್ದಾರೆ.</p>.<p>‘ನಾವು ಮೊದಲು ಈ ಭಾಗದ ಎಲ್ಲ ರೈತರಂತೆಸೊಪ್ಪು, ತರಕಾರಿ ಬೆಳೆಯುತ್ತಿದ್ದೆವು. ಬಳ್ಳಾರಿ ಜಿಲ್ಲೆಯ ಇಟಗಿ ಗ್ರಾಮದ ಕೆಲವು ಈರುಳ್ಳಿ ಬೆಳೆಗಾರರು ನಮಗೆ ಪ್ರೋತ್ಸಾಹ ನೀಡಿದರು. ಇಟಗಿಯಿಂದಲೇ ‘ರೆಡ್ ಡೈಮಂಡ್’ ಬೀಜ ತಂದು, ಅಲ್ಲಿನವರನ್ನೇ ಕರೆಸಿ ಬಿತ್ತನೆ ಮಾಡಲಾಯಿತು’ ಎಂದು ಹನುಮಂತರಾಯಪ್ಪ ಹೇಳಿದರು.</p>.<p><strong>ದೊರೆಯಿತು ಲಾಭ:</strong>‘ಮುಕ್ಕಾಲು ಎಕರೆಯಲ್ಲಿ ನಾಲ್ಕು ತಿಂಗಳ ಹಿಂದೆ ಈರುಳ್ಳಿ ಬಿತ್ತಲಾಯಿತು. 44 ಚೀಲ ಈರುಳ್ಳಿ ಸಿಕ್ಕಿತು. ಅದೇ ಸಂದರ್ಭದಲ್ಲಿ, ನೆರೆ ಹಾವಳಿಯಿಂದ ಉತ್ತರ ಕರ್ನಾಟಕದಲ್ಲಿನ ಬೆಳೆ ಹಾಳಾಯಿತು. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಯಿತು. ಖರ್ಚು ಕಳೆದು ₹1.60 ಲಕ್ಷ ಲಾಭ ದೊರೆಯಿತು’ ಎಂದು ಅವರು ಹೇಳಿದರು.</p>.<p>‘ಈಗಒಂದು ಎಕರೆಯಲ್ಲಿ ಬೆಳೆ ಬಂದಿದೆ. ಬೆಲೆ ಕಡಿಮೆಯಾಗಿದ್ದರೂ, ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದೇನೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>