ಮೈಸೂರು ವಿಶ್ಯವಿದ್ಯಾಲಯ ನಡೆಸಿದ ಉತ್ಖನನದ ನಂತರ ಬೌದ್ಧ ವಿಹಾರ ಪಳೆಯುಳಿಕೆ ಪತ್ತೆಯಾಗಿವೆ. ಬೆಂಗಳೂರಿನ ಸನಿಹವೇ ಇರುವ ಈ ನೆಲೆಯನ್ನು ಪಾರಂಪಾರಿಕ ತಾಣವಾಗಿ ಅಭಿವೃದ್ಧಿ ಪಡಿಸಬೇಕಿದೆ. ಸುತ್ತಲು ಹಸಿರು, ಬೆಟ್ಟಗಳ ಸಾಲು, ಶಾಂತಿಪ್ರಿಯ ಜನರ ನಡುವೆ ಧ್ಯಾನ ಕೇಂದ್ರ ನಿರ್ಮಿಸುವ ಮೂಲಕ ಮುಂದಿನ ಪೀಳಿಗೆಗೆ ಬೌದ್ಧರ ನೆಲೆಯ ಬಗ್ಗೆ ತಿಳಿಸಬೇಕಿದೆ ಎಂದರು.