<p><strong>ದೊಡ್ಡಬಳ್ಳಾಪುರ:</strong> ಮಳೆ ನೀರು ಕೊಯ್ಲು ವ್ಯವಸ್ಥೆಗೆ ಪ್ರೋತ್ಸಾಹ ಧನ, ಕುಡಿಯುವ ನೀರಿಗೆ ಆದ್ಯತೆ, ಭೋಜನ ಕುಟೀರ ನಿರ್ಮಾಣ, ರಸ್ತೆ ದುರಸ್ತಿ, ರಸ್ತೆ ವಿಸ್ತರಣೆ, ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಜತೆಗೆ ಉಳಿತಾಯಕ್ಕೂ ಆದ್ಯತೆ ನೀಡುವ ಮೂಲಕ ಈ ಬಾರಿ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್ ಹೇಳಿದರು.</p>.<p>ನಗರಸಭೆಯಲ್ಲಿ ಬುಧವಾರ ನಡೆದ 2024-25ನೇ ಸಾಲಿನ ಆಯ-ವ್ಯಯದ ವಿಶೇಷ ಸಭೆಯಲ್ಲಿ ಬಜೆಟ್ ಮಂಡಿಸಿದ ಅವರು, 2024-25ನೇ ಸಾಲಿನ ಪ್ರಾರಂಭಿಕ ಉಳಿತಾಯ ₹12.25 ಕೋಟಿ, ವಿವಿಧ ಮೂಲಗಳ ವರಮಾನ ₹54.96 ಕೋಟಿ ಸೇರಿದಂತೆ ಒಟ್ಟು ₹67.21ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ ₹65.66 ಕೋಟಿ ಖರ್ಚಾಗುವುದಂತೆ ಅಂದಾಜಿಸಲಾಗಿದೆ. ಹಾಗಾಗಿ ಇದು ₹1.55 ಕೋಟಿ ಉಳಿತಾಯ ಬಜೆಟ್ ಆಗಿದೆ ಎಂದು ತಿಳಿಸಿದರು.</p>.<p>₹5.60 ಕೋಟಿ ವೆಚ್ಚದಲ್ಲಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲು ಉದ್ದೇಶಲಾಗಿದೆ ಎಂದು ತಿಳಿಸಿದರು.</p>.<p>ಮುಖ್ಯಮಂತ್ರಿ ನಗರೋತ್ಥಾನ ಹಂತ-4ರ ಯೋಜನೆಯಡಿ ದೊಡ್ಡಬಳ್ಳಾಪುರ ನಗರಸಭೆಗೆ ₹30 ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದೆ. ನಗರದ ಮಳೆ ನೀರು ಚರಂಡಿ ಮೂಲಕ ಕೆರೆ ಸೇರಿವುದನ್ನು ತಪ್ಪಿಸಲು ₹3ಕೋಟಿ ವೆಚ್ಚದಲ್ಲಿ ಪ್ರತಿಬಂಧಕ ಹಾಗೂ ತಿರುವು ನಿರ್ಮಾಣಗೊಳಿಸಲಾಗುವುದು. ಇದನ್ನು ಯುಐಡಿಎಫ್ಸಿ ಸಂಸ್ಥೆ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.</p>.<p>ರಾಜ್ಯ ಸರ್ಕಾರದ ಎಸ್ಎಫ್ಸಿ ವಿಶೇಷ ಅನುದಾನದಡಿ ₹36.72 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೊಳಿಸಲಾಗುವುದು. ನಗರದ ಮುಖ್ಯ ವೃತ್ತಗಳಲ್ಲಿ ಜನದಟ್ಟಣಿ ಪ್ರದೇಶಗಳಲ್ಲಿ ₹20 ಲಕ್ಷ ವೆಚ್ಚದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.</p>.<p>ನಗರದ ಪ್ರಮುಖ ರಸ್ತೆಗಳ ವಿಸ್ತರಣೆಗಾಗಿ ಸದರಿ ಸಾಲಿನಲ್ಲಿ ಯೋಜನಾ ವರದಿ ತಯಾರಿಸಿ ಹಂತ ಹಂತವಾಗಿ ಯೋಜನೆ ಕೈಗೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.</p>.<p>ನಗರಸಭೆ ಉಪಾಧ್ಯಕ್ಷೆ ಫರ್ಹಾನಾ ತಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್,ಪೌರಾಯುಕ್ತ ಕೆ.ಪರಮೇಶ್, ಲೆಕ್ಕಾಧಿಕಾರಿ ಎನ್.ನಂದೀಶ್ ಇದ್ದರು.</p>.<h3>ಬಜೆಟ್ ಮುಖ್ಯಾಂಶಗಳು</h3><p>l ₹1 ಕೋಟಿ ವೆಚ್ಚದಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ನೂತನ ಮಳಿಗೆ, ಗಳ ನಿರ್ಮಾಣ</p><p>l ₹98.20 ಲಕ್ಷ ವೆಚ್ಚದಲ್ಲಿ ಡಿ ಕ್ರಾಸ್ ರಸ್ತೆಯಲ್ಲಿ ನೂತನ ವಾಣಿಜ್ಯ ಮಳಿಗೆ</p><p>l ₹20 ಲಕ್ಷ ವೆಚ್ದದಲ್ಲಿ ನಗರಸಭೆ ಕಚೇರಿ ಆವರಣದಲ್ಲಿ ಕೊಂಗಾಡಿಯಪ್ಪ ಪುತ್ಥಳಿ ನಿರ್ಮಾಣ </p><p>l ₹30 ಲಕ್ಷ ವೆಚ್ಚದಲ್ಲಿ ನಗರಸಭೆ ಸ್ವತ್ತುಗಳಿಗೆ ತಂತಿ ಬೇಲಿ ಅಳವಡಿಕೆ</p><p>l ₹462.93 ಲಕ್ಷ ವೆಚ್ಚದಲ್ಲಿ ನಗರದಲ್ಲಿ ವಿವಿಧ ರಸ್ತೆ, ಚರಂಡಿ ನಿರ್ಮಾಣ</p><p>l ₹52.36 ಲಕ್ಷ ವೆಚ್ಚದಲ್ಲಿ ಮಳೆನೀರು ಚರಂಡಿ ಮೇಲಿನ ರಸ್ತೆಗಳಿಗೆ ಕಲ್ಲು ಒದಿಕೆ, ಚರಂಡಿ ಕಾಲುವೆಗಳಿಗೆ ಸ್ಲ್ಯಾಬ್ ಅಳವಡಿಕೆ</p><p>l ₹ 25 ಲಕ್ಷದಲ್ಲಿ ಬೀದಿದೀಪ ಅಳವಡಿಕೆ</p><p>ಐದು ಕಲ್ಯಾಣಿ ಜೀರ್ಣೋದ್ಧಾರ</p><p>ಅಮೃತ 2.0 ಯೋಜನೆಯಡಿ ₹9.15 ಕೋಟಿ ವೆಚ್ಚದಲ್ಲಿ ನಗರದ ₹10ಸಾವಿರ ಸಂಖ್ಯೆ ಕುಡಿಯುವ ನೀರಿನ ಕೊಳಾಯಿ ಸಂಪರ್ಕ ಒದಗಿಸುವ ಕಾಮಗಾರಿ ಕೈಗೊಳ್ಳಲಿದ್ದು, ಮೂರು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ನಗರಸಭೆ ಅಧ್ಯಕ್ಷೆ ತಿಳಿಸಿದರು. ಇದೇ ಯೋಜನೆಯಡಿ ಜಲಮೂಲ ಅಭಿವೃದ್ಧಿಗೆ ನಗರ ವ್ಯಾಪ್ತಿಯ ₹3.20 ಕೋಟಿ ವೆಚ್ಚದಲ್ಲಿ ಐದು ಕಲ್ಯಾಣಿಗಳ ಜೀರ್ಣೋದ್ಧಾರ.</p> .<h3>ನೀರಸ, ನಾಮ್ ಕಾ ವಾಸ್ತೆ ಬಜೆಟ್</h3><p>ಬಜೆಟ್ ಕುರಿತು ಸಭೆಯಲ್ಲಿ ಮಾತನಾಡಿದ ಸದಸ್ಯ ಡಿ.ಎಂ.ಆನಂದ್, ರಸ್ತೆ ವಿಸ್ತರಣೆ, ಪ್ಲಾಸ್ಟಿಕ್ ಮುಕ್ತ ನಗರ ಎಂದು ಬಜಟ್ನಲ್ಲಿ ಹಣ ಮೀಸಲಿರಿಸಲಾಗುತ್ತಿದೆಯೇ ಹೊರತು ಯಾವುದೇ ಅನುಷ್ಟಾನವಾಗುತ್ತಿಲ್ಲ. ಈ ಬಗ್ಗೆ ಗಂಭಿರ ಚಿಂತನೆ ಅಗತ್ಯವಾಗಿದೆ. ಬಜೆಟ್ ಬರೀ ನಾಮಕಾವಸ್ತೆಯಾಗಿದ್ದು, ನೀರಸವಾಗಿದೆ ಎಂದು ಟೀಕಿಸಿದರು.</p><p>ಸರ್ಕಾರದ ಅನುದಾನ ನಿರೀಕ್ಷೆ ಮಾಡುತ್ತಾ ಕೂರುವ ಬದಲು ಸ್ಥಳೀಯ ಸಂಪನ್ಮೂ ಹೆಚ್ಚಿಸಲು ಆದ್ಯತೆ ನೀಡಬೇಕು. ಕಂದಾಯ ವಸೂಲಾತಿ, ವಾಣಿಜ್ಯ ಮಳಿಗೆಗಳ ತೆರಿಗೆಗಳನ್ನು ಸಮರ್ಪಕವಾಗಿ ವಸೂಲಿ ಮಾಡಬೇಕು. ನಗರೋತ್ಥಾನದಲ್ಲಿ ಕಾಮಗಾರಿಗಳು ಬಿರುಸಾಗಬೇಕಿದೆ ಎಂದು ಸದಸ್ಯರಾದ ಎಚ್.ಎಸ್.ಶಿವಶಂಕರ್, ಎಂ.ಮಲ್ಲೇಶ್ ಸಲಹೆ ನೀಡಿದರು.</p><p>ನಗರದ ಅಭಿವೃದ್ದಿಗೆ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಕೈಜೋಡಿಸಬೇಕು, ಬೆಳೆಯುತ್ತಿರುವ ನಗರಕ್ಕೆ ಪೂರಕವಾಗಿ ಬಜೆಟ್ನ ರೂಪು ರೇಷೆಗಳು ಸಿದ್ದವಾಗಬೇಕಿವೆ ಎಂದು ಮತ್ತೊಬ್ಬ ಸದಸ್ಯ ಎಂ.ಜಿ.ಶ್ರೀನಿವಾಸ್ ಹೇಳಿದರು. ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ಬಜೆಟ್ ವಾಸ್ತವಕ್ಕೆ ಹತ್ತಿರವಿರಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕಿದ್ದು, ನಿರೀಕ್ಷೆ ಮುಟ್ಟಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ:</strong> ಮಳೆ ನೀರು ಕೊಯ್ಲು ವ್ಯವಸ್ಥೆಗೆ ಪ್ರೋತ್ಸಾಹ ಧನ, ಕುಡಿಯುವ ನೀರಿಗೆ ಆದ್ಯತೆ, ಭೋಜನ ಕುಟೀರ ನಿರ್ಮಾಣ, ರಸ್ತೆ ದುರಸ್ತಿ, ರಸ್ತೆ ವಿಸ್ತರಣೆ, ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಜತೆಗೆ ಉಳಿತಾಯಕ್ಕೂ ಆದ್ಯತೆ ನೀಡುವ ಮೂಲಕ ಈ ಬಾರಿ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್ ಹೇಳಿದರು.</p>.<p>ನಗರಸಭೆಯಲ್ಲಿ ಬುಧವಾರ ನಡೆದ 2024-25ನೇ ಸಾಲಿನ ಆಯ-ವ್ಯಯದ ವಿಶೇಷ ಸಭೆಯಲ್ಲಿ ಬಜೆಟ್ ಮಂಡಿಸಿದ ಅವರು, 2024-25ನೇ ಸಾಲಿನ ಪ್ರಾರಂಭಿಕ ಉಳಿತಾಯ ₹12.25 ಕೋಟಿ, ವಿವಿಧ ಮೂಲಗಳ ವರಮಾನ ₹54.96 ಕೋಟಿ ಸೇರಿದಂತೆ ಒಟ್ಟು ₹67.21ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ ₹65.66 ಕೋಟಿ ಖರ್ಚಾಗುವುದಂತೆ ಅಂದಾಜಿಸಲಾಗಿದೆ. ಹಾಗಾಗಿ ಇದು ₹1.55 ಕೋಟಿ ಉಳಿತಾಯ ಬಜೆಟ್ ಆಗಿದೆ ಎಂದು ತಿಳಿಸಿದರು.</p>.<p>₹5.60 ಕೋಟಿ ವೆಚ್ಚದಲ್ಲಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲು ಉದ್ದೇಶಲಾಗಿದೆ ಎಂದು ತಿಳಿಸಿದರು.</p>.<p>ಮುಖ್ಯಮಂತ್ರಿ ನಗರೋತ್ಥಾನ ಹಂತ-4ರ ಯೋಜನೆಯಡಿ ದೊಡ್ಡಬಳ್ಳಾಪುರ ನಗರಸಭೆಗೆ ₹30 ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದೆ. ನಗರದ ಮಳೆ ನೀರು ಚರಂಡಿ ಮೂಲಕ ಕೆರೆ ಸೇರಿವುದನ್ನು ತಪ್ಪಿಸಲು ₹3ಕೋಟಿ ವೆಚ್ಚದಲ್ಲಿ ಪ್ರತಿಬಂಧಕ ಹಾಗೂ ತಿರುವು ನಿರ್ಮಾಣಗೊಳಿಸಲಾಗುವುದು. ಇದನ್ನು ಯುಐಡಿಎಫ್ಸಿ ಸಂಸ್ಥೆ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.</p>.<p>ರಾಜ್ಯ ಸರ್ಕಾರದ ಎಸ್ಎಫ್ಸಿ ವಿಶೇಷ ಅನುದಾನದಡಿ ₹36.72 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೊಳಿಸಲಾಗುವುದು. ನಗರದ ಮುಖ್ಯ ವೃತ್ತಗಳಲ್ಲಿ ಜನದಟ್ಟಣಿ ಪ್ರದೇಶಗಳಲ್ಲಿ ₹20 ಲಕ್ಷ ವೆಚ್ಚದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.</p>.<p>ನಗರದ ಪ್ರಮುಖ ರಸ್ತೆಗಳ ವಿಸ್ತರಣೆಗಾಗಿ ಸದರಿ ಸಾಲಿನಲ್ಲಿ ಯೋಜನಾ ವರದಿ ತಯಾರಿಸಿ ಹಂತ ಹಂತವಾಗಿ ಯೋಜನೆ ಕೈಗೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.</p>.<p>ನಗರಸಭೆ ಉಪಾಧ್ಯಕ್ಷೆ ಫರ್ಹಾನಾ ತಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್,ಪೌರಾಯುಕ್ತ ಕೆ.ಪರಮೇಶ್, ಲೆಕ್ಕಾಧಿಕಾರಿ ಎನ್.ನಂದೀಶ್ ಇದ್ದರು.</p>.<h3>ಬಜೆಟ್ ಮುಖ್ಯಾಂಶಗಳು</h3><p>l ₹1 ಕೋಟಿ ವೆಚ್ಚದಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ನೂತನ ಮಳಿಗೆ, ಗಳ ನಿರ್ಮಾಣ</p><p>l ₹98.20 ಲಕ್ಷ ವೆಚ್ಚದಲ್ಲಿ ಡಿ ಕ್ರಾಸ್ ರಸ್ತೆಯಲ್ಲಿ ನೂತನ ವಾಣಿಜ್ಯ ಮಳಿಗೆ</p><p>l ₹20 ಲಕ್ಷ ವೆಚ್ದದಲ್ಲಿ ನಗರಸಭೆ ಕಚೇರಿ ಆವರಣದಲ್ಲಿ ಕೊಂಗಾಡಿಯಪ್ಪ ಪುತ್ಥಳಿ ನಿರ್ಮಾಣ </p><p>l ₹30 ಲಕ್ಷ ವೆಚ್ಚದಲ್ಲಿ ನಗರಸಭೆ ಸ್ವತ್ತುಗಳಿಗೆ ತಂತಿ ಬೇಲಿ ಅಳವಡಿಕೆ</p><p>l ₹462.93 ಲಕ್ಷ ವೆಚ್ಚದಲ್ಲಿ ನಗರದಲ್ಲಿ ವಿವಿಧ ರಸ್ತೆ, ಚರಂಡಿ ನಿರ್ಮಾಣ</p><p>l ₹52.36 ಲಕ್ಷ ವೆಚ್ಚದಲ್ಲಿ ಮಳೆನೀರು ಚರಂಡಿ ಮೇಲಿನ ರಸ್ತೆಗಳಿಗೆ ಕಲ್ಲು ಒದಿಕೆ, ಚರಂಡಿ ಕಾಲುವೆಗಳಿಗೆ ಸ್ಲ್ಯಾಬ್ ಅಳವಡಿಕೆ</p><p>l ₹ 25 ಲಕ್ಷದಲ್ಲಿ ಬೀದಿದೀಪ ಅಳವಡಿಕೆ</p><p>ಐದು ಕಲ್ಯಾಣಿ ಜೀರ್ಣೋದ್ಧಾರ</p><p>ಅಮೃತ 2.0 ಯೋಜನೆಯಡಿ ₹9.15 ಕೋಟಿ ವೆಚ್ಚದಲ್ಲಿ ನಗರದ ₹10ಸಾವಿರ ಸಂಖ್ಯೆ ಕುಡಿಯುವ ನೀರಿನ ಕೊಳಾಯಿ ಸಂಪರ್ಕ ಒದಗಿಸುವ ಕಾಮಗಾರಿ ಕೈಗೊಳ್ಳಲಿದ್ದು, ಮೂರು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ನಗರಸಭೆ ಅಧ್ಯಕ್ಷೆ ತಿಳಿಸಿದರು. ಇದೇ ಯೋಜನೆಯಡಿ ಜಲಮೂಲ ಅಭಿವೃದ್ಧಿಗೆ ನಗರ ವ್ಯಾಪ್ತಿಯ ₹3.20 ಕೋಟಿ ವೆಚ್ಚದಲ್ಲಿ ಐದು ಕಲ್ಯಾಣಿಗಳ ಜೀರ್ಣೋದ್ಧಾರ.</p> .<h3>ನೀರಸ, ನಾಮ್ ಕಾ ವಾಸ್ತೆ ಬಜೆಟ್</h3><p>ಬಜೆಟ್ ಕುರಿತು ಸಭೆಯಲ್ಲಿ ಮಾತನಾಡಿದ ಸದಸ್ಯ ಡಿ.ಎಂ.ಆನಂದ್, ರಸ್ತೆ ವಿಸ್ತರಣೆ, ಪ್ಲಾಸ್ಟಿಕ್ ಮುಕ್ತ ನಗರ ಎಂದು ಬಜಟ್ನಲ್ಲಿ ಹಣ ಮೀಸಲಿರಿಸಲಾಗುತ್ತಿದೆಯೇ ಹೊರತು ಯಾವುದೇ ಅನುಷ್ಟಾನವಾಗುತ್ತಿಲ್ಲ. ಈ ಬಗ್ಗೆ ಗಂಭಿರ ಚಿಂತನೆ ಅಗತ್ಯವಾಗಿದೆ. ಬಜೆಟ್ ಬರೀ ನಾಮಕಾವಸ್ತೆಯಾಗಿದ್ದು, ನೀರಸವಾಗಿದೆ ಎಂದು ಟೀಕಿಸಿದರು.</p><p>ಸರ್ಕಾರದ ಅನುದಾನ ನಿರೀಕ್ಷೆ ಮಾಡುತ್ತಾ ಕೂರುವ ಬದಲು ಸ್ಥಳೀಯ ಸಂಪನ್ಮೂ ಹೆಚ್ಚಿಸಲು ಆದ್ಯತೆ ನೀಡಬೇಕು. ಕಂದಾಯ ವಸೂಲಾತಿ, ವಾಣಿಜ್ಯ ಮಳಿಗೆಗಳ ತೆರಿಗೆಗಳನ್ನು ಸಮರ್ಪಕವಾಗಿ ವಸೂಲಿ ಮಾಡಬೇಕು. ನಗರೋತ್ಥಾನದಲ್ಲಿ ಕಾಮಗಾರಿಗಳು ಬಿರುಸಾಗಬೇಕಿದೆ ಎಂದು ಸದಸ್ಯರಾದ ಎಚ್.ಎಸ್.ಶಿವಶಂಕರ್, ಎಂ.ಮಲ್ಲೇಶ್ ಸಲಹೆ ನೀಡಿದರು.</p><p>ನಗರದ ಅಭಿವೃದ್ದಿಗೆ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಕೈಜೋಡಿಸಬೇಕು, ಬೆಳೆಯುತ್ತಿರುವ ನಗರಕ್ಕೆ ಪೂರಕವಾಗಿ ಬಜೆಟ್ನ ರೂಪು ರೇಷೆಗಳು ಸಿದ್ದವಾಗಬೇಕಿವೆ ಎಂದು ಮತ್ತೊಬ್ಬ ಸದಸ್ಯ ಎಂ.ಜಿ.ಶ್ರೀನಿವಾಸ್ ಹೇಳಿದರು. ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ಬಜೆಟ್ ವಾಸ್ತವಕ್ಕೆ ಹತ್ತಿರವಿರಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕಿದ್ದು, ನಿರೀಕ್ಷೆ ಮುಟ್ಟಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>