ದೊಡ್ಡಬಳ್ಳಾಪುರ: ನಗರದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿನ ಕಾವೇರಿ-2 ತಂತ್ರಾಂಶದಲ್ಲಿ ಮತ್ತೆ ತಾಂತ್ರಿಕ ದೋಷ ಉಂಟಾಗಿದ್ದು, ನಾಲ್ಕು ದಿನಗಳಿಂದಲೂ ನಿವೇಶನ, ಜಮೀನು, ವಿವಾಹ ನೋಂದಣಿ ಸೇರಿದಂತೆ ಯಾವುದೂ ಸಹ ನಿಗದಿತ ಸಮಯಕ್ಕೆ ನೋಂದಣಿಯಾಗದೆ ನೋಂದಣಿ ಕಚೇರಿಯಲ್ಲಿ ದಿನಗಟ್ಟಲೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.