<p><strong>ದೊಡ್ಡಬಳ್ಳಾಪುರ: </strong>ಹಳೇ ಮಧುಗಿರಿ ರಸ್ತೆಯ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಕೆ.ಪರಮೇಶ, ನಗರಸಭೆ ಸದಸ್ಯ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ನಗರಸಭೆ ಪರಿಸರ ವಿಭಾಗದ ಎಂಜಿನಿಯರ್ ಈರಣ್ಣ ಮಂಗಳವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.</p>.<p>ನಗರಸಭೆ ವ್ಯಾಪ್ತಿಯ ಮುತ್ತೂರಿನ ಸರ್ವೇ ನಂಬರ್ 41 ಮತ್ತು 42ರ ಶ್ರೀನಗರ ಮೂಲಕ ಹಾದು ಹೋಗುತ್ತಿದ್ದ ಹಳೆ ಮಧುಗಿರಿ ರಸ್ತೆ ಈಗ ತನ್ನ ಸ್ವರೂಪವನ್ನು ಕಳೆದುಕೊಂಡಿದೆ. ಈ ರಸ್ತೆಗೆ ಬದಲಾಗಿ ದಶಕಗಳಷ್ಟು ಹಿಂದೆಯೇ ಬೇರೆ ರಸ್ತೆ ನಿರ್ಮಾಣವಾಗಿದೆ. ಆದರೆ ರಸ್ತೆಯ ಸ್ಥಳ ಮಾತ್ರ ಇಂದಿಗೂ ಹಾಗೆಯೇ ಉಳಿದಿದೆ. ಈ ಸ್ಥಳದಲ್ಲಿ ನಗರಸಭೆ ವತಿಯಿಂದ ಉದ್ಯಾನವ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.</p>.<p>ಅತ್ಯಂತ ಆಯಕಟ್ಟಿನ ಜನವಸತಿ ಸ್ಥಳದಲ್ಲಿರುವ ರಸ್ತೆಯ ಖಾಲಿ ಜಾಗವನ್ನು ಬಲಾಡ್ಯರು ಕಬಳಿಸಲು ಹುನ್ನಾರ ನಡೆಸಿದ್ದಾರೆ. ಉದ್ಯಾನ ನಿರ್ಮಿಸುವಂತೆ ಈ ಹಿಂದೆ ಸಾಕಷ್ಟು ಬಾರಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಯಾವ ಪ್ರಯೋಜನೆ ಆಗಿಲ್ಲ ಎಂದು ಹೇಳಿದರು.</p>.<p>ಹಳೇ ಮಧುಗಿರಿ ರಸ್ತೆಯ ಸುತ್ತಮುತ್ತಲು ದೊಡ್ಡ ಪ್ರಮಾಣದಲ್ಲಿ ಜನವಸತಿ ಪ್ರದೇಶ ಬೆಳೆದಿದೆ. ಆದರೆ ಈ ಭಾಗದಲ್ಲಿ ಎಲ್ಲೂ ಸಹ ಒಂದೂ ಸಾರ್ವಜನಿಕ ಉದ್ಯಾನ ಇಲ್ಲದಾಗಿದೆ. ಹೀಗಾಗಿ ಉಳ್ಳವರು ಈ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳುವ ಮುನ್ನ ನಗರಸಭೆ ವತಿಯಿಂದ ಪಾರ್ಕ್ ನಿರ್ಮಿಸಬೇಕು ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ: </strong>ಹಳೇ ಮಧುಗಿರಿ ರಸ್ತೆಯ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಕೆ.ಪರಮೇಶ, ನಗರಸಭೆ ಸದಸ್ಯ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ನಗರಸಭೆ ಪರಿಸರ ವಿಭಾಗದ ಎಂಜಿನಿಯರ್ ಈರಣ್ಣ ಮಂಗಳವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.</p>.<p>ನಗರಸಭೆ ವ್ಯಾಪ್ತಿಯ ಮುತ್ತೂರಿನ ಸರ್ವೇ ನಂಬರ್ 41 ಮತ್ತು 42ರ ಶ್ರೀನಗರ ಮೂಲಕ ಹಾದು ಹೋಗುತ್ತಿದ್ದ ಹಳೆ ಮಧುಗಿರಿ ರಸ್ತೆ ಈಗ ತನ್ನ ಸ್ವರೂಪವನ್ನು ಕಳೆದುಕೊಂಡಿದೆ. ಈ ರಸ್ತೆಗೆ ಬದಲಾಗಿ ದಶಕಗಳಷ್ಟು ಹಿಂದೆಯೇ ಬೇರೆ ರಸ್ತೆ ನಿರ್ಮಾಣವಾಗಿದೆ. ಆದರೆ ರಸ್ತೆಯ ಸ್ಥಳ ಮಾತ್ರ ಇಂದಿಗೂ ಹಾಗೆಯೇ ಉಳಿದಿದೆ. ಈ ಸ್ಥಳದಲ್ಲಿ ನಗರಸಭೆ ವತಿಯಿಂದ ಉದ್ಯಾನವ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.</p>.<p>ಅತ್ಯಂತ ಆಯಕಟ್ಟಿನ ಜನವಸತಿ ಸ್ಥಳದಲ್ಲಿರುವ ರಸ್ತೆಯ ಖಾಲಿ ಜಾಗವನ್ನು ಬಲಾಡ್ಯರು ಕಬಳಿಸಲು ಹುನ್ನಾರ ನಡೆಸಿದ್ದಾರೆ. ಉದ್ಯಾನ ನಿರ್ಮಿಸುವಂತೆ ಈ ಹಿಂದೆ ಸಾಕಷ್ಟು ಬಾರಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಯಾವ ಪ್ರಯೋಜನೆ ಆಗಿಲ್ಲ ಎಂದು ಹೇಳಿದರು.</p>.<p>ಹಳೇ ಮಧುಗಿರಿ ರಸ್ತೆಯ ಸುತ್ತಮುತ್ತಲು ದೊಡ್ಡ ಪ್ರಮಾಣದಲ್ಲಿ ಜನವಸತಿ ಪ್ರದೇಶ ಬೆಳೆದಿದೆ. ಆದರೆ ಈ ಭಾಗದಲ್ಲಿ ಎಲ್ಲೂ ಸಹ ಒಂದೂ ಸಾರ್ವಜನಿಕ ಉದ್ಯಾನ ಇಲ್ಲದಾಗಿದೆ. ಹೀಗಾಗಿ ಉಳ್ಳವರು ಈ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳುವ ಮುನ್ನ ನಗರಸಭೆ ವತಿಯಿಂದ ಪಾರ್ಕ್ ನಿರ್ಮಿಸಬೇಕು ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>