<p><strong>ವಿಜಯಪುರ(ದೇವನಹಳ್ಳಿ):</strong> ಮಳೆಯ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ನೆಲಗಡಲೆ ಇಳುವರಿ ನೀಡದ ಕಾರಣ ಕಡಲೆಕಾಯಿ ಬೆಲೆ ಕೆ.ಜಿ.ಗೆ ₹120 ಏರಿಕೆಯಾಗಿದೆ.</p>.<p>ಎರಡು ವಾರಗಳ ಹಿಂದೆ ₹40–50 ಇದ್ದ ಕೆ.ಜಿ ಕಡಲೆಕಾಯಿ ಕಳೆದ ಹದಿನೈದು ದಿನಗಳಿಂದ ಏರಿಕೆಯಾಗುತ್ತಲೆ ಇದೆ.</p>.<p>ಸ್ಥಳೀಯ ಮಾರುಕಟ್ಟೆಗೆ ಕಡಲೆಕಾಯಿ ಬರುವುದಕ್ಕೆ ಇನ್ನೂ ತಿಂಗಳು ಕಾಯಬೇಕು. ಹೀಗಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕಾಯಿಯನ್ನು ಸ್ಥಳೀಯ ವ್ಯಾಪಾರಿಗಳು ಖರೀದಿಸಿ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.</p>.<p>ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಮಾಡಿಕೊಳ್ಳೋಣವೆಂದರೆ ಮಳೆ ಇಲ್ಲ. ಹಿಂದೂಪುರಕ್ಕೆ ಹೋಗಿ ಕಡಲೆಕಾಯಿ ಮೂಟೆಗಳನ್ನು ಖರೀದಿಸಿಕೊಂಡು ಬಂದು, ಬಾಡಿಗೆಗೆ ಆಟೊ ತೆಗೆದುಕೊಂಡು, ಹಳ್ಳಿ, ಹಳ್ಳಿಗೆ ಸುತ್ತಿ ಮಾರಾಟ ಮಾಡುತ್ತಿದ್ದೇನೆ. ಒಂದು ಕೆ.ಜಿಗೆ ₹120ಗೆ ಮಾರಾಟ ಮಾಡುತ್ತಿದ್ದೇನೆ. ಮಾರುಕಟ್ಟೆಯಲ್ಲಿ ಖರೀದಿಸಿಕೊಂಡು ಇಲ್ಲಿಗೆ ತರುವಷ್ಟರಲ್ಲಿ ಕೆ.ಜಿ.ಗೆ ₹80 ತಗಲುತ್ತದೆ. ಪೆಟ್ರೋಲ್ ಖರ್ಚು, ಕೂಲಿ, ಊಟ ಎಲ್ಲಾ ಕಳೆದರೆ ಮಾರಾಟ ಮಾಡುತ್ತಿರುವ ಬೆಲೆಯಲ್ಲಿ ಕೆ.ಜಿ.ಗೆ ₹10 ಲಾಭ ಸಿಗುತ್ತದೆ ಎನ್ನುತ್ತಾರೆ ವ್ಯಾಪಾರಿ ನರಸಿಂಹಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ(ದೇವನಹಳ್ಳಿ):</strong> ಮಳೆಯ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ನೆಲಗಡಲೆ ಇಳುವರಿ ನೀಡದ ಕಾರಣ ಕಡಲೆಕಾಯಿ ಬೆಲೆ ಕೆ.ಜಿ.ಗೆ ₹120 ಏರಿಕೆಯಾಗಿದೆ.</p>.<p>ಎರಡು ವಾರಗಳ ಹಿಂದೆ ₹40–50 ಇದ್ದ ಕೆ.ಜಿ ಕಡಲೆಕಾಯಿ ಕಳೆದ ಹದಿನೈದು ದಿನಗಳಿಂದ ಏರಿಕೆಯಾಗುತ್ತಲೆ ಇದೆ.</p>.<p>ಸ್ಥಳೀಯ ಮಾರುಕಟ್ಟೆಗೆ ಕಡಲೆಕಾಯಿ ಬರುವುದಕ್ಕೆ ಇನ್ನೂ ತಿಂಗಳು ಕಾಯಬೇಕು. ಹೀಗಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕಾಯಿಯನ್ನು ಸ್ಥಳೀಯ ವ್ಯಾಪಾರಿಗಳು ಖರೀದಿಸಿ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.</p>.<p>ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಮಾಡಿಕೊಳ್ಳೋಣವೆಂದರೆ ಮಳೆ ಇಲ್ಲ. ಹಿಂದೂಪುರಕ್ಕೆ ಹೋಗಿ ಕಡಲೆಕಾಯಿ ಮೂಟೆಗಳನ್ನು ಖರೀದಿಸಿಕೊಂಡು ಬಂದು, ಬಾಡಿಗೆಗೆ ಆಟೊ ತೆಗೆದುಕೊಂಡು, ಹಳ್ಳಿ, ಹಳ್ಳಿಗೆ ಸುತ್ತಿ ಮಾರಾಟ ಮಾಡುತ್ತಿದ್ದೇನೆ. ಒಂದು ಕೆ.ಜಿಗೆ ₹120ಗೆ ಮಾರಾಟ ಮಾಡುತ್ತಿದ್ದೇನೆ. ಮಾರುಕಟ್ಟೆಯಲ್ಲಿ ಖರೀದಿಸಿಕೊಂಡು ಇಲ್ಲಿಗೆ ತರುವಷ್ಟರಲ್ಲಿ ಕೆ.ಜಿ.ಗೆ ₹80 ತಗಲುತ್ತದೆ. ಪೆಟ್ರೋಲ್ ಖರ್ಚು, ಕೂಲಿ, ಊಟ ಎಲ್ಲಾ ಕಳೆದರೆ ಮಾರಾಟ ಮಾಡುತ್ತಿರುವ ಬೆಲೆಯಲ್ಲಿ ಕೆ.ಜಿ.ಗೆ ₹10 ಲಾಭ ಸಿಗುತ್ತದೆ ಎನ್ನುತ್ತಾರೆ ವ್ಯಾಪಾರಿ ನರಸಿಂಹಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>