ಕೃಷಿ, ಕೈಗಾರಿಕೆ, ಶಿಕ್ಷಣ ಬಿಕ್ಕಟ್ಟಿನಲ್ಲಿದೆ. ನೀತಿಯಲ್ಲಿ ಬದಲಾವಣೆ ತಂದರೆ ಎರಡು ವರ್ಷಗಳಲ್ಲಿ ಬದಲಾವಣೆ ಕಾಣಬಹುದು. ಸಂವಿಧಾನ ರಕ್ಷಿಸಿ, ಉಳಿಸಿಕೊಂಡು ಅನುಷ್ಠಾನಗೊಳಿಸಬೇಕು. ಸುಪ್ರೀಂಕೋರ್ಟ್ ನೀಡುವ ತೀರ್ಮಾನ ಪ್ರಜಾಪ್ರಭುತ್ವ, ಜಾತ್ಯತೀತ, ಸಾಮಾಜಿಕ ನ್ಯಾಯದಂತಿರಬೇಕು. ನಿತ್ಯ ಜೀವನದಲ್ಲಿ ಸಂವಿಧಾನ ಜಾರಿಗೊಳಿಸಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಸಂವಿಧಾನದ ಶಿಷ್ಠಾಚಾರ ಉಲ್ಲಂಘನೆಯಾಗುತ್ತಿದೆ. ಕೋರ್ಟ್ಗಳು ತಮಗೆ ಇಷ್ಟ ಬಂದ ತೀರ್ಮಾನ ನೀಡಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂವಿಧಾನದಲ್ಲಿ ತಿಳಿಸಿರುವಂತೆ ಜನಕಲ್ಯಾಣ ಮಾಡುವ ಬದಲು ಸ್ವೇಚ್ಛಾಚಾರದಲ್ಲಿ ಮುಳಗಿವೆ ಎಂದು ಅವರು ಅವರುಟೀಕಿಸಿದರು.