<p><strong>ದೇವನಹಳ್ಳಿ</strong>: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಸ್ವಾಧೀನಗೊಳ್ಳಿಸುತ್ತಿರುವುದನ್ನು ವಿರೋಧಿಸಿ ಶುಕ್ರವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು.</p>.<p>ಕಳೆದ 858 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರು ಸರ್ಕಾರವೂ ಹ್ಯಾಡಾಳ ಮತ್ತು ಗೋಖರೆ ಬಚ್ಚಹಳ್ಳಿ ಗ್ರಾಮದ ಕೃಷಿ ಭೂಮಿಯನ್ನು ನೋಟಿಫಿಕೇಶನ್ ಮಾಡಿರುವುದನ್ನು ವಿರೋಧಿಸಿ ಇಲ್ಲಿನ ರೈತರು ಪಂಜಿನ ಮೆರವಣಿಗೆ ನಡೆಸಿದರು.</p>.<p>ಕಾರ್ಪೋರೆಟ್ ಕಂಪನಿಗಳಿಗೆ ಫಲವತ್ತಾದ ಕೃಷಿ ಭೂಮಿ ನೀಡಿದರೆ ಅನ್ನದಾರು ಇಂದು ಹಚ್ಚಿರುವ ಬೆಂಕಿಯಲ್ಲಿ ಸುಟ್ಟು ಹೋಗಬೇಕಾಗುತ್ತದೆ ಎಂದು ಹೋರಾಟ ನಿರತರು ಎಚ್ಚರಿಕೆ ನೀಡಿದರು.</p>.<p>ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆಗಸ್ಟ್ 9ರಂದು ನಡೆದ ಕ್ವಿಟ್ ಇಂಡಿಯಾ ಚಳವಳಿಯೇ ಈ ಮೆರವಣಿಗೆಗೆ ಸ್ಫೂರ್ತಿಯಾಗಿದ್ದು, ಅನ್ನ ನೀಡುವ ಭೂಮಿಯನ್ನು ಕಸಿಯಲು ಬಂದವರು ಇದೇ ಭೂಮಿಯ ಒಡಲು ಸೇರಬೇಕಾಗುತ್ತದೆ ಎಂದು ರೈತರು ತಿಳಿಸಿದರು.</p>.<p>ಇಲ್ಲಿನ ಒಂದು ಕಲ್ಲು ಅಲುಗಾಡಿಸಲು ಮುಂದಾದರೂ, ಅವರೆಲ್ಲಾ ಭೂ ತಾಯಿಯ ಒಡಲನ್ನು ಸೇರಬೇಕಾಗುತ್ತದೆ. ನಮ್ಮ ಪ್ರಾಣದ ಜೊತೆಗೆ ಅವರ ಪ್ರಾಣವನ್ನು ತೆಗೆದುಕೊಂಡು ರಕ್ತದಿಂದ ತಾಯಿಗೆ ಅಭಿಷೇಕ ಮಾಡಿ ಭೂಮಿಯನ್ನು ಪವಿತ್ರ ಮಾಡುತ್ತೇವೆ ಎಂದು ಮೆರವಣಿಗೆಯಲ್ಲಿ ಅನ್ನದಾತರು ಆಕ್ರೋಶ ಹೊರಹಾಕಿದರು.</p>.<p>ಸುದೀರ್ಘ ಹೋರಾಟವನ್ನು ಅಲ್ಲೆಗೆಲ್ಲೆಯುವ ಆಳುವ ವರ್ಗಕ್ಕೆ ರೈತರ ತಾಳ್ಮೆಯ ಕಟ್ಟೆ ಹೊಡೆದು ಹೋದರೆ ಏನು ಆಗುತ್ತದೆ ಎಂಬುದನ್ನು ಇತಿಹಾಸವೇ ತಿಳಿಸಿದೆ. ಇದನ್ನು ಅರಿತು ಭೂ ಸ್ವಾಧೀನಗೊಂಡಿರುವ ಭೂಮಿಯನ್ನು ಕೈಬಿಡಬೇಕು ಒಂದು ಹಕ್ಕೋತ್ತಾಯ ಮಾಡಿದರು.</p>.<p>ಇದೇ ವೇಳೆ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು, ಹ್ಯಾಡಾಳ, ಗೋಖರೆ ಬಚ್ಚಹಳ್ಳಿಯ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ</strong>: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಸ್ವಾಧೀನಗೊಳ್ಳಿಸುತ್ತಿರುವುದನ್ನು ವಿರೋಧಿಸಿ ಶುಕ್ರವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು.</p>.<p>ಕಳೆದ 858 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರು ಸರ್ಕಾರವೂ ಹ್ಯಾಡಾಳ ಮತ್ತು ಗೋಖರೆ ಬಚ್ಚಹಳ್ಳಿ ಗ್ರಾಮದ ಕೃಷಿ ಭೂಮಿಯನ್ನು ನೋಟಿಫಿಕೇಶನ್ ಮಾಡಿರುವುದನ್ನು ವಿರೋಧಿಸಿ ಇಲ್ಲಿನ ರೈತರು ಪಂಜಿನ ಮೆರವಣಿಗೆ ನಡೆಸಿದರು.</p>.<p>ಕಾರ್ಪೋರೆಟ್ ಕಂಪನಿಗಳಿಗೆ ಫಲವತ್ತಾದ ಕೃಷಿ ಭೂಮಿ ನೀಡಿದರೆ ಅನ್ನದಾರು ಇಂದು ಹಚ್ಚಿರುವ ಬೆಂಕಿಯಲ್ಲಿ ಸುಟ್ಟು ಹೋಗಬೇಕಾಗುತ್ತದೆ ಎಂದು ಹೋರಾಟ ನಿರತರು ಎಚ್ಚರಿಕೆ ನೀಡಿದರು.</p>.<p>ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆಗಸ್ಟ್ 9ರಂದು ನಡೆದ ಕ್ವಿಟ್ ಇಂಡಿಯಾ ಚಳವಳಿಯೇ ಈ ಮೆರವಣಿಗೆಗೆ ಸ್ಫೂರ್ತಿಯಾಗಿದ್ದು, ಅನ್ನ ನೀಡುವ ಭೂಮಿಯನ್ನು ಕಸಿಯಲು ಬಂದವರು ಇದೇ ಭೂಮಿಯ ಒಡಲು ಸೇರಬೇಕಾಗುತ್ತದೆ ಎಂದು ರೈತರು ತಿಳಿಸಿದರು.</p>.<p>ಇಲ್ಲಿನ ಒಂದು ಕಲ್ಲು ಅಲುಗಾಡಿಸಲು ಮುಂದಾದರೂ, ಅವರೆಲ್ಲಾ ಭೂ ತಾಯಿಯ ಒಡಲನ್ನು ಸೇರಬೇಕಾಗುತ್ತದೆ. ನಮ್ಮ ಪ್ರಾಣದ ಜೊತೆಗೆ ಅವರ ಪ್ರಾಣವನ್ನು ತೆಗೆದುಕೊಂಡು ರಕ್ತದಿಂದ ತಾಯಿಗೆ ಅಭಿಷೇಕ ಮಾಡಿ ಭೂಮಿಯನ್ನು ಪವಿತ್ರ ಮಾಡುತ್ತೇವೆ ಎಂದು ಮೆರವಣಿಗೆಯಲ್ಲಿ ಅನ್ನದಾತರು ಆಕ್ರೋಶ ಹೊರಹಾಕಿದರು.</p>.<p>ಸುದೀರ್ಘ ಹೋರಾಟವನ್ನು ಅಲ್ಲೆಗೆಲ್ಲೆಯುವ ಆಳುವ ವರ್ಗಕ್ಕೆ ರೈತರ ತಾಳ್ಮೆಯ ಕಟ್ಟೆ ಹೊಡೆದು ಹೋದರೆ ಏನು ಆಗುತ್ತದೆ ಎಂಬುದನ್ನು ಇತಿಹಾಸವೇ ತಿಳಿಸಿದೆ. ಇದನ್ನು ಅರಿತು ಭೂ ಸ್ವಾಧೀನಗೊಂಡಿರುವ ಭೂಮಿಯನ್ನು ಕೈಬಿಡಬೇಕು ಒಂದು ಹಕ್ಕೋತ್ತಾಯ ಮಾಡಿದರು.</p>.<p>ಇದೇ ವೇಳೆ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು, ಹ್ಯಾಡಾಳ, ಗೋಖರೆ ಬಚ್ಚಹಳ್ಳಿಯ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>