ದೊಡ್ಡಬಳ್ಳಾಪುರ: ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕೈಗಾರಿಕೆಗಳು ರಾತ್ರಿ ವೇಳೆ ತ್ಯಾಜ್ಯವನ್ನು ತಂದು ಗ್ರಾಮದ ಸುತ್ತಲಿನ ಗೋಮಾಳ ಹಾಗೂ ಹಳ್ಳದ ಸಾಲುಗಳಲ್ಲಿ ರಾಶಿ ಹಾಕಿ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಹೊರ ಬರುವ ಘಾಟುಯುಕ್ತ ಹೊಗೆಯಿಂದಾಗಿ ಮಕ್ಕಳು, ವೃದ್ಧರು ಉಸಿರಾಟದ ತೊಂದರೆಗಳಿಂದ ಮನೆಗಳಲ್ಲಿ ಮಲಗುವುದೇ ಕಷ್ಟವಾಗಿದೆ ಎಂದು ಬಿಸುವನಹಳ್ಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.