ಪಿತೃ ಪಕ್ಷ ಆರಂಭದ ನಂತರ ಶುಭ ಸಮಾರಂಭಗಳು ನಡೆಯದ ಕಾರಣ ಹೂ ಬೇಡಿಕೆ ಕಡಿಮೆಯಾಗಿದೆ. ಬರುವ ಅಮಾವಾಸ್ಯೆ ನಂತರ ಹೂವಿಗೆ ಬೇಡಿಕೆ ಬರಲಿದೆ. ಮತ್ತೆ ನವರಾತ್ರಿ ಹಬ್ಬ ಶುರುವಾದರೆ ಹೂವಿನ ದರ ಉತ್ತಮವಾಗಿರಲಿದೆ.
ಮಂಜುನಾಥ್, ಹೂವಿನ ವ್ಯಾಪಾರಿ
ಎರಡು ಎಕರೆ ಜಮೀನಿಗೆ ಸೇವಂತಿ ಹೂ ಬೆಳೆದಿದ್ದೇವೆ. ಬೆಳೆಗೆ ಲಕ್ಷಾಂತರ ಬಂಡವಾಳ ಹೂಡಿದ್ದೇನೆ. ಈಗ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಭಾರೀ ಕುಸಿತವಾಗಿದೆ. ಹೂ ಬಿಡಿಸಿದ ಕೂಲಿ ಹಣವೂ ಕೈಗೆ ಸಿಗುತ್ತಿಲ್ಲ. ಹೆಚ್ಚು ನಷ್ಟವಾಗಿದೆ.
ಕೇಶವಣ್ಣ ಧರ್ಮಪುರ, ಹೂ ಬೆಳೆಗಾರ
ವಿಜಯಪುರ ಟೌನ್ನಲ್ಲಿ ಹೂ ಮಾರಾಟ ಮಾಡುತ್ತಿರುವ ಮಹಿಳೆ
ಹೂ ಕೀಳಲು ಹಿಂದೇಟು
ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕುಸಿತ ಕಂಡಿರುವುದರಿಂದ ರೈತರು ತೋಟಗಳಲ್ಲಿ ಹೂ ಬಿಡಿಸಲು ಮುಂದಾಗುತ್ತಿಲ್ಲ. ಹೂ ಬಿಡಿಸಿದ ಕೂಲಿ ಸಾಗಾಟದ ಖರ್ಚು ಔಷಧ ರಸಗೊಬ್ಬರಕ್ಕೂ ಹಣ ಬಾರದೇ ಇರುವುದರಿಂದ ರೈತರು ತೋಟದಲ್ಲಿನ ಹೂವು ಕೀಳಲು ಹಿಂದೇಟು ಹಾಕುತ್ತಿದ್ದಾರೆ.