ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಆನೇಕಲ್ | ಚರಂಡಿಯಂತಾದ ಜೀವನಾಡಿ: ಹೊಸಹಳ್ಳಿ ಕೆರೆ ಅಸ್ತಿತ್ವಕ್ಕೆ ಕುತ್ತು

Published : 15 ಜುಲೈ 2024, 4:40 IST
Last Updated : 15 ಜುಲೈ 2024, 4:40 IST
ಫಾಲೋ ಮಾಡಿ
Comments
ಹೊಸಹಳ್ಳಿ ಕೆರೆಯ ಪಕ್ಕದಲ್ಲಿಯೇ ಬಿದ್ದಿರುವ ಕಸದ ರಾಶಿ
ಹೊಸಹಳ್ಳಿ ಕೆರೆಯ ಪಕ್ಕದಲ್ಲಿಯೇ ಬಿದ್ದಿರುವ ಕಸದ ರಾಶಿ
ರಾಜಕಾಲುವೆಗಳನ್ನು ತ್ಯಾಜ್ಯ ನೀರು ಹರಿಯುತ್ತಿರುವುದು
ರಾಜಕಾಲುವೆಗಳನ್ನು ತ್ಯಾಜ್ಯ ನೀರು ಹರಿಯುತ್ತಿರುವುದು
ಹೊಸಹಳ್ಳಿ ಕೆರೆ ಕಲುಷಿತವಾಗಿದ್ದು ಗಬ್ಬುನಾರುತ್ತಿರುವುದರಿಂದ ಹೊಸಹಳ್ಳಿ ಕೆರೆಯ ಏರಿಯ ಮೇಲೆ ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಲು ಶೀಘ್ರ ಕ್ರಮ ವಹಿಸಬೇಕು
ದಿಲೀಪ್‌ ಹೆನ್ನಾಗರ ನಿವಾಸಿ
ಹೊಸಹಳ್ಳಿ ಕೆರೆಗೆ ವಿವಿಧ ಕಾರ್ಖಾನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಂದ ತ್ಯಾಜ್ಯ ನೀರು ಹರಿಯುತ್ತಿದೆ. ಈ ಸಂಬಂಧ ಪಂಚಾಯಿತಿಯಿಂದ ತ್ಯಾಜ್ಯ ನೀರು ಹರಿಸುತ್ತಿರುವ ಕಾರ್ಖಾನೆಗಳಿಗೆ ನೊಟೀಸ್‌ ನೀಡಲಾಗಿದೆ
ಸಿದ್ದರಾಜು ಪಿಡಿಓ
ಕೆರೆ ಅಂಗಳದಲ್ಲಿ ತ್ಯಾಜ್ಯ
ಹಾಳಾಗಿರುವ ಕೆರೆಯ ಅಂದವನ್ನು ಮತ್ತಷ್ಟು ಹಾಳು ಮಾಡಲು ಕಾದಿರುವ ಜನರು ಸುತ್ತಮುತ್ತಲಿನ ಕಸವನ್ನು ತಂದು ಕೆರೆಯ ಏರಿಯ ಮೇಲೆ ಹಾಕುತ್ತಿದ್ದಾರೆ. ಕಟ್ಟಡ ತ್ಯಾಜ್ಯವನ್ನು ಕೆರೆಯ ಅಂಗಳದಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಕೆರೆಯು ಸಂಪೂರ್ಣ ಮಾಲಿನ್ಯಗೊಂಡಿದ್ದು ಜನರಿಗೆ ಶಾಪವಾಗಿದೆ. ರಾಜಕಾಲುವೆಗಳಲ್ಲಿ ಮಳೆಯ ನೀರು ಹರಿಯುವ ಬದಲಿಗೆ ಚರಂಡಿ ನೀರು ಹರಿಯುತ್ತಿದೆ. ಈ ಚರಂಡಿ ನೀರು ಕೆರೆ ಸೇರುತ್ತಿದ್ದು ಕೆರೆ ತುಂಬುತ್ತಿದೆ. ಆದರೆ ತುಂಬಿದ ಕೆರೆಯಿಂದ ಜನರಿಗಾಗಲಿ ಪರಿಸರಕ್ಕಾಗಲಿ ಯಾವುದೇ ಉಪಯೋಗವಿಲ್ಲ. ಬದಲಿಗೆ ಜನರು ಪರಿತಪಿಸುವಂತಾಗಿದೆ. ಕೆರೆಯನ್ನು ಶುದ್ಧೀಕರಿಸಿ ಹಳೆಯ ಗತ ವೈಭವವನ್ನು ಮರಳಿ ಪಡೆಯಲಾಗುವುದೇ ಎಂದು ಜನರು ಚಾತಕ ಪಕ್ಷಿಗಳಂತೆ ಕಾದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT