<p>ಸೂಲಿಬೆಲೆ(ಹೊಸಕೋಟೆ): ಹೋಬಳಿಯ ಅತ್ತಿಬೆಲೆ ಬಳಿ ಮಳೆ–ಗಾಳಿಯಿಂದ ಆಲದ ಮರದಿಂದ ಮುರಿದು ರಸ್ತೆಗೆ ಬಿದ್ದಿದ್ದ ಬೃಹತ್ ರಂಬೆಗೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು, ವಾಹನದಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p>ಹೋಬಳಿಯ ಅನುಪನಹಳ್ಳಿಯ ವಾಹನ ಚಾಲಕ ಅನಿಲ್, ಇವರ ಪತ್ನಿ ಭವಾನಿ, ಇವರ ಪುತ್ರರಾದ ಶಿವತೇಜಸ್ ಮತ್ತು ಪವನ್ ಗಾಯಗೊಂಡವರು. ವಾಹನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.</p>.<p>ಬಾಳೆಹಣ್ಣು ವ್ಯಾಪಾರ ಮಾಡುತ್ತಿದ್ದ ಈ ಕುಟುಂಬ ಕೆ.ಆರ್. ಪುರಂಗೆ ಬಾಳೆಹಣ್ಣು ತರಲು ಬೆಳಗ್ಗೆಯೇ ಸರಕು ಸಾಗಣೆ ವಾಹನದಲ್ಲಿ ಹೋಗುತ್ತಿತು. ಭಾನುವಾರ ಮುಸುಕಿನ ಸುಮಾರು 3 ಗಂಟೆ ವೇಳೆಗೆ ಬೃಹತ್ ಕೊಂಬೆ ಮರಿದು ರಸ್ತೆಗೆ ಬಿದ್ದಿತ್ತು. ಇದೇ ರಸ್ತೆಯಲ್ಲಿ ಬಂದ ಸರಕು ಸಾಗಣೆ ವಾಹನ ಕೊಂಬೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ಶಬ್ದದಿಂದ ಎಚ್ಚರಗೊಂಡ ಸ್ಥಳೀಯರು ಗಾಯಾಳುಗಳನ್ನು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಿದರು.</p>.<p>ತೀವ್ರವಾಗಿ ಗಾಯಗೊಂಡ ಅನಿಲ್ ಮನತ್ತು ಶಿವತೇಜಸ್ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭವಾನಿ, ಮತ್ತೊಬ್ಬ ಪುತ್ರ ಪವನ್ ಚೇತರಿಸಿಕೊಂಡಿದ್ದಾರೆ ಎಂದು ಸಿಲಿಕಾನ್ ಸಿಟಿ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಅಪಘಾತ ಬಳಿಕ ಮರದ ರೆಂಬೆಯನ್ನು ಕ್ರೇನ್ ಮೂಲಕ ಗಿಡ್ಡಪನಹಳ್ಳಿ ಗ್ರಾಮಪಂಚಾಯಿತಿಯಿಂದ ತೆರವು ಗೊಳಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೂಲಿಬೆಲೆ(ಹೊಸಕೋಟೆ): ಹೋಬಳಿಯ ಅತ್ತಿಬೆಲೆ ಬಳಿ ಮಳೆ–ಗಾಳಿಯಿಂದ ಆಲದ ಮರದಿಂದ ಮುರಿದು ರಸ್ತೆಗೆ ಬಿದ್ದಿದ್ದ ಬೃಹತ್ ರಂಬೆಗೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು, ವಾಹನದಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p>ಹೋಬಳಿಯ ಅನುಪನಹಳ್ಳಿಯ ವಾಹನ ಚಾಲಕ ಅನಿಲ್, ಇವರ ಪತ್ನಿ ಭವಾನಿ, ಇವರ ಪುತ್ರರಾದ ಶಿವತೇಜಸ್ ಮತ್ತು ಪವನ್ ಗಾಯಗೊಂಡವರು. ವಾಹನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.</p>.<p>ಬಾಳೆಹಣ್ಣು ವ್ಯಾಪಾರ ಮಾಡುತ್ತಿದ್ದ ಈ ಕುಟುಂಬ ಕೆ.ಆರ್. ಪುರಂಗೆ ಬಾಳೆಹಣ್ಣು ತರಲು ಬೆಳಗ್ಗೆಯೇ ಸರಕು ಸಾಗಣೆ ವಾಹನದಲ್ಲಿ ಹೋಗುತ್ತಿತು. ಭಾನುವಾರ ಮುಸುಕಿನ ಸುಮಾರು 3 ಗಂಟೆ ವೇಳೆಗೆ ಬೃಹತ್ ಕೊಂಬೆ ಮರಿದು ರಸ್ತೆಗೆ ಬಿದ್ದಿತ್ತು. ಇದೇ ರಸ್ತೆಯಲ್ಲಿ ಬಂದ ಸರಕು ಸಾಗಣೆ ವಾಹನ ಕೊಂಬೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ಶಬ್ದದಿಂದ ಎಚ್ಚರಗೊಂಡ ಸ್ಥಳೀಯರು ಗಾಯಾಳುಗಳನ್ನು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಿದರು.</p>.<p>ತೀವ್ರವಾಗಿ ಗಾಯಗೊಂಡ ಅನಿಲ್ ಮನತ್ತು ಶಿವತೇಜಸ್ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭವಾನಿ, ಮತ್ತೊಬ್ಬ ಪುತ್ರ ಪವನ್ ಚೇತರಿಸಿಕೊಂಡಿದ್ದಾರೆ ಎಂದು ಸಿಲಿಕಾನ್ ಸಿಟಿ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಅಪಘಾತ ಬಳಿಕ ಮರದ ರೆಂಬೆಯನ್ನು ಕ್ರೇನ್ ಮೂಲಕ ಗಿಡ್ಡಪನಹಳ್ಳಿ ಗ್ರಾಮಪಂಚಾಯಿತಿಯಿಂದ ತೆರವು ಗೊಳಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>