ಹೊಸಕೋಟೆ: ಇಲ್ಲಿನ ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.
ದೇವಾಲಯಕ್ಕೆ ಸುಮಾರು ₹ 3 ಲಕ್ಷ ಮೌಲ್ಯದ ರಥವನ್ನು ಅರ್ಪಿಸಲಾಯಿತು. ವಿವಿಧ ಭಕ್ತರಿಂದ ಸಂಗ್ರಹಿಸಿದ ಹಣದಲ್ಲಿ ಈ ಕಾರ್ಯ ನೆರವೇರಿದೆ. ಈ ನಿಮಿತ್ತ ದೇವಾಲಯದಲ್ಲಿ ವಾಸ್ತು ಹೋಮ ಹಾಗೂ ಇತರೆ ಹೋಮಗಳನ್ನು ನಡೆಸಲಾಯಿತು.
ಮುಖಂಡ ಎಂ.ಟಿ.ಬಿ. ನಾಗರಾಜ್ ಸೇರಿದಂತೆ ಸಾವಿರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು.