ಹಿರಿಯ ಧಾರ್ಮಿಕ ಮುಖಂಡ ಸಾಧು ಚನ್ನಪ್ಪ ಮಾತನಾಡಿ, ‘ದೇವತಾ ಕಾರ್ಯಗಳನ್ನು ಹೆಚ್ಚು ಮಾಡುವುದರಿಂದ ಹಳ್ಳಿಗಳ ಸುತ್ತಲೂ ಸಂಚರಿಸುವ ದುಷ್ಟ ಶಕ್ತಿಗಳಿಂದ ಜನರಿಗೆ ಯಾವುದೇ ಅಪಾಯ ಸಂಭವಿಸುವುದಿಲ್ಲ ಎನ್ನುವ ನಂಬಿಕೆಯಿದೆ. ಅದರಂತೆ ಇಲ್ಲಿನ ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ದೇವಾಲಯಗಳನ್ನು ಊರಿನ ಹೊರಗೆ ನಿರ್ಮಾಣ ಮಾಡಿರುವುದು ಕೂಡಾ ಇದೇ ಉದ್ದೇಶಕ್ಕಾಗಿಯೇ. ಜನರು ಇಂತಹ ಕಾರ್ಯಗಳಲ್ಲಿ ಕೈ ಜೋಡಿಸಬೇಕು’ ಎಂದರು.