ಈ ಸಂದರ್ಭದಲ್ಲಿ ಮಾತನಾಡಿದ ‘ಚಂದಮಾಮ ಚಕ್ಕುಲಿಮಾಮ’ ಚಿತ್ರದ ನಿರ್ಮಾಪಕರಾದ ಸಿ.ಲಕ್ಷ್ಮೀಪತಿ, ಹುಲುಕುಂಟೆ ಮಹೇಶ್ ಮಾತನಾಡಿ, ‘ಮೂರು ತಿಂಗಳಿಂದ ಚಿತ್ರಮಂದಿರಗಳು ಮುಚ್ಚಿದ್ದು, ಚಿತ್ರಮಂದಿರದ ನೌಕರರು ತೀವ್ರ ಸಿಲುಕಿದ್ದಾರೆ. ಆದರೂ ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಸಂಘ ಸಂಸ್ಥೆಗಳಿಂದ ಸಹಾಯ ಹಸ್ತು ಸಿಕ್ಕುತ್ತಿದೆ. ಆದರೆ ಯಾವುದೇ ಸಂಘ ಸಂಸ್ಥೆಗಳು ಅಥವಾ ಸರ್ಕಾರ ಚಿತ್ರಮಂದಿರದ ನೌಕಕರನ್ನು ಕಡೆಗಣಿಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ಚಿತ್ರತಂಡ ಮತ್ತು ಭೈರವಿ ಅಭಿಮಾನಿಗಳ ಬಳಗ ಚಿತ್ರಮಂದಿರದ ನೌಕರರ ಸಂಕಷ್ಟಕ್ಕೆ ನೆರವಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಎರಡು ತಾಲ್ಲೂಕು, ರಾಮನಗರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹಲವು ಚಿತ್ರಮಂದಿರಗಳು ಸೇರಿದಂತೆ ಸುಮಾರು 20 ಚಿತ್ರ ಮಂದಿರಗಳಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದೇವೆ. ಮಂಡ್ಯ,ಮೈಸೂರು,ತುಮಕೂರು ಜಿಲ್ಲೆಗಳ ಚಿತ್ರಮಂದಿರಗಳ ನೌಕರರಿಗೆ ದಿನಸಿ ಕಿಟ್ ನೀಡಲು ಸಿದ್ದತೆ ನಡೆಸಿದ್ದೇವೆ. ಈ ಮೂಲಕ ಇತರೆ ಸಂಘ ಸಂಸ್ಥೆ ಅವರಿಗೆ ಸಹಾಯ ಹಸ್ತ ನೀಡಿದರೆ. ನಮ್ಮ ಸೇವೆ ಸಾರ್ಥಕ ಎನಿಸುತ್ತದೆ’ ಎಂದರು.