<p><strong>ಆನೇಕಲ್</strong>: ಕೈಗಾರಿಕೆಗಳ ಸ್ಥಾಪನೆಗೆ ತಾಲ್ಲೂಕಿನ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಹೊರಡಿಸಿರುವ ಆದೇಶ ವಿರೋಧಿಸಿ ಭಾನುವಾರ ಬಿಕ್ಕನಹಳ್ಳಿಯಲ್ಲಿ ರೈತ ಚಳವಳಿ ಸಮಾವೇಶ ನಡೆಯಿತು. </p><p>ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ಸಮಾವೇಶದಲ್ಲಿ ಸರ್ಜಾಪುರ ಹೋಬಳಿಯ ನೂರಾರು ರೈತರು ಪಾಲ್ಗೊಂಡಿದ್ದರು.</p><p>‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆ ಅಡಿ ತಾಲ್ಲೂಕಿನ ರೈತರು ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೆರವಣಿಗೆ ನಡೆಸಿದರು. </p><p>ಭೂಸ್ವಾಧೀನ ವಿರೋಧಿಸಿ ತಾಲ್ಲೂಕಿನ ಕೊಮ್ಮಸಂದ್ರ ಬಯಲು ಬಸವೇಶ್ವರ ದೇವಾಲಯದಿಂದ ಬೆಂಗಳೂರು ಫ್ರೀಡಂ ಪಾರ್ಕ್ವರೆಗೂ ಜುಲೈ 15ರಂದು ಬೈಕ್ ರ್ಯಾಲಿ ಆಯೋಜಿಸಲಾಗಿದೆ. 500ಕ್ಕೂ ಹೆಚ್ಚು ಬೈಕ್ಗಳಲ್ಲಿ ರೈತರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು.</p><p>‘ಬನ್ನಿ ರೈತರೇ ಮನೆಯಿಂದ ಹೊರ ಬನ್ನಿ. ಅಕ್ರಮ ಖಂಡಿಸಿ. ರೈತರ ಭೂಮಿ ಕಬಳಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗುವ ಮೂಲಕ ರೈತರು ಆಕ್ರೋಶ ಹೊರ ಹಾಕಿದರು. ನೂರಾರು ರೈತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.</p><p>ರಾಜ್ಯ ಸರ್ಕಾರ ಆನೇಕಲ್ ತಾಲ್ಲೂಕಿನ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ಆಹಾರದ ಮೂಲವಾದ ರೈತರ ಭೂಮಿಯನ್ನೇ ಕಿತ್ತುಕೊಳ್ಳುವುದು ಯಾವ ನ್ಯಾಯ. ರೈತರು ಭೂಮಿಯ ಮಕ್ಕಳು. ಭೂತಾಯಿಯನ್ನು ಕಸಿದುಕೊಂಡರೆ ಬದುಕು ಕಸಿದುಕೊಂಡಂತೆ ಎಂದು ಚಂದ್ರಾರೆಡ್ಡಿ ಹರಿಹಾಯ್ದರು. </p><p>ಆನೇಕಲ್ ತಾಲ್ಲೂಕಿನ ಯಾವ ರೈತರೂ ಕೈಗಾರಿಕೆಗೆ ಭೂಮಿ ನೀಡಲು ಒಪ್ಪುತ್ತಿಲ್ಲ. ಸರ್ಕಾರ ಬೇಕಾದರೆ ಬರಡು ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಲಿ. ಭೂಮಿ ಉಳಿಸಿಕೊಳ್ಳಲು ತಾಲ್ಲೂಕಿನಾದ್ಯಂತ ಶಾಂತಿಯುತ ಹೋರಾಟ, ಪ್ರತಿಭಟನೆ ಮತ್ತು ಜಾಗೃತಿ ಶಿಬಿರ ನಡೆಸಲಾಗುತ್ತಿದೆ<br>ಎಂದರು.</p><p>ರೈತರ ಮೇಲಿನ ಶೋಷಣೆ ಹೆಚ್ಚಾಗಿದೆ. ಸರ್ಜಾಪುರ ಹೋಬಳಿಯ 1,450 ಎಕರೆ ಸ್ವಾಧೀನಕ್ಕೆ ನೋಟಿಸ್ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೈತರ ಭೂಮಿ ನೀಡುವುದಿಲ್ಲ. ರಕ್ತ ಕೊಟ್ಟೇವು. ಭೂಮಿ ಕೊಡುವುದಿಲ್ಲ ಎಂದು ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಕಾಡುಅಗ್ರಹಾರ ಜಯಪ್ರಕಾಶ್ ಘೋಷಿಸಿದರು.</p><p>ಬಿ.ಸಿ.ಕುಸುಮಾಧರ್, ಬಿ.ಎನ್.ಮಂಜುನಾಥ್, ನವೀನ್ ಕುಮಾರ್, ಬಿ.ಆರ್.ಮಂಜುನಾಥ್, ನಾಗೇಶ್ ರೆಡ್ಡಿ, ಕೇಶವರೆಡ್ಡಿ, ರಘು, ಕೃಷ್ಣಾರೆಡ್ಡಿ, ವಿಶ್ವನಾಥ್, ಗೋಪಾಲರೆಡ್ಡಿ, ಮಧು, ಕುಮಾರ್, ಲೋಕೇಶ್ ಇದ್ದರು.</p><p><strong>ಮತ್ತಷ್ಟು ಭೂಸ್ವಾಧೀನ?</strong></p><p>ಮುತ್ತಾನಲ್ಲೂರು, ಹಂದೇನಹಳ್ಳಿ, ಸಮನಹಳ್ಳಿ, ಸೊಳ್ಳೆಪುರ, ಬಿಕ್ಕನಹಳ್ಳಿ, ಎಸ್.ಮೇಡಹಳ್ಳಿ, ಬಿ.ಹೊಸಹಳ್ಳಿ, ಚಿಕ್ಕತಿಮ್ಮಸಂದ್ರ, ಕೊಮ್ಮಸಂದ್ರ ಗ್ರಾಮಗಳ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ನೋಟಿಸ್ ನೀಡಲಾಗಿದೆ.ಸೂಲಿಕುಂಟೆ, ಅರೋಹಳ್ಳಿ, ಚೊಕ್ಕಸಂದ್ರ, ಗೋಪಸಂದ್ರ, ದೊಮ್ಮಸಂದ್ರ, ಯಮರೆ, ಕಾಡ ಅಗ್ರಹಾರದಲ್ಲಿ ಭೂಸ್ವಾಧೀನಕ್ಕೆ ಕೆಐಎಡಿಬಿ ಚಿಂತನೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೋರಾಟಗಾರರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್</strong>: ಕೈಗಾರಿಕೆಗಳ ಸ್ಥಾಪನೆಗೆ ತಾಲ್ಲೂಕಿನ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಹೊರಡಿಸಿರುವ ಆದೇಶ ವಿರೋಧಿಸಿ ಭಾನುವಾರ ಬಿಕ್ಕನಹಳ್ಳಿಯಲ್ಲಿ ರೈತ ಚಳವಳಿ ಸಮಾವೇಶ ನಡೆಯಿತು. </p><p>ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ಸಮಾವೇಶದಲ್ಲಿ ಸರ್ಜಾಪುರ ಹೋಬಳಿಯ ನೂರಾರು ರೈತರು ಪಾಲ್ಗೊಂಡಿದ್ದರು.</p><p>‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆ ಅಡಿ ತಾಲ್ಲೂಕಿನ ರೈತರು ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೆರವಣಿಗೆ ನಡೆಸಿದರು. </p><p>ಭೂಸ್ವಾಧೀನ ವಿರೋಧಿಸಿ ತಾಲ್ಲೂಕಿನ ಕೊಮ್ಮಸಂದ್ರ ಬಯಲು ಬಸವೇಶ್ವರ ದೇವಾಲಯದಿಂದ ಬೆಂಗಳೂರು ಫ್ರೀಡಂ ಪಾರ್ಕ್ವರೆಗೂ ಜುಲೈ 15ರಂದು ಬೈಕ್ ರ್ಯಾಲಿ ಆಯೋಜಿಸಲಾಗಿದೆ. 500ಕ್ಕೂ ಹೆಚ್ಚು ಬೈಕ್ಗಳಲ್ಲಿ ರೈತರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು.</p><p>‘ಬನ್ನಿ ರೈತರೇ ಮನೆಯಿಂದ ಹೊರ ಬನ್ನಿ. ಅಕ್ರಮ ಖಂಡಿಸಿ. ರೈತರ ಭೂಮಿ ಕಬಳಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗುವ ಮೂಲಕ ರೈತರು ಆಕ್ರೋಶ ಹೊರ ಹಾಕಿದರು. ನೂರಾರು ರೈತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.</p><p>ರಾಜ್ಯ ಸರ್ಕಾರ ಆನೇಕಲ್ ತಾಲ್ಲೂಕಿನ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ಆಹಾರದ ಮೂಲವಾದ ರೈತರ ಭೂಮಿಯನ್ನೇ ಕಿತ್ತುಕೊಳ್ಳುವುದು ಯಾವ ನ್ಯಾಯ. ರೈತರು ಭೂಮಿಯ ಮಕ್ಕಳು. ಭೂತಾಯಿಯನ್ನು ಕಸಿದುಕೊಂಡರೆ ಬದುಕು ಕಸಿದುಕೊಂಡಂತೆ ಎಂದು ಚಂದ್ರಾರೆಡ್ಡಿ ಹರಿಹಾಯ್ದರು. </p><p>ಆನೇಕಲ್ ತಾಲ್ಲೂಕಿನ ಯಾವ ರೈತರೂ ಕೈಗಾರಿಕೆಗೆ ಭೂಮಿ ನೀಡಲು ಒಪ್ಪುತ್ತಿಲ್ಲ. ಸರ್ಕಾರ ಬೇಕಾದರೆ ಬರಡು ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಲಿ. ಭೂಮಿ ಉಳಿಸಿಕೊಳ್ಳಲು ತಾಲ್ಲೂಕಿನಾದ್ಯಂತ ಶಾಂತಿಯುತ ಹೋರಾಟ, ಪ್ರತಿಭಟನೆ ಮತ್ತು ಜಾಗೃತಿ ಶಿಬಿರ ನಡೆಸಲಾಗುತ್ತಿದೆ<br>ಎಂದರು.</p><p>ರೈತರ ಮೇಲಿನ ಶೋಷಣೆ ಹೆಚ್ಚಾಗಿದೆ. ಸರ್ಜಾಪುರ ಹೋಬಳಿಯ 1,450 ಎಕರೆ ಸ್ವಾಧೀನಕ್ಕೆ ನೋಟಿಸ್ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೈತರ ಭೂಮಿ ನೀಡುವುದಿಲ್ಲ. ರಕ್ತ ಕೊಟ್ಟೇವು. ಭೂಮಿ ಕೊಡುವುದಿಲ್ಲ ಎಂದು ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಕಾಡುಅಗ್ರಹಾರ ಜಯಪ್ರಕಾಶ್ ಘೋಷಿಸಿದರು.</p><p>ಬಿ.ಸಿ.ಕುಸುಮಾಧರ್, ಬಿ.ಎನ್.ಮಂಜುನಾಥ್, ನವೀನ್ ಕುಮಾರ್, ಬಿ.ಆರ್.ಮಂಜುನಾಥ್, ನಾಗೇಶ್ ರೆಡ್ಡಿ, ಕೇಶವರೆಡ್ಡಿ, ರಘು, ಕೃಷ್ಣಾರೆಡ್ಡಿ, ವಿಶ್ವನಾಥ್, ಗೋಪಾಲರೆಡ್ಡಿ, ಮಧು, ಕುಮಾರ್, ಲೋಕೇಶ್ ಇದ್ದರು.</p><p><strong>ಮತ್ತಷ್ಟು ಭೂಸ್ವಾಧೀನ?</strong></p><p>ಮುತ್ತಾನಲ್ಲೂರು, ಹಂದೇನಹಳ್ಳಿ, ಸಮನಹಳ್ಳಿ, ಸೊಳ್ಳೆಪುರ, ಬಿಕ್ಕನಹಳ್ಳಿ, ಎಸ್.ಮೇಡಹಳ್ಳಿ, ಬಿ.ಹೊಸಹಳ್ಳಿ, ಚಿಕ್ಕತಿಮ್ಮಸಂದ್ರ, ಕೊಮ್ಮಸಂದ್ರ ಗ್ರಾಮಗಳ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ನೋಟಿಸ್ ನೀಡಲಾಗಿದೆ.ಸೂಲಿಕುಂಟೆ, ಅರೋಹಳ್ಳಿ, ಚೊಕ್ಕಸಂದ್ರ, ಗೋಪಸಂದ್ರ, ದೊಮ್ಮಸಂದ್ರ, ಯಮರೆ, ಕಾಡ ಅಗ್ರಹಾರದಲ್ಲಿ ಭೂಸ್ವಾಧೀನಕ್ಕೆ ಕೆಐಎಡಿಬಿ ಚಿಂತನೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೋರಾಟಗಾರರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>