ಈಗ ಕೃಷಿಕರ ಮನೆಯಲ್ಲಿ ದನಕರುಗಳು ಮಾಯವಾಗಿವೆ. ಅವುಗಳ ಜಾಗಕ್ಕೆ ಟ್ರಾಕ್ಟರ್ ಬಂದಿದೆ. ಸಂಪ್ರದಾಯ ಸಂಭ್ರಮ ಕಡಿಮೆಯಾಗಿದೆ. ಈ ಕಾರಣ ವಿದ್ಯಾರ್ಥಿಗಳಿಂದ ಆಚರಿಸುವ ಮೂಲಕ ಸಂಸ್ಕೃತಿಯ ಸಂಕೇತ ಮರುಕಳಿಸಬೇಕು ಸಂಸ್ಕಾರ, ವಿಶ್ವಾಸ, ಕೃತಜ್ಞತೆ ಜೊತೆಗಿನ ಹಬ್ಬದ ಖುಷಿ, ರಂಗು, ಆರೋಗ್ಯ, ನಲಿವು, ತೃಪ್ತಿ, ಹುಮ್ಮಸ್ಸು, ಸೊಬಗು, ಸಮೃದ್ಧಿ ಎಲ್ಲೆಲ್ಲೂ ಕಾಣ ಸಿಗಬೇಕು ಎಂದರು.