<p><strong>ದೇವನಹಳ್ಳಿ:</strong> ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿದ್ದಾರೆ. </p>.<p>ಊಟ ವಿತರಿಸುವ ಸ್ಥಳದಲ್ಲಿ ವಿಪರೀತ ಜನಸಂದಣಿ ಯಿಂದ ಉಂಟಾದ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.</p>.<p>ಊಟ ಮಾಡಲು ಬಂದವರು ಪೊಲೀಸರ ಲಾಠಿ ರುಚಿ ನೋಡಿ ದಿಕ್ಕಾಪಾಲಾಗಿ ಓಡಿದರು. ನಂತರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. </p>.<p>'ಮಹಿಳೆಯರು, ವೃದ್ದರು ಎಂದು ನೋಡದೆ ಪೊಲೀಸರು ಲಾಠಿ ಯಿಂದ ಮನಬಂದಂತೆ ಹೊಡೆದಿದ್ದಾರೆ. ಹೊಡೆದ ಜಾಗವನ್ನು ತೋರಿಸಲೂ ಆಗದು. ಅಂಥ ಕಡೆಗಳಲ್ಲಿ ಬಾಸುಂಡೆ ಬರುವಂತೆ ಬಾರಿಸಿದ್ದಾರೆ ' ಎಂದು ಏಟು ತಿಂದ ವೃದ್ಧರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. </p>.<p>ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಸಚಿವ ಡಾ.ಕೆ.ಸುಧಾಕರ್ ಸ್ಥಳಕ್ಕೆ ಆಗಮಿಸಿದ್ದು, ಜನರನ್ನು ಸಮಾಧಾನ ಮಾಡಲು ಮುಂದಾದರು. ಅವರೊಂದಿಗೆ <br />ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯ ಎಸಿಪಿ ಬಾಲಕೃಷ್ಣ ಕೂಡ ಜನರನ್ನು ಸಮಾಧಾನ ಪಡಿಸಿ ಕಳಿಸಿದರು. </p>.<p>ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಕುಂದಾಣ, ವಿಜಯಪುರ, ಹೋಸಕೋಟೆಯಿಂದ ಬರುತ್ತಿರುವ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಸಕಲ ಪ್ರಯತ್ನ ಮಾಡುತ್ತಿದ್ದರೂ, ನಿಯಂತ್ರಣ ಸಾಧ್ಯವಾಗುತ್ತಿಲ್ಲ.</p>.<p>ಪಟ್ಟಣದ ರಾಣಿ ಸರ್ಕಲ್, ಕೆಂಪೇಗೌಡ ಸರ್ಕಲ್, ವಿಜಯಪುರ, ಯಲಹಂಕ ದಾರಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. </p>.<p> ಬಸ್ಗಳಲ್ಲಿ ಹೊರವಲಯದಲ್ಲಿ ಬಂದಿಳಿದ ಸಾವಿರಾರು ಜನರು ಅಲ್ಲಿಂದ ನಡೆದುಕೊಂಡು ದೇವನಹಳ್ಳಿ ಟೌನ್ನ ಕಾರ್ಯಕ್ರಮ ಸ್ಥಳಕ್ಕೆ ಧಾವಿಸಿದರು. ರಸ್ತೆಗಳು ಜನರಿಂದ ತುಂಬಿ ಹೋಗಿವೆ. ವಾಹನ ಸಂಚರಿಸಲು ಜಾಗ ಇಲ್ಲದೆ ಸವಾರರು ಪರದಾಡುತ್ತಿದ್ದಾರೆ. ಪೊಲೀಸರು ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ಕೈಚೆಲ್ಲಿದ್ದಾರೆ. </p>.<p>ಇನ್ನೂ ದೂರದ ಊರಿನಿಂದ ಬಂದಂತಹ ಜನರಿಗೆ ಗುರುಭವನ ಸೇರಿದಂತೆ ವಿವಿಧೆಡೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ. </p>.<p> ಉಪಿಟ್ಟು, ಕೆಸರಿಬಾತ್, ವಡೆ ಪ್ಯಾಕೆಟ್ ಜೊತೆ ಚಿಕ್ಕ ನೀರಿನ ಪ್ಲಾಸ್ಟಿಕ್ ಕವರ್ ನೀಡಲಾಗಿತ್ತು.</p>.<p>ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದು, ಮುಖ್ಯದ್ವಾರದಲ್ಲಿ ತೀವ್ರ ತಪಾಸಣೆಯ ನಂತರವೇ ಜನರನ್ನು ಒಳಗೆ ಬಿಡಲಾಗುತ್ತಿದೆ. </p>.<p>ವೇದಿಕೆಯ ಮುಂಭಾಗದಲ್ಲಿ ಮೀಸಲಾಗಿರುವ ಆಸನಗಳಿಗೆ ಈಗಾಗಲೇ ಪಾಸ್ಗಳನ್ನು ವಿತರಣೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ:</strong> ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿದ್ದಾರೆ. </p>.<p>ಊಟ ವಿತರಿಸುವ ಸ್ಥಳದಲ್ಲಿ ವಿಪರೀತ ಜನಸಂದಣಿ ಯಿಂದ ಉಂಟಾದ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.</p>.<p>ಊಟ ಮಾಡಲು ಬಂದವರು ಪೊಲೀಸರ ಲಾಠಿ ರುಚಿ ನೋಡಿ ದಿಕ್ಕಾಪಾಲಾಗಿ ಓಡಿದರು. ನಂತರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. </p>.<p>'ಮಹಿಳೆಯರು, ವೃದ್ದರು ಎಂದು ನೋಡದೆ ಪೊಲೀಸರು ಲಾಠಿ ಯಿಂದ ಮನಬಂದಂತೆ ಹೊಡೆದಿದ್ದಾರೆ. ಹೊಡೆದ ಜಾಗವನ್ನು ತೋರಿಸಲೂ ಆಗದು. ಅಂಥ ಕಡೆಗಳಲ್ಲಿ ಬಾಸುಂಡೆ ಬರುವಂತೆ ಬಾರಿಸಿದ್ದಾರೆ ' ಎಂದು ಏಟು ತಿಂದ ವೃದ್ಧರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. </p>.<p>ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಸಚಿವ ಡಾ.ಕೆ.ಸುಧಾಕರ್ ಸ್ಥಳಕ್ಕೆ ಆಗಮಿಸಿದ್ದು, ಜನರನ್ನು ಸಮಾಧಾನ ಮಾಡಲು ಮುಂದಾದರು. ಅವರೊಂದಿಗೆ <br />ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯ ಎಸಿಪಿ ಬಾಲಕೃಷ್ಣ ಕೂಡ ಜನರನ್ನು ಸಮಾಧಾನ ಪಡಿಸಿ ಕಳಿಸಿದರು. </p>.<p>ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಕುಂದಾಣ, ವಿಜಯಪುರ, ಹೋಸಕೋಟೆಯಿಂದ ಬರುತ್ತಿರುವ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಸಕಲ ಪ್ರಯತ್ನ ಮಾಡುತ್ತಿದ್ದರೂ, ನಿಯಂತ್ರಣ ಸಾಧ್ಯವಾಗುತ್ತಿಲ್ಲ.</p>.<p>ಪಟ್ಟಣದ ರಾಣಿ ಸರ್ಕಲ್, ಕೆಂಪೇಗೌಡ ಸರ್ಕಲ್, ವಿಜಯಪುರ, ಯಲಹಂಕ ದಾರಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. </p>.<p> ಬಸ್ಗಳಲ್ಲಿ ಹೊರವಲಯದಲ್ಲಿ ಬಂದಿಳಿದ ಸಾವಿರಾರು ಜನರು ಅಲ್ಲಿಂದ ನಡೆದುಕೊಂಡು ದೇವನಹಳ್ಳಿ ಟೌನ್ನ ಕಾರ್ಯಕ್ರಮ ಸ್ಥಳಕ್ಕೆ ಧಾವಿಸಿದರು. ರಸ್ತೆಗಳು ಜನರಿಂದ ತುಂಬಿ ಹೋಗಿವೆ. ವಾಹನ ಸಂಚರಿಸಲು ಜಾಗ ಇಲ್ಲದೆ ಸವಾರರು ಪರದಾಡುತ್ತಿದ್ದಾರೆ. ಪೊಲೀಸರು ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ಕೈಚೆಲ್ಲಿದ್ದಾರೆ. </p>.<p>ಇನ್ನೂ ದೂರದ ಊರಿನಿಂದ ಬಂದಂತಹ ಜನರಿಗೆ ಗುರುಭವನ ಸೇರಿದಂತೆ ವಿವಿಧೆಡೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ. </p>.<p> ಉಪಿಟ್ಟು, ಕೆಸರಿಬಾತ್, ವಡೆ ಪ್ಯಾಕೆಟ್ ಜೊತೆ ಚಿಕ್ಕ ನೀರಿನ ಪ್ಲಾಸ್ಟಿಕ್ ಕವರ್ ನೀಡಲಾಗಿತ್ತು.</p>.<p>ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದು, ಮುಖ್ಯದ್ವಾರದಲ್ಲಿ ತೀವ್ರ ತಪಾಸಣೆಯ ನಂತರವೇ ಜನರನ್ನು ಒಳಗೆ ಬಿಡಲಾಗುತ್ತಿದೆ. </p>.<p>ವೇದಿಕೆಯ ಮುಂಭಾಗದಲ್ಲಿ ಮೀಸಲಾಗಿರುವ ಆಸನಗಳಿಗೆ ಈಗಾಗಲೇ ಪಾಸ್ಗಳನ್ನು ವಿತರಣೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>