ಶೇ80ರಷ್ಟು ಜನ ರಾತ್ರಿ 7ಗಂಟೆಗೆ ಕೆಲಸ ಕಾರ್ಯ ಮುಗಿಸಿ ಮನೆಗಳಿಗೆ ತಲುಪುವುದರಿಂದ ರಾತ್ರಿ ಕರ್ಫ್ಯೂ ಜಾರಿಯಿಂದ ಹೆಚ್ಚು ಪ್ರಯೋಜನವಿಲ್ಲ. ಮುಖ್ಯವಾಗಿ ಮದುವೆ ಹಾಗೂ ಹೆಚ್ಚಿನ ಜನ ಸೇರುವಂತಹ ಕಾರ್ಯಕ್ರಮ ರದ್ದುಪಡಿಸಬೇಕು. ಸಾರ್ವಜನಿಕರು ಅನವಶ್ಯಕವಾಗಿ ಸಂಬಂಧಿಕರ ಮನೆಗಳಿಗೆ, ಪ್ರವಾಸಕ್ಕೆ, ವಿಕೇಂಡ್ ಕಾರ್ಯಕ್ರಮಗಳಿಗೆ ಹೋಗುವುದಕ್ಕೆ ಕಡಿವಾಣ ಬೀಳಬೇಕು. ಮಾಸ್ಕ್ ಬಳಕೆ, ಪರಸ್ಪರ ಅಂತರ ಪಾಲನೆ ಮಾಡಿಕೊಂಡು ಕೊರೊನಾ ವೈರಸ್ ಹರಡುವುದನ್ನು ತಡೆಯಬೇಕು ಎನ್ನುತ್ತಾರೆ ಡಾ.ರಂಗನಾಥ್.