ಕಲುಷಿತ ನೀರನ್ನು ಹೊರಗೆ ಸಾಗಿಸುವಾಗ ಯಾವುದೇ ಇಲಾಖೆಯ ಸಿಬ್ಬಂದಿಗಳು ಸಹ ಮುಂದೆ ನಿಂತು ವೈಜ್ಞಾನಿಕವಾಗಿ ಕಾರ್ಯಾ ನಡೆಯುತ್ತಿದೆಯೆ ಎನ್ನುವ ಬಗ್ಗೆ ಗಮನಿಸದೆ ಇರುವುದು ಬೇಜವಾಬ್ದಾರಿತನವಾಗಿದೆ ಎಂದು ದೂರಿರುವ ಯುವ ಸಂಚಲನ ಅಧ್ಯಕ್ಷ ಚಿದಾನಂದಮೂರ್ತಿ, ನಮ್ಮ ಮೌನ ಪ್ರತಿಭಟನೆಯ ಮೂರು ಉದ್ದೇಶಗಳಲ್ಲಿ ಇನ್ನು ಎರಡು ಉದ್ದೇಶಗಳು ಈಡೇರಿಲ್ಲ. ಇವುಗಳ ಕುರಿತು ಸಹ ಇಲಾಖೆಯವರು ಗಮನಹರಿಸಬೇಕು. ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಮುಂದೆಯು ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.