ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಯೋಗೇಶ್ ಗೌಡ ಮಾತನಾಡಿ, ‘ದೇಶ ವಿದೇಶಗಳಲ್ಲಿ ನಮ್ಮ ತಾಲ್ಲೂಕಿನ ಬೊಂಬೆಗಳಿಗೆ ಬೇಡಿಕೆ ಇದ್ದು, ಇದೀಗ ಅಂತಹ ಉದ್ಯಮವನ್ನು ಬೇರೆಡೆ ಸ್ಥಾಪಿಸಲು ಮುಂದಾಗಿರುವುದು ಖಂಡನೀಯ’ ಎಂದರು.
ವೇದಿಕೆಯ ಪದಾಧಿಕಾರಿಗಳಾದ ಶ್ರೀಧರ್, ರಂಜಿತ್ ಗೌಡ, ಸೂರಿ, ವೆಂಕಟರಮಣ, ರಾಜಣ್ಣ, ಚಿಕ್ಕಣ್ಣಪ್ಪ, ಶಿವಣ್ಣ, ರಾಂಪುರ ಮಲ್ಲೇಶ್, ಮಂಗಳವಾರಪೇಟೆ ನಾಗೇಶ್, ಉಜ್ಜನಹಳ್ಳಿ ಕೆ.ಪಿ.ರವೀಶ್, ಮಂಗಳವಾರಪೇಟೆ ತಿಮ್ಮರಾಜ್, ಡಿ.ಎಸ್.ಎಸ್. ಸಂಚಾಲಕ ವೆಂಕಟೇಶ್, ಮುಖಂಡರಾದ ನಾಗವಾರ ಶಿವಲಿಂಗೇಗೌಡ, ಕಳಸೇಗೌಡ, ಎಚ್.ಎಂ.ಚಿಕ್ಕಣ್ಣ, ಚಕ್ಕೆರೆ ನಾಗರಾಜ್, ಡಾ.ರಾಜ್ ಕಲಾ ಬಳಗದ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ನಾಗಣ್ಣ ಇದ್ದರು.