ದೇವನಹಳ್ಳಿ ಕಡೆಯಿಂದ ಬೆಂಗಳೂರಿನ ಕಡೆಗೆ ಪೋರ್ಡ್ ಕಾರಿನಲ್ಲಿ ಹೊರಟಿದ್ದ ತೆಲ್ಲೋಹಳ್ಳಿಯ ಚಂದ್ರಪ್ಪ ಎಂಬುವವರು, ’ನಾವು ಸ್ಥಳೀಯರು ಟೋಲ್ ಕಟ್ಟುವುದಿಲ್ಲ ಎಂದು ಕೂಗಾಡಿದ್ದಾರೆ. ಈ ವೇಳೆ ಟೋಲ್ ನಿರ್ವಾಹಕ ಶ್ರೀಧರ್ಎಂಬುವವರು, 5 ಕೀ.ಮೀ.ವ್ಯಾಪ್ತಿಯೊಳಗಿನ ಹಳ್ಳಿಗಳ ಜನರಿಗೆ ಮಾತ್ರವೇ ಟೋಲ್ ನಲ್ಲಿ ವಿನಾಯಿತಿ ಇದೆ. ಉಳಿದ ಎಲ್ಲರೂ ಟೋಲ್ ಕಟ್ಟಬೇಕು ಎಂದು ತಿಳಿಸಿದ್ದಾರೆ. ಆದರೂ, ಟೋಲ್ ಸುಂಕ ಕಟ್ಟಲು ನಿರಾಕರಿಸಿದ ಚಂದ್ರಪ್ಪ, ಕಾರಿನಲ್ಲಿದ್ದ ಮಚ್ಚು ತೋರಿಸಿ, ಪರಿಣಾಮ ನೆಟ್ಟಗಿರಲ್ಲ‘ಎಂದು ಬೆದರಿಕೆ ಹಾಕಿದ್ದಾರೆ. ಟೋಲ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಚಿಕ್ಕಜಾಲ ಪೊಲೀಸರು ಕಾರು ಚಾಲಕನಿಂದ ಮಚ್ಚು ಹಾಗೂ ಕಾರು ಸಹಿತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.