ರೇಷ್ಮೆ ಹುಳು ಸಾಕಾಣಿಕೆ ಮನೆಗಳ ನಿರ್ಮಾಣಕ್ಕೆ 225 ಚದರಡಿಯಿಂದ ಒಂದು ಸಾವಿರ ಚದರಡಿಯವರೆಗೆ) ಪ್ರೋತ್ಸಾಹಧನ ಸಾಮಾನ್ಯ ರೈತರಿಗೆ ಶೇ 75ರಷ್ಟು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ 90ರಷ್ಟು ನೀಡಲಾಗುತ್ತಿದೆ. ರೇಷ್ಮೆ ಹುಳು ಸಾಕಾಣಿಕೆ ಸಲಕರಣೆಗೆ, ಚಾಕಿ ಸಾಕಾಣಿಕಾ ಕೇಂದ್ರ ನಿರ್ಮಾಣ ಮತ್ತು ನಿರ್ವಹಣೆಗೆ, ಮತ್ತು ಸಲಕರಣೆಗಳಿಗೂ ಇದೆ ಮಾದರಿಯಲ್ಲಿ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು.
ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷೆ ನಂದಿನಿ ವೆಂಕಟೇಶ್ ಮಾತನಾಡಿ, ಸಾಲುಕಡ್ಡಿ ರೇಷ್ಮೆ ಬೆಳೆ ಉಳಿಸಿಕೊಳ್ಳಲು ಈ ಬರಗಾಲದಲ್ಲಿ ರೈತರಿಗೆ ಸವಾಲಾಗಿದೆ. ಕಡಿಮೆ ಮಳೆ, ಸರಳ ವಿಧಾನ, ದೀರ್ಘಾವಧಿ ಮರಕಡ್ಡಿ ರೇಷ್ಮೆ ಬೆಳೆಯೇ ಇಂದಿನ ಸ್ಥಿತಿಯಲ್ಲಿ ಸೂಕ್ತ ಎಂದು ಹೇಳಿದರು. ರೇಷ್ಮೆ ಬೆಳೆ ವಿಸ್ತಿರ್ಣಾಧಿಕಾರಿ ಕೆ.ಎನ್.ಶ್ರೀನಿವಾಸಪ್ಪ, ರೇಷ್ಮೆ ವಲಯಾಧಿಕಾರಿಗಳಾದ ಮುನಿರಾಜಪ್ಪ, ಜಗದೀಶ್, ರೇಷ್ಮೆ ತೋಟದ ಮಾಲಿಕ ಬಚ್ಚೇಗೌಡ ಇದ್ದರು .