‘ದೊಡ್ಡರಾಯಪ್ಪನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ್ದ ನಮ್ಮ ಪೂರ್ವಿಕರು ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದ ಸ್ಥಳ ಪಾಳು ಬಿದ್ದಿದೆ. ಈ ಸ್ಥಳದಲ್ಲಿ ಈಗ ಅರ್ಧ ಕುಸಿದ ಮನೆಗಳು, ತಿಪ್ಪಿಗುಂಡಿಗಳು ಮಾತ್ರ ಇವೆ. ಆದರೆ ಯಾರಿಗೂ ಸೂಕ್ತ ದಾಖಲೆಗಳು ಇಲ್ಲ. ಹೀಗಾಗಿ 88 ಅಡಿ ಉದ್ದ, 178 ಅಡಿಗಳಷ್ಟು ಅಗಲದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಪಂಚಾಯಿತಿ ವತಿಯಿಂದಲೇ ಮಂಜೂರಾತಿ ನೀಡಿದ್ದೇವೆ. ಈಗ ಶಾಲೆ ನಿರ್ಮಿಸುತ್ತಿರುವ ಸ್ಥಳದ ಅಂಚಿನಲ್ಲೇ ನಮ್ಮ ಸ್ವಂತ ಸ್ಥಳದಲ್ಲಿ ಮನೆ ಕಟ್ಟಿಕೊಂಡಿದ್ದೇವೆ. ಆದರೆ ನಮ್ಮನೆಗೆ ಹೋಗಲು ರಸ್ತೆ ಇಲ್ಲದಂತೆ 10 ಅಡಿಗಳಷ್ಟು ಕಾಲುವೆಗಳನ್ನು ತೋಡಿ ರಸ್ತೆ ಬಂದ್ ಮಾಡಿದ್ದಾರೆ’ ಎಂದು ಎನ್. ನರಸಿಂಹಮೂರ್ತಿ ತಿಳಿಸಿದರು.