ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಅತ್ತಿಬೆಲೆ | ಇದು ನಿಲ್ದಾಣ ಇಲ್ಲದ ಬಸ್‌ ನಿಲ್ದಾಣ!

ಸಾರಿಗೆ ಸಚಿವರ ತಾಲ್ಲೂಕಿನ ದುಸ್ಥಿತಿ l ಎರಡು ರಾಜ್ಯಗಳ ಕೊಂಡಿಯಾದ ಸ್ಥಳದಲ್ಲಿ ಸುಸಜ್ಜಿತ ನಿಲ್ದಾಣವೇ ಇಲ್ಲ l ಪ್ರಯಾಣಿಕ, ಚಾಲಕರ ಪರದಾಟ
Published : 9 ಜೂನ್ 2025, 4:49 IST
Last Updated : 9 ಜೂನ್ 2025, 4:49 IST
ಫಾಲೋ ಮಾಡಿ
Comments
ರಸ್ತೆ ಬದಿ ಬಸ್‌ ಇಳಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟಲು ಪರದಾಡುತ್ತಿರುವ ಸಾರ್ವಜನಿಕರು
ರಸ್ತೆ ಬದಿ ಬಸ್‌ ಇಳಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟಲು ಪರದಾಡುತ್ತಿರುವ ಸಾರ್ವಜನಿಕರು
ಬಸ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿರುವ ಪ್ರಯಾಣಿಕರು
ಬಸ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿರುವ ಪ್ರಯಾಣಿಕರು
ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಪಾದಚಾರಿ ಮಾರ್ಗವೇ ಬಸ್‌ ನಿಲ್ದಾಣ!
ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಪಾದಚಾರಿ ಮಾರ್ಗವೇ ಬಸ್‌ ನಿಲ್ದಾಣ!
38 ಗುಂಟೆ ಜಾಗ ಮೀಸಲು
ಅತ್ತಿಬೆಲೆ ವೃತ್ತದ ಪಕ್ಕದಲ್ಲಿಯೇ 38 ಗುಂಟೆ ಖಾಲಿ ಜಾಗ ಕೆಎಸ್‌ಆರ್‌ಟಿಸಿಗೆ ಮಂಜೂರಾಗಿದೆ. ಆದರೆ ಕೆಎಸ್‌ಆರ್‌ಟಿಸಿ ಈ ಜಾಗವನ್ನು ಹಲವು ಹರ್ಷಗಳಿಂದ ಖಾಲಿ ಬಿಟ್ಟಿದೆ. ಇಲ್ಲಿ ಗಿಡಗೆಂಟಿಗಳು ಬೆಳೆದು ನಿಂತಿವೆ. ಅತ್ತಿಬೆಲೆ ಬಸ್‌ ನಿಲ್ದಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕೆಎಸ್‌ಆರ್‌ಟಿಸಿಗೆ ಮಂಜೂರಾಗಿದ್ದ ಜಾಗವನ್ನು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಜಂಟಿಯಾಗಿ ಬಳಸಲು ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ. ತ್ವರಿತವಾಗಿ ಬಸ್‌ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬಸ್‌ಗಾಗಿ ಕಾಯುತ್ತಿರುವ ಯುವಕರು
ಬಸ್‌ಗಾಗಿ ಕಾಯುತ್ತಿರುವ ಯುವಕರು
ಹೆಚ್ಚಾದ ವಾಹನ ದಟ್ಟಣೆ
ಬೆಂಗಳೂರಿನ ಮೆಜೆಸ್ಟಿಕ್‌ನಿಂದ 10ಸಾವಿರ ಶೆಡ್ಯೂಲ್‌ ಬಸ್‌ಗಳ ಓಡಾಟವಿದೆ. ಅತ್ತಿಬೆಲೆಯಲ್ಲಿ 3ಸಾವಿರ ಶೆಡ್ಯೂಲ್‌ ಬಿಎಂಟಿಸಿ ಬಸ್‌ಗಳ ಓಡಾಟವಿದೆ. ಬೆಂಗಳೂರು ಹೊರತು ಪಡಿಸಿ ಅತ್ತಿಬೆಲೆಯೇ ಅತ್ಯಂತ ಹೆಚ್ಚು ಬಸ್‌ಗಳ ಓಡಾಟವಿರುವ ಸ್ಥಳವಾಗಿದೆ. ಅತ್ತಿಬೆಲೆಯಲ್ಲಿ ಬಸ್‌ಗಳಿಗೆ ನಿಲ್ದಾಣ ಇಲ್ಲದೇ ಬಸ್‌ಗಳು ರಸ್ತೆಯಲ್ಲೇ ನಿಲ್ಲುತ್ತವೆ. ಪ್ರತಿದಿನ ಅತ್ತಿಬೆಲೆಗೆ ಬರುವ ಬಿಎಂಟಿಸಿ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಬಸ್‌ನಿಲ್ದಾಣ ಇಲ್ಲದೇ ರಸ್ತೆಯುದ್ದಕ್ಕೂ ನಿಂತುಕೊಳ್ಳುತ್ತವೆ. ಇದರಿಂದ ರಸ್ತೆ ಸದಾ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ.
ಪರದಾಟ ತಪ್ಪಿಸಿ
ಅತ್ತಿಬೆಲೆಯಲ್ಲಿ ಹೆಚ್ಚು ಬಸ್‌ಗಳ ಸಂಚಾರವಿದ್ದರೂ ಬಸ್‌ ನಿಲ್ದಾಣ ಇಲ್ಲ. ಇದರಿಂದ ರಸ್ತೆ ಬದಿಗಳಲ್ಲಿಯೇ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ದ್ವಿಚಕ್ರ ವಾಹನಗಳ ಸವಾರರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಹಾಗಾಗಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ವಹಿಸಿ ಬಸ್‌ ನಿಲ್ದಾಣ ಮಂಜೂರು ಮಾಡಬೇಕು- ಸಂಪತ್‌ ಚಿಕ್ಕನಹಳ್ಳಿ ನಿವಾಸಿ
ಕೂಡಲೇ ಕ್ರಮವಹಿಸಿ
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ಒಂದೇ ಸೂರಿನಡಿ ಬಸ್‌ ನಿಲ್ದಾಣಕ್ಕೆ ಜಾಗದ ವ್ಯವಸ್ಥೆ ಮಾಡಬೇಕು. ಅತ್ತಿಬೆಲೆಗೆ ಬಸ್‌ ನಿಲ್ದಾಣದ ಅವಶ್ಯಕತೆ ಅತ್ಯಂತ ಹೆಚ್ಚಾಗಿದೆ. ಸರ್ಕಾರ ಕೂಡಲೇ ಕ್ರಮ ವಹಿಸಬೇಕು -ತಿಮ್ಮರಾಜು ಅತ್ತಿಬೆಲೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT