<p><strong>ಮಾಗಡಿ:</strong> ವಿಶ್ವಕರ್ಮ ಮಹರ್ಷಿ ಎಲ್ಲದರ ಕರ್ತೃ. ಋಗ್ವೇದದ ಪ್ರಕಾರ ಸೃಷ್ಟಿ ದೇವರು ಎಂದು ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.</p>.<p>ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಬ್ರಿಗ್ರೇಡ್ ವಿಶ್ವಕರ್ಮ ಸಮಾಜ ಸಹಯೋಗದಲ್ಲಿ ಶುಕ್ರವಾರ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.</p>.<p>ಕಾಳಿಕಾಂಬ ದೇವಾಲಯದ ಸಮಿತಿ ಅಧ್ಯಕ್ಷ ಶಾಮಾಚಾರ್ ಮಾತನಾಡಿ, ದೇವಲೋಕದ ವಾಸ್ತುಶಿಲ್ಪಿ ವಿಶ್ವಕರ್ಮ ಮಹರ್ಷಿ ಸೃಷ್ಟಿಕರ್ತರಾಗಿದ್ದರು. ಆಧುನಿಕ ಯುಗದಲ್ಲಿ ವಿಶ್ವಕರ್ಮ ಸಮಾಜ ಕಡುಬಡತನದಲ್ಲಿ ಜೀವಿಸುತ್ತಿದೆ. ಸರ್ಕಾರ ಸಮುದಾಯದ ಕಡುಬಡವರಿಗೆ ಸವಲತ್ತು ನೀಡಬೇಕು ಎಂದರು.</p>.<p>ದೇವಾಲಯ ಸಮಿತಿ ಉಪಾಧ್ಯಕ್ಷ ರಂಗನಾಥಚಾರ್, ಕಾರ್ಯದರ್ಶಿ ದಯಾನಂದಚಾರ್, ಖಜಾಂಚಿ ಕೃಷ್ಣಾಚಾರ್, ಬ್ರಿಗೇಡ್ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಎಂ.ಜಿ.ಮಂಜುನಾಥ್, ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷರಾದ ನಾಗೇಂದ್ರ, ಮುನಿರಾಜು, ಮುಖಂಡರಾದ ಮಲ್ಲೇಶ್, ಲೋಕೇಶ್, ಸುರೇಶ್, ನರಸಿಂಹಮೂರ್ತಿ, ಪ್ರಕಾಶ್, ತೇಜುಮೂರ್ತಿ ಮಾತನಾಡಿದರು.</p>.<p>ಕಾಳಿಕಾಂಬ ದೇವಾಲಯದ ಪ್ರಧಾನ ಅರ್ಚಕ ನರಸಿಂಹಮೂರ್ತಿ ಆಚಾರ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ:</strong> ವಿಶ್ವಕರ್ಮ ಮಹರ್ಷಿ ಎಲ್ಲದರ ಕರ್ತೃ. ಋಗ್ವೇದದ ಪ್ರಕಾರ ಸೃಷ್ಟಿ ದೇವರು ಎಂದು ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.</p>.<p>ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಬ್ರಿಗ್ರೇಡ್ ವಿಶ್ವಕರ್ಮ ಸಮಾಜ ಸಹಯೋಗದಲ್ಲಿ ಶುಕ್ರವಾರ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.</p>.<p>ಕಾಳಿಕಾಂಬ ದೇವಾಲಯದ ಸಮಿತಿ ಅಧ್ಯಕ್ಷ ಶಾಮಾಚಾರ್ ಮಾತನಾಡಿ, ದೇವಲೋಕದ ವಾಸ್ತುಶಿಲ್ಪಿ ವಿಶ್ವಕರ್ಮ ಮಹರ್ಷಿ ಸೃಷ್ಟಿಕರ್ತರಾಗಿದ್ದರು. ಆಧುನಿಕ ಯುಗದಲ್ಲಿ ವಿಶ್ವಕರ್ಮ ಸಮಾಜ ಕಡುಬಡತನದಲ್ಲಿ ಜೀವಿಸುತ್ತಿದೆ. ಸರ್ಕಾರ ಸಮುದಾಯದ ಕಡುಬಡವರಿಗೆ ಸವಲತ್ತು ನೀಡಬೇಕು ಎಂದರು.</p>.<p>ದೇವಾಲಯ ಸಮಿತಿ ಉಪಾಧ್ಯಕ್ಷ ರಂಗನಾಥಚಾರ್, ಕಾರ್ಯದರ್ಶಿ ದಯಾನಂದಚಾರ್, ಖಜಾಂಚಿ ಕೃಷ್ಣಾಚಾರ್, ಬ್ರಿಗೇಡ್ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಎಂ.ಜಿ.ಮಂಜುನಾಥ್, ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷರಾದ ನಾಗೇಂದ್ರ, ಮುನಿರಾಜು, ಮುಖಂಡರಾದ ಮಲ್ಲೇಶ್, ಲೋಕೇಶ್, ಸುರೇಶ್, ನರಸಿಂಹಮೂರ್ತಿ, ಪ್ರಕಾಶ್, ತೇಜುಮೂರ್ತಿ ಮಾತನಾಡಿದರು.</p>.<p>ಕಾಳಿಕಾಂಬ ದೇವಾಲಯದ ಪ್ರಧಾನ ಅರ್ಚಕ ನರಸಿಂಹಮೂರ್ತಿ ಆಚಾರ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>