ದೊಡ್ಡತುಮಕೂರು ಗ್ರಾಮ ಪಂಚಾಯಿತಿ ಸದಸ್ಯ ಟಿ.ಬಿ.ಲೋಕೇಶ್ ಮಾಹಿತಿ ನೀಡಿ, ಈ ಹಿಂದೆಯೂ ದೊಡ್ಡತುಮಕೂರು ಕೆರೆಗೆ
ಕಲ್ಲುಪುಡಿ ತ್ಯಾಜ್ಯ ರಾತ್ರಿ ವೇಳೆ ತಂದು ಸುರಿಯುವಾಗ ಲಾರಿಗಳನ್ನು ಅಡ್ಡಿಗಟ್ಟಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಈಗ ಕೆರೆ ಅಂಗಳದಲ್ಲಿ ತಂದು ಸುರಿಯಲಾಗಿರುವ ಕಲ್ಲುಪುಡಿ ತ್ಯಾಜ್ಯದಲ್ಲಿ ಅಪಾಯಕಾರಿ ರಾಸಾಯನಿಕ ವಸ್ತು ಸೇರಿದೆ. ಮಳೆ ಬಂದರೆ ಕಲ್ಲುಪುಡಿ ತ್ಯಾಜ್ಯದಲ್ಲಿನ ರಾಸಾಯನಿಕ ಇಡೀ ಕೆರೆ ಆವರಿಸಿಕೊಳ್ಳಲಿದೆ. ತುರ್ತಾಗಿ ಕಲ್ಲುಪುಡಿ ತ್ಯಾಜ್ಯ ಕೆರೆ ಅಂಗಳದಿಂದ ಸಾಗಿಸುವ ಬಗ್ಗೆ ಪಂಚಾಯಿತಿ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.