ಕರ್ನಾಟಕ ಬ್ಯಾಂಕ್ನಿಂದ 2009ರಲ್ಲಿ ಹುಚ್ಚಮ್ಮನದೊಡ್ಡಿ ಗ್ರಾಮದ ಹನುಮಂತಯ್ಯ ಕುಟುಂಬದವರು ₹2.9 ಲಕ್ಷ ಹಾಗೂ ರಾಮಣ್ಣ ಕುಟುಂಬದವರು ₹2.7ಲಕ್ಷ ಬೆಳೆ ಸಾಲ ಪಡೆದಿದ್ದರು. ಕೆಲವೊಮ್ಮೆ ಬಡ್ಡಿ ಪಾವತಿ ಮಾಡಿದ್ದು, ಅಸಲಿನ ಬಾಕಿಯನ್ನು ಹಾಗೆಯೇ ಉಳಿಸಿಕೊಂಡ ಹಿನ್ನೆಲೆಯಲ್ಲಿ ನೋಟಿಸ್ ಜಾರಿಯಾಗಿದೆ. ಸಾಲ ವಸೂಲಾತಿಗೆ ಬ್ಯಾಂಕ್ ನ್ಯಾಯಾಲಯದ ಮೊರೆ ಹೋಗಿದ್ದು, ರಾಮನಗರದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಮೂಲಕ ನೋಟಿಸ್ ಜಾರಿಯಾಗಿದೆ.