‘ಅವುಗಳನ್ನು ಸಾಗಿಸುತ್ತಿದ್ದವರು ಗೊಂದಲಕಾರಿ ಹೇಳಿಕೆ ನೀಡಿದರು. ಅವುಗಳನ್ನು ಖರೀದಿಸಿದ ಮಾಲೀಕರಾಗಲೀ, ವಾಹನದ ಮಾಲೀಕರಾಗಲೀ ಇರಲಿಲ್ಲ. ವಾಹನದಲ್ಲಿದ್ದವರು ತಾವು ಮಹಾರಾಷ್ಟ್ರದ ಸಂಗೋಲಾದವರು ಎಂದು ತಿಳಿಸಿದರು. ಚಾಲಕ ಸೇರಿ ನಾಲ್ವರು ಇದ್ದರು. ಕುಡಚಿಯಲ್ಲಿ ಮಾರಲು ಸಾಗಿಸುತ್ತಿದ್ದುದಾಗಿ ತಿಳಿಸಿದರು. ಮತ್ತೊಮ್ಮೆ ರಾಯಬಾಗಕ್ಕೆ ಎಂದರು. ಬುಧವಾರ ಅಲ್ಲಿ ಸಂತೆ ನಡೆಯುವುದಿಲ್ಲ. ಹೀಗಾಗಿ, ಅನುಮಾನ ಬಂದು ಅಥಣಿಯ ಡಿವೈಎಸ್ಪಿ ಕಚೇರಿಗೆ ತಂದು ಒಪ್ಪಿಸಿದ್ದೇವೆ’ ಎಂದು ಕಾರ್ಯಕರ್ತರು ಮಾಧ್ಯಮದವರಿಗೆ ತಿಳಿಸಿದರು.