<p><strong>ಬೆಳಗಾವಿ</strong>: ‘ಚಂದ್ರಯಾನ, ಮಂಗಳಯಾನಗಳಲ್ಲೂ ನಾವು ನೀರನ್ನೇ ಹುಡುಕುತ್ತಿದ್ದೇವೆ. ಭವಿಷ್ಯದಲ್ಲಿ ನೀರು ಎಷ್ಟು ಮುಖ್ಯ ಎಂಬುದಕ್ಕೆ ಇದೇ ಸಾಕ್ಷಿ. ದೇಶದ ಸುಸ್ಥಿರ ಅಭಿವೃದ್ಧಿ ಆಗಬೇಕೆಂದರೆ ನೀರಿನ ಬಳಕೆ ಸರಿಯಾಗಿ ಆಗಬೇಕು’ ಎಂದು ಇನ್ಫೊಸಿಸ್ ಫೌಂಡೇಷನ್ನ ಸಂಸ್ಥಾಪಕ ಅಧ್ಯಕ್ಷೆ ಸುಧಾ ಮೂರ್ತಿ ಪ್ರತಿಪಾದಿಸಿದರು.</p>.<p>ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ವತಿಯಿಂದ ನಗರದಲ್ಲಿ ಆಯೋಜಿಸಿದ ಸಿವಿಲ್ ಎಂಜಿನಿಯರ್ಗಳ 38ನೇ ರಾಷ್ಟ್ರೀಯ ಮಹಾ ಸಮಾವೇಶಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ನೀವು ಯಾವುದೇ ಕ್ಷೇತ್ರದಲ್ಲಿ ಸಂಶೋಧನೆ ಮಾಡಿ, ಸಾಧನೆ ಮಾಡಿ. ಅದೆಲ್ಲಕ್ಕೂ ಮೂಲ ನೀರೇ ಆಗಿರುತ್ತದೆ. ಭವಿಷ್ಯದಲ್ಲಿ ಕೂಡ ಸುಸ್ಥಿರ ಅಭಿವೃದ್ಧಿ ಕನಸು ಕಾಣಬೇಕೆಂದರೆ ಈಗಿನಿಂದಲೇ ನೀರಿನ ಸದ್ಬಳಕೆ ಅಗತ್ಯ. ಇದರಲ್ಲಿ ಎಂಜಿನಿಯರಿಂಗ್ ಕ್ಷೇತ್ರದ ಜವಾಬ್ದಾರಿ ದೊಡ್ಡದಿದೆ. ಆ ದೃಷ್ಟಿಯಲ್ಲಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆಗಳು ಹೆಚ್ಚಲಿ’ ಎಂದರು.</p>.<p>‘ಎಷ್ಟು ನೀರು ಲಭ್ಯವಿದೆ ಎನ್ನುವುದಕ್ಕಿಂತ; ಲಭ್ಯ ನೀರಲ್ಲಿ ಗುಣಮಟ್ಟದ ಪ್ರಮಾಣ ಎಷ್ಟು ಎನ್ನುವುದು ಮುಖ್ಯವಾಗುತ್ತದೆ’ ಎಂದೂ ಹೇಳಿದರು.</p>.<p>‘ಕೆಲವೇ ಗಂಟೆಗಳಲ್ಲಿ ಸಾವಿರಾರು ಕಂಪ್ಯೂಟರ್ಗಳನ್ನು ನಿರ್ಮಿಸುವ ಸಾಮರ್ಥ್ಯ ಈ ದೇಶಕ್ಕೆ ಇದೆ. ಆದರೂ ಲಕ್ಷಾಂತರ ನಿರುದ್ಯೋಗಿಗಳು ಇರುವುದು ಅಚ್ಚರಿ. ಈ ವಿಷಯ ಚರ್ಚೆಯಾಗಬೇಕಿದೆ. ಬಹುಶಃ ಮಾರುಕಟ್ಟೆ ಏನನ್ನು ಬಯಸುತ್ತದೆ ಎಂಬುದರ ಪರಿಕಲ್ಪನೆ ಯುವಜನರಿಗೆ ಇಲ್ಲ. ನಿರುದ್ಯೋಗ ನಿವಾರಣೆಯಾಗಬೇಕೆಂದರೆ ನಮ್ಮ ವಿಶ್ವವಿದ್ಯಾಲಯಗಳು ಇದರ ಅರಿವು ಮೂಡಿಸಬೇಕಿದೆ’ ಎಂದು ಸಲಹೆ ನೀಡಿದರು.</p>.<p>‘ಯುವ ಎಂಜಿನಿಯರ್ಗಳು ಹಣದ ಹಿಂದೆ ಹೋಗಬೇಡಿ. ಹಣವು ತಾತ್ಕಾಲಿಕ ಖುಷಿಯನ್ನಷ್ಟೇ ನೀಡುತ್ತದೆ. ನೆಮ್ಮದಿ ನೀಡುವುದಿಲ್ಲ. ನಿಮ್ಮಲ್ಲಿ ನೈತಿಕತೆ, ಪ್ರಾಮಾಣಿಕತೆ ಇದ್ದರೆ ಸಾಕು; ಯಶಸ್ಸಿನ ಜತೆಗೆ ಹಣವೂ ನಿಮ್ಮನ್ನು ಹಿಂಬಾಲಿಸುತ್ತದೆ’ ಎಂದು ಅವರು ಕಿವಿಮಾತು ಹೇಳಿದರು.</p>.<p>ಮುಖ್ಯ ಅತಿಥಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಬೆಳಗಾವಿ ಜಿಲ್ಲೆಯನ್ನು ಸಪ್ತ ನದಿಗಳ ನಾಡು ಎನ್ನುತ್ತೇವೆ. ಮಳೆಯಾಗದಿದ್ದರೆ ಏಳೂ ನದಿಗಳು ಕೆಲವೇ ತಿಂಗಳಲ್ಲಿ ಒಣಗುತ್ತವೆ. ನಾವು ನೀರನ್ನು ಎಷ್ಟು ಅಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿ ಇದು. ಅಭಿವೃದ್ಧಿ ಮಾತ್ರವಲ್ಲ; ಆರೋಗ್ಯದ ದೃಷ್ಟಿಯಿಂದಲೂ ನೀರಿನ ಮಿತಬಳಕೆ ಅನಿವಾರ್ಯವಾಗಿದೆ’ ಎಂದರು.</p>.<p>ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ನ ಚೇರ್ಮನ್ ಟಿ.ಜಿ.ಸೀತಾರಾಮ್, ಸಿವಿಲ್ ವಿಭಾಗದ ಮುಖ್ಯಸ್ಥ ಎಂ.ನಾಗರಾಜ, ಬೆಳಗಾವಿ ಘಟಕದ ಅಧ್ಯಕ್ಷ ಆರ್.ಟಿ.ಜಂಗಲ್, ಧಾರವಾಡ ಐಐಟಿ ಪ್ರೊ.ವೆಂಕಪ್ಪಯ್ಯ ದೇಸಾಯಿ ಸೇರಿದಂತೆ ಹಲವರು ಇದ್ದರು.</p>.<p>ದೇಶದ ವಿವಿಧಡೆಯಿಂದ ಬಂದ 550ಕ್ಕೂ ಹೆಚ್ಚು ಸಿವಿಲ್ ಎಂಜಿನಿಯರ್ಗಳು, 300 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ಚಂದ್ರಯಾನ, ಮಂಗಳಯಾನಗಳಲ್ಲೂ ನಾವು ನೀರನ್ನೇ ಹುಡುಕುತ್ತಿದ್ದೇವೆ. ಭವಿಷ್ಯದಲ್ಲಿ ನೀರು ಎಷ್ಟು ಮುಖ್ಯ ಎಂಬುದಕ್ಕೆ ಇದೇ ಸಾಕ್ಷಿ. ದೇಶದ ಸುಸ್ಥಿರ ಅಭಿವೃದ್ಧಿ ಆಗಬೇಕೆಂದರೆ ನೀರಿನ ಬಳಕೆ ಸರಿಯಾಗಿ ಆಗಬೇಕು’ ಎಂದು ಇನ್ಫೊಸಿಸ್ ಫೌಂಡೇಷನ್ನ ಸಂಸ್ಥಾಪಕ ಅಧ್ಯಕ್ಷೆ ಸುಧಾ ಮೂರ್ತಿ ಪ್ರತಿಪಾದಿಸಿದರು.</p>.<p>ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ವತಿಯಿಂದ ನಗರದಲ್ಲಿ ಆಯೋಜಿಸಿದ ಸಿವಿಲ್ ಎಂಜಿನಿಯರ್ಗಳ 38ನೇ ರಾಷ್ಟ್ರೀಯ ಮಹಾ ಸಮಾವೇಶಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ನೀವು ಯಾವುದೇ ಕ್ಷೇತ್ರದಲ್ಲಿ ಸಂಶೋಧನೆ ಮಾಡಿ, ಸಾಧನೆ ಮಾಡಿ. ಅದೆಲ್ಲಕ್ಕೂ ಮೂಲ ನೀರೇ ಆಗಿರುತ್ತದೆ. ಭವಿಷ್ಯದಲ್ಲಿ ಕೂಡ ಸುಸ್ಥಿರ ಅಭಿವೃದ್ಧಿ ಕನಸು ಕಾಣಬೇಕೆಂದರೆ ಈಗಿನಿಂದಲೇ ನೀರಿನ ಸದ್ಬಳಕೆ ಅಗತ್ಯ. ಇದರಲ್ಲಿ ಎಂಜಿನಿಯರಿಂಗ್ ಕ್ಷೇತ್ರದ ಜವಾಬ್ದಾರಿ ದೊಡ್ಡದಿದೆ. ಆ ದೃಷ್ಟಿಯಲ್ಲಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆಗಳು ಹೆಚ್ಚಲಿ’ ಎಂದರು.</p>.<p>‘ಎಷ್ಟು ನೀರು ಲಭ್ಯವಿದೆ ಎನ್ನುವುದಕ್ಕಿಂತ; ಲಭ್ಯ ನೀರಲ್ಲಿ ಗುಣಮಟ್ಟದ ಪ್ರಮಾಣ ಎಷ್ಟು ಎನ್ನುವುದು ಮುಖ್ಯವಾಗುತ್ತದೆ’ ಎಂದೂ ಹೇಳಿದರು.</p>.<p>‘ಕೆಲವೇ ಗಂಟೆಗಳಲ್ಲಿ ಸಾವಿರಾರು ಕಂಪ್ಯೂಟರ್ಗಳನ್ನು ನಿರ್ಮಿಸುವ ಸಾಮರ್ಥ್ಯ ಈ ದೇಶಕ್ಕೆ ಇದೆ. ಆದರೂ ಲಕ್ಷಾಂತರ ನಿರುದ್ಯೋಗಿಗಳು ಇರುವುದು ಅಚ್ಚರಿ. ಈ ವಿಷಯ ಚರ್ಚೆಯಾಗಬೇಕಿದೆ. ಬಹುಶಃ ಮಾರುಕಟ್ಟೆ ಏನನ್ನು ಬಯಸುತ್ತದೆ ಎಂಬುದರ ಪರಿಕಲ್ಪನೆ ಯುವಜನರಿಗೆ ಇಲ್ಲ. ನಿರುದ್ಯೋಗ ನಿವಾರಣೆಯಾಗಬೇಕೆಂದರೆ ನಮ್ಮ ವಿಶ್ವವಿದ್ಯಾಲಯಗಳು ಇದರ ಅರಿವು ಮೂಡಿಸಬೇಕಿದೆ’ ಎಂದು ಸಲಹೆ ನೀಡಿದರು.</p>.<p>‘ಯುವ ಎಂಜಿನಿಯರ್ಗಳು ಹಣದ ಹಿಂದೆ ಹೋಗಬೇಡಿ. ಹಣವು ತಾತ್ಕಾಲಿಕ ಖುಷಿಯನ್ನಷ್ಟೇ ನೀಡುತ್ತದೆ. ನೆಮ್ಮದಿ ನೀಡುವುದಿಲ್ಲ. ನಿಮ್ಮಲ್ಲಿ ನೈತಿಕತೆ, ಪ್ರಾಮಾಣಿಕತೆ ಇದ್ದರೆ ಸಾಕು; ಯಶಸ್ಸಿನ ಜತೆಗೆ ಹಣವೂ ನಿಮ್ಮನ್ನು ಹಿಂಬಾಲಿಸುತ್ತದೆ’ ಎಂದು ಅವರು ಕಿವಿಮಾತು ಹೇಳಿದರು.</p>.<p>ಮುಖ್ಯ ಅತಿಥಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಬೆಳಗಾವಿ ಜಿಲ್ಲೆಯನ್ನು ಸಪ್ತ ನದಿಗಳ ನಾಡು ಎನ್ನುತ್ತೇವೆ. ಮಳೆಯಾಗದಿದ್ದರೆ ಏಳೂ ನದಿಗಳು ಕೆಲವೇ ತಿಂಗಳಲ್ಲಿ ಒಣಗುತ್ತವೆ. ನಾವು ನೀರನ್ನು ಎಷ್ಟು ಅಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿ ಇದು. ಅಭಿವೃದ್ಧಿ ಮಾತ್ರವಲ್ಲ; ಆರೋಗ್ಯದ ದೃಷ್ಟಿಯಿಂದಲೂ ನೀರಿನ ಮಿತಬಳಕೆ ಅನಿವಾರ್ಯವಾಗಿದೆ’ ಎಂದರು.</p>.<p>ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ನ ಚೇರ್ಮನ್ ಟಿ.ಜಿ.ಸೀತಾರಾಮ್, ಸಿವಿಲ್ ವಿಭಾಗದ ಮುಖ್ಯಸ್ಥ ಎಂ.ನಾಗರಾಜ, ಬೆಳಗಾವಿ ಘಟಕದ ಅಧ್ಯಕ್ಷ ಆರ್.ಟಿ.ಜಂಗಲ್, ಧಾರವಾಡ ಐಐಟಿ ಪ್ರೊ.ವೆಂಕಪ್ಪಯ್ಯ ದೇಸಾಯಿ ಸೇರಿದಂತೆ ಹಲವರು ಇದ್ದರು.</p>.<p>ದೇಶದ ವಿವಿಧಡೆಯಿಂದ ಬಂದ 550ಕ್ಕೂ ಹೆಚ್ಚು ಸಿವಿಲ್ ಎಂಜಿನಿಯರ್ಗಳು, 300 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>