<p><strong>ಹುಕ್ಕೇರಿ:</strong> ‘ಹಿಂದೂ ಧರ್ಮ ಅವನತಿ ಅಂಚಿನಲ್ಲಿದ್ದಾಗ ಇಡೀ ದೇಶ ಸುತ್ತಿ ಹಿಂದೂ ಧರ್ಮ ಪುನರುಜ್ಜೀವನ ಮಾಡಿದ ಶ್ರೇಯಸ್ಸು ಆದಿಗುರು ಶಂಕರಾಚಾರ್ಯರಿಗೆ ಸಲ್ಲುವುದು’ ಎಂದು ಹಣಮಂತಚಾರ್ಯ ಚಿಪ್ಪಲಕಟ್ಟಿ ಹೇಳಿದರು.</p>.<p>ಭಾನುವಾರ ಪಟ್ಟಣದ ಕೋಟೆಭಾಗದಲ್ಲಿ ಶಿವಚಿದಂಬರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಂಕರಾಚಾರ್ಯ ಜಯಂತಿಯಲ್ಲಿ ಮಾತನಾಡಿದರು.</p>.<p>‘ಚಿಕ್ಕ ವಯಸ್ಸಿನಲ್ಲಿಯೆ ಸನ್ಯಾಸತ್ವ ಪಡೆದು ವೇದಾಧ್ಯಯನ ಮಾಡಿ ಕೇವಲ 32 ವರ್ಷದಲ್ಲಿ ದೇಶ ಸಂಚರಿಸಿ ಧರ್ಮ ಉಳಿಸಿ ಬೆಳೆಸಿದ್ದಾರೆ ಯಾವಾಗ ಧರ್ಮಕ್ಕೆ ಸಂಕಷ್ಟ ಎದುರಾಗುವುದೊ ಆವಾಗ, ದಿವ್ಯ ಶಕ್ತಿ ಹುಟ್ಟಿ ಬಂದು ಧರ್ಮದೋದ್ಧಾರ ಮಾಡುವುದು ಎಂದಿದ್ದಾರೆ’ ಎಂದರು.</p>.<p>ಪುರೋಹಿತರಾದ ಶ್ರೀಕಾಂತ ಜೋಶಿ, ಶ್ರೀಪಾದ ಜೋಶಿ, ಮಹಾದೇವ ಉಪಾಧ್ಯೆ, ದತ್ತಾತ್ರೆಯ ಜೋಶಿ ನೇತೃತ್ವದಲ್ಲಿ ರುದ್ರಾಭಿಷೇಕ ಜರುಗಿತು. ಮಾಧವ ದೇಶಪಾಂಡೆ ಪೂಜೆ ನೆರವೇರಿಸಿದರು. ನಂತರ ಶಂಕರ ನಾಮಾವಳಿಯನ್ನು ಸಾಮೂಹಿಕವಾಗಿ ಪಠಿಸಲಾಯಿತು. ಶ್ರೀಹರಿ ಭಜನಾ ಮಂಡಳಿಯವರು ಭಜನಾ ಸೇವೆಗೈದರು.</p>.<p><strong>ಸತ್ಕಾರ:</strong> ಘಟಪ್ರಭಾ ಶಿವಚಿದಂಬರ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಮಹಾಜನ ಅವರನ್ನು ಸತ್ಕರಿಸಲಾಯಿತು. ಭಕ್ತರಿಗೆ ಸಮಿತಿ ವತಿಯಿಂದ ಮಹಾಪ್ರಸಾದ ವ್ಯವಸ್ಥೆ ಮಾಡಲಾಯಿತು.</p>.<p>ಮುಖಂಡರಾದ ಡಿ.ಎಲ್.ಕುಲಕರ್ಣಿ, ಮಿಲಿಂದ ಕುಲಕರ್ಣಿ, ಗೋವಿಂದ ಮುತಾಲಿಕ, ದತ್ತಾತ್ರೆಯ ಕುಲಕರ್ಣಿ, ಸಂಜೀವ ಮುತಾಲಿಕ, ರಾಘು ಹುಕ್ಕೇರಿ, ಆನಂದ ನಾಡಗೌಡ, ಭಾವುರಾಮ ಕುಲಕರ್ಣಿ, ಡಾ.ಅಭಯ ಕಾಲಕುಂದ್ರಿ, ಪ್ರಸಾದ ಕುಲಕರ್ಣಿ, ವಿನಯ ದೇಸಾಯಿ, ಉಮೇಶ್ ಕುಲಕರ್ಣಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ:</strong> ‘ಹಿಂದೂ ಧರ್ಮ ಅವನತಿ ಅಂಚಿನಲ್ಲಿದ್ದಾಗ ಇಡೀ ದೇಶ ಸುತ್ತಿ ಹಿಂದೂ ಧರ್ಮ ಪುನರುಜ್ಜೀವನ ಮಾಡಿದ ಶ್ರೇಯಸ್ಸು ಆದಿಗುರು ಶಂಕರಾಚಾರ್ಯರಿಗೆ ಸಲ್ಲುವುದು’ ಎಂದು ಹಣಮಂತಚಾರ್ಯ ಚಿಪ್ಪಲಕಟ್ಟಿ ಹೇಳಿದರು.</p>.<p>ಭಾನುವಾರ ಪಟ್ಟಣದ ಕೋಟೆಭಾಗದಲ್ಲಿ ಶಿವಚಿದಂಬರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಂಕರಾಚಾರ್ಯ ಜಯಂತಿಯಲ್ಲಿ ಮಾತನಾಡಿದರು.</p>.<p>‘ಚಿಕ್ಕ ವಯಸ್ಸಿನಲ್ಲಿಯೆ ಸನ್ಯಾಸತ್ವ ಪಡೆದು ವೇದಾಧ್ಯಯನ ಮಾಡಿ ಕೇವಲ 32 ವರ್ಷದಲ್ಲಿ ದೇಶ ಸಂಚರಿಸಿ ಧರ್ಮ ಉಳಿಸಿ ಬೆಳೆಸಿದ್ದಾರೆ ಯಾವಾಗ ಧರ್ಮಕ್ಕೆ ಸಂಕಷ್ಟ ಎದುರಾಗುವುದೊ ಆವಾಗ, ದಿವ್ಯ ಶಕ್ತಿ ಹುಟ್ಟಿ ಬಂದು ಧರ್ಮದೋದ್ಧಾರ ಮಾಡುವುದು ಎಂದಿದ್ದಾರೆ’ ಎಂದರು.</p>.<p>ಪುರೋಹಿತರಾದ ಶ್ರೀಕಾಂತ ಜೋಶಿ, ಶ್ರೀಪಾದ ಜೋಶಿ, ಮಹಾದೇವ ಉಪಾಧ್ಯೆ, ದತ್ತಾತ್ರೆಯ ಜೋಶಿ ನೇತೃತ್ವದಲ್ಲಿ ರುದ್ರಾಭಿಷೇಕ ಜರುಗಿತು. ಮಾಧವ ದೇಶಪಾಂಡೆ ಪೂಜೆ ನೆರವೇರಿಸಿದರು. ನಂತರ ಶಂಕರ ನಾಮಾವಳಿಯನ್ನು ಸಾಮೂಹಿಕವಾಗಿ ಪಠಿಸಲಾಯಿತು. ಶ್ರೀಹರಿ ಭಜನಾ ಮಂಡಳಿಯವರು ಭಜನಾ ಸೇವೆಗೈದರು.</p>.<p><strong>ಸತ್ಕಾರ:</strong> ಘಟಪ್ರಭಾ ಶಿವಚಿದಂಬರ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಮಹಾಜನ ಅವರನ್ನು ಸತ್ಕರಿಸಲಾಯಿತು. ಭಕ್ತರಿಗೆ ಸಮಿತಿ ವತಿಯಿಂದ ಮಹಾಪ್ರಸಾದ ವ್ಯವಸ್ಥೆ ಮಾಡಲಾಯಿತು.</p>.<p>ಮುಖಂಡರಾದ ಡಿ.ಎಲ್.ಕುಲಕರ್ಣಿ, ಮಿಲಿಂದ ಕುಲಕರ್ಣಿ, ಗೋವಿಂದ ಮುತಾಲಿಕ, ದತ್ತಾತ್ರೆಯ ಕುಲಕರ್ಣಿ, ಸಂಜೀವ ಮುತಾಲಿಕ, ರಾಘು ಹುಕ್ಕೇರಿ, ಆನಂದ ನಾಡಗೌಡ, ಭಾವುರಾಮ ಕುಲಕರ್ಣಿ, ಡಾ.ಅಭಯ ಕಾಲಕುಂದ್ರಿ, ಪ್ರಸಾದ ಕುಲಕರ್ಣಿ, ವಿನಯ ದೇಸಾಯಿ, ಉಮೇಶ್ ಕುಲಕರ್ಣಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>