ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಿಯಲ್ಲಿ ಮಾತನಾಡುವಂತೆ ಕರ್ನಾಟಕದ ಲಾರಿ ಚಾಲಕನಿಗೆ ಹಲ್ಲೆ!

Last Updated 5 ಫೆಬ್ರುವರಿ 2021, 16:15 IST
ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರದ ಸತಾರಾ ಟೋಲ್‌ ಬಳಿ ಅಲ್ಲಿನ ಕಿಡಿಗೇಡಿಗಳು, ಕರ್ನಾಟಕದ ಲಾರಿ ಚಾಲಕರೊಬ್ಬರನ್ನು ಅರೆಬೆತ್ತಲೆಯಾಗಿಸಿ ಥಳಿಸಿ, ಮರಾಠಿಯಲ್ಲಿ ಮಾತನಾಡುವಂತೆ ಬಲವಂತ ಮಾಡಿದ ಶುಕ್ರವಾರ ಘಟನೆ ನಡೆದಿದೆ.

ಚಾಲಕ ಗೋವಿಂದ ಎನ್ನುವವರು ಹಲ್ಲೆಗೆ ಒಳಗಾದರು.

‘ಘಟನೆಯಿಂದ ನೊಂದಿರುವ ಹಾಗೂ ಅವಮಾನಿತವಾಗಿರುವ ಗೋವಿಂದ ಅಳುತ್ತಾ ನನಗೆ ಕರೆ ಮಾಡಿದ್ದರು. ನಾನು ವಿಷಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಗಮನಕ್ಕೆ ತಂದಿದ್ದೇನೆ. ತನಿಖೆ ನಡೆಸುವಂತೆ ಅಥಣಿ ಡಿವೈಎಸ್ಪಿಗೆ ಸೂಚನೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.

ಪ್ರತಿಕ್ರಿಯೆಗೆ ಎಸ್ಪಿ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT