<p><strong>ಬೆಳಗಾವಿ:</strong> ಮಹಾರಾಷ್ಟ್ರದ ಸತಾರಾ ಟೋಲ್ ಬಳಿ ಅಲ್ಲಿನ ಕಿಡಿಗೇಡಿಗಳು, ಕರ್ನಾಟಕದ ಲಾರಿ ಚಾಲಕರೊಬ್ಬರನ್ನು ಅರೆಬೆತ್ತಲೆಯಾಗಿಸಿ ಥಳಿಸಿ, ಮರಾಠಿಯಲ್ಲಿ ಮಾತನಾಡುವಂತೆ ಬಲವಂತ ಮಾಡಿದ ಶುಕ್ರವಾರ ಘಟನೆ ನಡೆದಿದೆ.</p>.<p>ಚಾಲಕ ಗೋವಿಂದ ಎನ್ನುವವರು ಹಲ್ಲೆಗೆ ಒಳಗಾದರು.</p>.<p>‘ಘಟನೆಯಿಂದ ನೊಂದಿರುವ ಹಾಗೂ ಅವಮಾನಿತವಾಗಿರುವ ಗೋವಿಂದ ಅಳುತ್ತಾ ನನಗೆ ಕರೆ ಮಾಡಿದ್ದರು. ನಾನು ವಿಷಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಗಮನಕ್ಕೆ ತಂದಿದ್ದೇನೆ. ತನಿಖೆ ನಡೆಸುವಂತೆ ಅಥಣಿ ಡಿವೈಎಸ್ಪಿಗೆ ಸೂಚನೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.</p>.<p>ಪ್ರತಿಕ್ರಿಯೆಗೆ ಎಸ್ಪಿ ಲಭ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಮಹಾರಾಷ್ಟ್ರದ ಸತಾರಾ ಟೋಲ್ ಬಳಿ ಅಲ್ಲಿನ ಕಿಡಿಗೇಡಿಗಳು, ಕರ್ನಾಟಕದ ಲಾರಿ ಚಾಲಕರೊಬ್ಬರನ್ನು ಅರೆಬೆತ್ತಲೆಯಾಗಿಸಿ ಥಳಿಸಿ, ಮರಾಠಿಯಲ್ಲಿ ಮಾತನಾಡುವಂತೆ ಬಲವಂತ ಮಾಡಿದ ಶುಕ್ರವಾರ ಘಟನೆ ನಡೆದಿದೆ.</p>.<p>ಚಾಲಕ ಗೋವಿಂದ ಎನ್ನುವವರು ಹಲ್ಲೆಗೆ ಒಳಗಾದರು.</p>.<p>‘ಘಟನೆಯಿಂದ ನೊಂದಿರುವ ಹಾಗೂ ಅವಮಾನಿತವಾಗಿರುವ ಗೋವಿಂದ ಅಳುತ್ತಾ ನನಗೆ ಕರೆ ಮಾಡಿದ್ದರು. ನಾನು ವಿಷಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಗಮನಕ್ಕೆ ತಂದಿದ್ದೇನೆ. ತನಿಖೆ ನಡೆಸುವಂತೆ ಅಥಣಿ ಡಿವೈಎಸ್ಪಿಗೆ ಸೂಚನೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.</p>.<p>ಪ್ರತಿಕ್ರಿಯೆಗೆ ಎಸ್ಪಿ ಲಭ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>