ಬೆಳಗಾವಿ: ಮಹಾರಾಷ್ಟ್ರದ ಸತಾರಾ ಟೋಲ್ ಬಳಿ ಅಲ್ಲಿನ ಕಿಡಿಗೇಡಿಗಳು, ಕರ್ನಾಟಕದ ಲಾರಿ ಚಾಲಕರೊಬ್ಬರನ್ನು ಅರೆಬೆತ್ತಲೆಯಾಗಿಸಿ ಥಳಿಸಿ, ಮರಾಠಿಯಲ್ಲಿ ಮಾತನಾಡುವಂತೆ ಬಲವಂತ ಮಾಡಿದ ಶುಕ್ರವಾರ ಘಟನೆ ನಡೆದಿದೆ.
ಚಾಲಕ ಗೋವಿಂದ ಎನ್ನುವವರು ಹಲ್ಲೆಗೆ ಒಳಗಾದರು.
‘ಘಟನೆಯಿಂದ ನೊಂದಿರುವ ಹಾಗೂ ಅವಮಾನಿತವಾಗಿರುವ ಗೋವಿಂದ ಅಳುತ್ತಾ ನನಗೆ ಕರೆ ಮಾಡಿದ್ದರು. ನಾನು ವಿಷಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಗಮನಕ್ಕೆ ತಂದಿದ್ದೇನೆ. ತನಿಖೆ ನಡೆಸುವಂತೆ ಅಥಣಿ ಡಿವೈಎಸ್ಪಿಗೆ ಸೂಚನೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.