‘ಸ್ಮಶಾನಕ್ಕೆ ಸಮರ್ಪಕ ಜಾಗ ಒದಗಿಸಬೇಕು. ಕೆರೆಯ ಜಾಗವನ್ನಾದರೂ ಕೊಡಿಸಬೇಕು’ ಎಂಬ ಸ್ಥಳೀಯರ ಒತ್ತಾಯಕ್ಕೆ, ‘ಹಾಗೆಲ್ಲ ಕೆರೆಯ ಜಾಗ ಕೊಡಲಾಗುವುದಿಲ್ಲ. ಅದಕ್ಕೆ ಸುಪ್ರೀಂ ಕೋರ್ಟ್ ಆದೇಶ ಅಡ್ಡಿಯಾಗುತ್ತದೆ. ಹೀಗಾಗಿ, ಗ್ರಾಮದಲ್ಲಿ ಯಾರಾದರೂ ಒಂದು ಎಕರೆ ಜಮೀನು ಕೊಡಲು ಸಿದ್ಧವಿದ್ದರೆ ತಿಳಿಸಿರಿ. ಕೂಡಲೇ ಖರೀದಿಸಿ, ಸ್ಮಶಾನ ಅಭಿವೃದ್ಧಿಪಡಿಸಿಕೊಡುವುದಕ್ಕೆ ಸಿದ್ಧವಿದ್ದೇವೆ’ ಎಂದು ತಿಳಿಸಿದರು.