<p><strong>ಬೆಳಗಾವಿ</strong>: ಹುಕ್ಕೇರಿ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ತನ್ನ ಸಹೋದರನ ಕೊಲೆ ಮಾಡಿ, ಆಕಸ್ಮಿಕ ಸಾವು ಸಂಭವಿಸಿದೆ ಎಂದು ಬಿಂಬಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಯಮಕನಮರಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಬಸಲಿಂಗ ವಿಠ್ಠಲ ರಾಮಾಪುರೆ ಮೃತರು. ಸಿದ್ದಪ್ಪ ವಿಠಲ ರಾಮಾಪುರೆ ಕೊಲೆ ಮಾಡಿದ ಆರೋಪಿ.</p>.<p>ಇಬ್ಬರೂ ಸಹೋದರರು ಕುಟುಂಬದ ಆಸ್ತಿಯಲ್ಲಿ ತಲಾ ನಾಲ್ಕು ಎಕರೆ ಕೃಷಿಭೂಮಿ ಹೊಂದಿದ್ದಾರೆ. ಆದರೆ, ಅದನ್ನು ಪಾಲು ಮಾಡಿರಲಿಲ್ಲ.</p>.<p>ಡಿ.18ರಂದು ಬೆಳಿಗ್ಗೆ 8ಕ್ಕೆ ಮದ್ಯ ಸೇವಿಸಿದ ಅಮಲಿನಲ್ಲಿ ಬಂದ ಬಸಲಿಂಗನು, ಸಿದ್ದಪ್ಪ ಅವರೊಂದಿಗೆ ಗಲಾಟೆ ಮಾಡಿದ. ತನ್ನ ಪಾಲಿನ ನಾಲ್ಕು ಎಕರೆ ಜಮೀನನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದ.</p>.<p>ಇದಕ್ಕೆ ಸಿದ್ದಪ್ಪ ನಿರಾಕರಿಸಿದಾಗ, ತಲೆ, ಬೆನ್ನು, ಹೊಟ್ಟೆ ಮತ್ತು ಕೈ-ಕಾಲುಗಳಿಗೆ ಬಿದಿರಿನ ಕೋಲುಗಳಿಂದ ಹೊಡೆದ. ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ. ‘ಹೆಂಚು ಬದಲಿಸುವಾಗ ಚಾವಣಿಯಿಂದ ಬಿದ್ದು ಮೃತಪಟ್ಟಿದ್ದಾರೆ’ ಎಂದು ಪೊಲೀಸರಿಗೆ ತಿಳಿಸುವಂತೆ ಸಿದ್ದಪ್ಪ ಅವರ ಪತ್ನಿಗೆ ಬೆದರಿಕೆ ಹಾಕಿದ.</p>.<p>ಡಿ.18ರಂದು ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದರು.</p>.<p>ಯಮಕನಮರಡಿ ಠಾಣೆ ಇನ್ಸ್ಪೆಕ್ಟರ್ ಜಾವೇದ್ ಮುಷಾಪುರಿ ತನಿಖೆ ಮಾಡುವ ಸಮಯದಲ್ಲಿ ಬಸಲಿಂಗ ಮನೆ ಚಾವಣಿಯಿಂದ ಬಿದ್ದು ಸಾವನ್ನಪ್ಪಿಲ್ಲ. ಬದಲಿಗೆ ಸಿದ್ದಪ್ಪನೇ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.</p>.<p>ಡಿ.27ರಂದು ಸಿದ್ದಪ್ಪ ಅವರ ತಾಯಿ ರತ್ನವ್ವ ಅವರು, ಕೊಲೆ ದೂರು ದಾಖಲಿಸಿದ್ದಾರೆ. ಅದನ್ನು ಆಧರಿಸಿ ಆರೋಪಿ ಬಂಧಿಸಲಾಗಿದೆ.</p>.<p><strong>ದಂಪತಿ ಕೊಲೆ ಪ್ರಕರಣ: ಇಬ್ಬರ ಬಂಧನ</strong></p><p>‘ಆಸ್ತಿ ವಿವಾದಕ್ಕೆ ಸಂಬಂಧಿಸಿ ಅಥಣಿ ಠಾಣೆಯಲ್ಲಿ 2024ರ ನವೆಂಬರ್ನಲ್ಲಿ ದಾಖಲಾಗಿದ್ದ ದಂಪತಿ ಕೊಲೆ ಪ್ರಕರಣ ಸಂಬಂಧ ಅಥಣಿಯ ಅಣ್ಣಪ್ಪ ಚವ್ಹಾಣ ರಾಜು ಚವ್ಹಾಣ ಎಂಬುವರನ್ನು ಬಂಧಿಸಲಾಗಿದೆ’ ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಹೇಳಿದರು.</p><p>‘₹500 ಹಣಕ್ಕಾಗಿ ಕೊಲೆ ನಡೆದಿರುವ ಬಗ್ಗೆ ಅಥಣಿ ಠಾಣೆಯಲ್ಲಿ 2025ರ ಅಕ್ಟೋಬರ್ನಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಔರಂಗಾಬಾದ್ ಮೂಲದ ಅಮೂಲ್ ಎಂಬಾತನನ್ನು ಬಂಧಿಸಿದ್ದೇವೆ’ ಎಂದರು.</p><p>‘ರಾಯಬಾಗ ಠಾಣೆಯಲ್ಲಿ ಡಿ.12ರಂದು ದಾಖಲಾಗಿದ್ದ ಶ್ರೀಗಂಧದ ಮರಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಸಿದ್ರಾಮ ಕೋಳಿ ಲಗಮಣ್ಣ ಕೋಳಿ ಹಾಗೂ ಭೀಮಣ್ಣ ನಾಗೋಡ ಎಂಬುವವರನ್ನು ಬಂಧಿಸಲಾಗಿದೆ. ನಾಲ್ಕು ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಹುಕ್ಕೇರಿ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ತನ್ನ ಸಹೋದರನ ಕೊಲೆ ಮಾಡಿ, ಆಕಸ್ಮಿಕ ಸಾವು ಸಂಭವಿಸಿದೆ ಎಂದು ಬಿಂಬಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಯಮಕನಮರಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಬಸಲಿಂಗ ವಿಠ್ಠಲ ರಾಮಾಪುರೆ ಮೃತರು. ಸಿದ್ದಪ್ಪ ವಿಠಲ ರಾಮಾಪುರೆ ಕೊಲೆ ಮಾಡಿದ ಆರೋಪಿ.</p>.<p>ಇಬ್ಬರೂ ಸಹೋದರರು ಕುಟುಂಬದ ಆಸ್ತಿಯಲ್ಲಿ ತಲಾ ನಾಲ್ಕು ಎಕರೆ ಕೃಷಿಭೂಮಿ ಹೊಂದಿದ್ದಾರೆ. ಆದರೆ, ಅದನ್ನು ಪಾಲು ಮಾಡಿರಲಿಲ್ಲ.</p>.<p>ಡಿ.18ರಂದು ಬೆಳಿಗ್ಗೆ 8ಕ್ಕೆ ಮದ್ಯ ಸೇವಿಸಿದ ಅಮಲಿನಲ್ಲಿ ಬಂದ ಬಸಲಿಂಗನು, ಸಿದ್ದಪ್ಪ ಅವರೊಂದಿಗೆ ಗಲಾಟೆ ಮಾಡಿದ. ತನ್ನ ಪಾಲಿನ ನಾಲ್ಕು ಎಕರೆ ಜಮೀನನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದ.</p>.<p>ಇದಕ್ಕೆ ಸಿದ್ದಪ್ಪ ನಿರಾಕರಿಸಿದಾಗ, ತಲೆ, ಬೆನ್ನು, ಹೊಟ್ಟೆ ಮತ್ತು ಕೈ-ಕಾಲುಗಳಿಗೆ ಬಿದಿರಿನ ಕೋಲುಗಳಿಂದ ಹೊಡೆದ. ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ. ‘ಹೆಂಚು ಬದಲಿಸುವಾಗ ಚಾವಣಿಯಿಂದ ಬಿದ್ದು ಮೃತಪಟ್ಟಿದ್ದಾರೆ’ ಎಂದು ಪೊಲೀಸರಿಗೆ ತಿಳಿಸುವಂತೆ ಸಿದ್ದಪ್ಪ ಅವರ ಪತ್ನಿಗೆ ಬೆದರಿಕೆ ಹಾಕಿದ.</p>.<p>ಡಿ.18ರಂದು ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದರು.</p>.<p>ಯಮಕನಮರಡಿ ಠಾಣೆ ಇನ್ಸ್ಪೆಕ್ಟರ್ ಜಾವೇದ್ ಮುಷಾಪುರಿ ತನಿಖೆ ಮಾಡುವ ಸಮಯದಲ್ಲಿ ಬಸಲಿಂಗ ಮನೆ ಚಾವಣಿಯಿಂದ ಬಿದ್ದು ಸಾವನ್ನಪ್ಪಿಲ್ಲ. ಬದಲಿಗೆ ಸಿದ್ದಪ್ಪನೇ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.</p>.<p>ಡಿ.27ರಂದು ಸಿದ್ದಪ್ಪ ಅವರ ತಾಯಿ ರತ್ನವ್ವ ಅವರು, ಕೊಲೆ ದೂರು ದಾಖಲಿಸಿದ್ದಾರೆ. ಅದನ್ನು ಆಧರಿಸಿ ಆರೋಪಿ ಬಂಧಿಸಲಾಗಿದೆ.</p>.<p><strong>ದಂಪತಿ ಕೊಲೆ ಪ್ರಕರಣ: ಇಬ್ಬರ ಬಂಧನ</strong></p><p>‘ಆಸ್ತಿ ವಿವಾದಕ್ಕೆ ಸಂಬಂಧಿಸಿ ಅಥಣಿ ಠಾಣೆಯಲ್ಲಿ 2024ರ ನವೆಂಬರ್ನಲ್ಲಿ ದಾಖಲಾಗಿದ್ದ ದಂಪತಿ ಕೊಲೆ ಪ್ರಕರಣ ಸಂಬಂಧ ಅಥಣಿಯ ಅಣ್ಣಪ್ಪ ಚವ್ಹಾಣ ರಾಜು ಚವ್ಹಾಣ ಎಂಬುವರನ್ನು ಬಂಧಿಸಲಾಗಿದೆ’ ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಹೇಳಿದರು.</p><p>‘₹500 ಹಣಕ್ಕಾಗಿ ಕೊಲೆ ನಡೆದಿರುವ ಬಗ್ಗೆ ಅಥಣಿ ಠಾಣೆಯಲ್ಲಿ 2025ರ ಅಕ್ಟೋಬರ್ನಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಔರಂಗಾಬಾದ್ ಮೂಲದ ಅಮೂಲ್ ಎಂಬಾತನನ್ನು ಬಂಧಿಸಿದ್ದೇವೆ’ ಎಂದರು.</p><p>‘ರಾಯಬಾಗ ಠಾಣೆಯಲ್ಲಿ ಡಿ.12ರಂದು ದಾಖಲಾಗಿದ್ದ ಶ್ರೀಗಂಧದ ಮರಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಸಿದ್ರಾಮ ಕೋಳಿ ಲಗಮಣ್ಣ ಕೋಳಿ ಹಾಗೂ ಭೀಮಣ್ಣ ನಾಗೋಡ ಎಂಬುವವರನ್ನು ಬಂಧಿಸಲಾಗಿದೆ. ನಾಲ್ಕು ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>