ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಅಗಲಿಕೆ: ಚಿಂಚಣಿಯಲ್ಲಿ ಮಡುಗಟ್ಟಿದ ಶೋಕ
ಅಲ್ಲಮಪ್ರಭು ಸ್ವಾಮೀಜಿ ನಿಧನ: ಅಂತಿಮ ದರ್ಶನ ಪಡೆದ ಭಕ್ತರು
ಸುಧಾಕರ ತಳವಾರ
Published : 13 ನವೆಂಬರ್ 2023, 5:03 IST
Last Updated : 13 ನವೆಂಬರ್ 2023, 5:03 IST
ಫಾಲೋ ಮಾಡಿ
Comments
ಅಲ್ಲಮಪ್ರಭು ಸ್ವಾಮೀಜಿ ಚಿಂಚಣಿ ಮಠವನ್ನು ಕನ್ನಡದ ಮಠವನ್ನಾಗಿ ಪರಿವರ್ತಿಸಿದ್ದರು. ಕನ್ನಡ, ಮರಾಠಿ ಸಂಸ್ಕೃತಿ ಬೆಸೆದ ಅವರು, ಈ ಭಾಗದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದರು. ಜನಪ್ರತಿನಿಧಿಗಳ ಮೇಲೆ ಒತ್ತಡ ತಂದು, ರೈತರಿಗಾಗಿ ನೀರಾವರಿ ವ್ಯವಸ್ಥೆ ಮಾಡಿಸಿದ್ದರು. ಇಂದು ಅವರು ನಮ್ಮ ಮಧ್ಯೆ ಇಲ್ಲದಿರುವುದು ವಿಷಾದ ಸಂಗತಿ
-ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ನಿಡಸೋಸಿ
ಯುವ ಮಠಾಧೀಶರಾಗಿ ಚಿಂಚಣಿ ಮಠಕ್ಕೆ ಬಂದು, ಮೂರು ದಶಕಗಳಿಂದ ತಮ್ಮ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದರು. ಕ್ರಿಯಾಶೀಲ ಜಂಗಮರಾಗಿದ್ದ ಪೂಜ್ಯರು, ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿ ಯುವಪೀಳಿಗೆಗೆ ಆದರ್ಶಪ್ರಾಯರಾಗಿದ್ದರು. ಧರ್ಮ, ತತ್ವ, ಇತಿಹಾಸ, ಸಾಹಿತ್ಯ, ಕನ್ನಡಪ್ರಜ್ಞೆ ಹೀಗೆ... ವಿವಿಧ ನೆಲೆಗಟ್ಟಿನಲ್ಲಿ 51ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಪ್ರಕಟಿಸಿರುವುದು ಅವರ ಪುಸ್ತಕ ಪ್ರೀತಿಗೆ ಸಾಕ್ಷಿ. ಕೆಎಲ್ಇ ಸಂಸ್ಥೆಯೊಂದಿಗೆ ಭಾವನಾತ್ಮಕವಾದ ಒಡನಾಟ ಹೊಂದಿದ್ದ ಶ್ರೀಗಳ ನಿಧನದಿಂದ ನಾಡಿಗೆ ತುಂಬಲಾರದ ಹಾನಿಯಾಗಿದೆ.
-ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ, ಕೆಎಲ್ಇ ಸಂಸ್ಥೆ
‘ಕನ್ನಡದ ಸ್ವಾಮೀಜಿ’ ಎಂದೇ ಖ್ಯಾತರಾಗಿದ್ದ ಅಲ್ಲಮಪ್ರಭು ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಗಡಿಯಲ್ಲಿ ಹಲವು ದಶಕಗಳಿಂದ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಿ, ಜನರ ಮನಗೆದ್ದಿದ್ದರು
ಅಣ್ಣಾಸಾಹೇಬ ಜೊಲ್ಲೆ, ಸಂಸದ
ಅಲ್ಲಮಪ್ರಭು ಸ್ವಾಮೀಜಿ ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದ್ದರು. ಸದಾ ಕ್ರಿಯಾಶೀಲ ಮತ್ತು ಅಧ್ಯಯನಶೀಲರಾಗಿದ್ದರು. ಭೇಟಿಯಾದಾಗಲೆಲ್ಲ ನನಗೆ ಪುಸ್ತಕ ನೀಡಿ, ಓದಲು ಪ್ರೇರೇಪಿಸುತ್ತಿದ್ದರು. ಅವರ ಅಗಲಿಕೆ ದುಃಖ ತರಿಸಿದೆ
-ಮಹಾಂತೇಶ ಕವಟಗಿಮಠ, ನಿರ್ದೇಶಕ, ಕೆಎಲ್ಇ ಸಂಸ್ಥೆ
ಚಿಂಚಣಿಯ ಮಠದ ಅಲ್ಲಮಪ್ರಭು ಸ್ವಾಮೀಜಿ ಬಸವ ತತ್ವಗಳನ್ನು ಪ್ರಚುರಪಡಿಸುತ್ತಲೇ, ನಾಡು–ನುಡಿ ರಕ್ಷಣೆಗಾಗಿ ಹಲವು ರಚನಾತ್ಮಕ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದರು. ಜನರಲ್ಲಿ ಕನ್ನಡ ಪ್ರಜ್ಞೆ ಮೂಡಿಸುವಲ್ಲಿ ಸಫಲವಾಗಿದ್ದರು
-ಶಶಿಕಲಾ ಜೊಲ್ಲೆ, ಶಾಸಕಿ, ನಿಪ್ಪಾಣಿ
ಗಡಿಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸುವಲ್ಲಿ ಅಲ್ಲಮಪ್ರಭು ಸ್ವಾಮೀಜಿ ಮಹತ್ವದ ಪಾತ್ರ ವಹಿಸುತ್ತಿದ್ದರು. ಅಲ್ಲದೆ, ಕನ್ನಡ–ಮರಾಠಿ ಬಾಂಧವ್ಯಕ್ಕೆ ಅವರ ಕೊಡುಗೆ ಅಪಾರವಾಗಿತ್ತು. ಶ್ರೀಗಳ ಅಗಲಿಕೆ ಗಡಿ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ –
ಅಶೋಕ ಚಂದರಗಿ, ಅಧ್ಯಕ್ಷ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ