'ಘಟನೆಯಲ್ಲಿ ಹಲವು ವಾಹನಗಳು ಬೆಂಕಿಗಾಹುತಿ ಆಗಿವೆ. ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅವರಲ್ಲಿ ಯಾರಿಗೂ ಪ್ರಾಣಾಪಾಯ ಇಲ್ಲ. ಪೊಲೀಸ್ ತುಕಡಿಗಳು ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, ಸರ್ಪಗಾವಲು ಏರ್ಪಡಿಸಲಾಗಿದೆ. ಜನ ಭಯಪಡಬೇಕಿಗಿಲ್ಲ. ಬೆಳಗಾವಿ ನಗರ ಹಾಗೂ ಸುತ್ತಲಿನ ಜನ ಗಾಳಿಮಾತಿಗೆ ಕಿವಿಗೊಡದೇ ಸಂಯಮದಿಂದ ವರ್ತಿಸಬೇಕು' ಎಂದೂ ಅವರು ಮನವಿ ಮಾಡಿದರು.