<p><strong>ಬೆಳಗಾವಿ:</strong> ನಗರದ ವಿವಿಧೆಡೆ ಮಂಗಳವಾರ ಮಟ್ಕಾ ಆಟದಲ್ಲಿ ತೊಡಗಿದ್ದ ನಾಲ್ವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.</p>.<p>ಇಲ್ಲಿನ ಚಿತ್ರಾ ಚಲನಚಿತ್ರದ ಹಿಂಭಾಗದಲ್ಲಿ ತಾಲ್ಲೂಕಿನ ಕಂಗ್ರಾಳಿಯ ಪ್ರಭಾಕರ ಪಾಟೀಲ ಎಂಬಾತನನ್ನು ಖಡೇ ಬಜಾರ್ ಠಾಣೆ ಪೊಲೀಸರು ಬಂಧಿಸಿ, ₹1,070 ನಗದು ವಶಕ್ಕೆ ಪಡೆದಿದ್ದಾರೆ.</p>.<p>ಬಿ.ಎಸ್.ಯಡಿಯೂರಪ್ಪ ಮಾರ್ಗದ ರಸ್ತೆಯಲ್ಲಿ ಶಹಾಪುರದ ಬಸವನ ಗಲ್ಲಿಯ ಗೌತಮ ಜೈನ ಎಂಬಾತನನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹1,500 ನಗದು ವಶಕ್ಕೆ ಪಡೆಯಲಾಗಿದೆ.</p>.<p>ಅನಗೋಳದ ಅಂಬೇಡ್ಕರ್ ಕೆರೆ ಬಳಿ ಭಜಂತ್ರಿ ಗಲ್ಲಿಯ ಶಂಕರ ಭಜಂತ್ರಿ, ಸಂಜೀವ ಭಜಂತ್ರಿ ಎಂಬುವವರನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹810 ನಗದು ವಶಕ್ಕೆ ಪಡೆಯಲಾಗಿದೆ.</p>.<h2>ಜೂಜಾಟ: ಎಂಟು ಜನರ ಬಂಧನ</h2>.<p>ಬೆಳಗಾವಿ: ತಾಲ್ಲೂಕಿನ ಧಾಮಣೆ ಗ್ರಾಮದಲ್ಲಿ ಬುಧವಾರ ಜೂಜಾಟದಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಶಹಾಪುರದ ಮಲ್ಲಿಕಾರ್ಜುನ ಮೇದಾರ, ಶ್ರೀರಾಮ ಪೋಟೆ, ಓಂ ಅಪ್ಟೇಕರ, ಸ್ವಪ್ನಿಲ್ ದೇಸಾಯಿ, ವಿನಾಯಕ ಗವಳಿ, ರಾಜು ಬಾಳೇಕುಂದ್ರಿ, ವಡಗಾವಿಯ ಸಾಯಿರಾಜ ಬಿರ್ಜೆ, ಅನಿಕೇತ ಡೋಲೇಕಾರ ಬಂಧಿತರು. ಅವರಿಂದ ₹7,700 ನಗದು ವಶಕ್ಕೆ ಪಡೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ನಗರದ ವಿವಿಧೆಡೆ ಮಂಗಳವಾರ ಮಟ್ಕಾ ಆಟದಲ್ಲಿ ತೊಡಗಿದ್ದ ನಾಲ್ವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.</p>.<p>ಇಲ್ಲಿನ ಚಿತ್ರಾ ಚಲನಚಿತ್ರದ ಹಿಂಭಾಗದಲ್ಲಿ ತಾಲ್ಲೂಕಿನ ಕಂಗ್ರಾಳಿಯ ಪ್ರಭಾಕರ ಪಾಟೀಲ ಎಂಬಾತನನ್ನು ಖಡೇ ಬಜಾರ್ ಠಾಣೆ ಪೊಲೀಸರು ಬಂಧಿಸಿ, ₹1,070 ನಗದು ವಶಕ್ಕೆ ಪಡೆದಿದ್ದಾರೆ.</p>.<p>ಬಿ.ಎಸ್.ಯಡಿಯೂರಪ್ಪ ಮಾರ್ಗದ ರಸ್ತೆಯಲ್ಲಿ ಶಹಾಪುರದ ಬಸವನ ಗಲ್ಲಿಯ ಗೌತಮ ಜೈನ ಎಂಬಾತನನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹1,500 ನಗದು ವಶಕ್ಕೆ ಪಡೆಯಲಾಗಿದೆ.</p>.<p>ಅನಗೋಳದ ಅಂಬೇಡ್ಕರ್ ಕೆರೆ ಬಳಿ ಭಜಂತ್ರಿ ಗಲ್ಲಿಯ ಶಂಕರ ಭಜಂತ್ರಿ, ಸಂಜೀವ ಭಜಂತ್ರಿ ಎಂಬುವವರನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹810 ನಗದು ವಶಕ್ಕೆ ಪಡೆಯಲಾಗಿದೆ.</p>.<h2>ಜೂಜಾಟ: ಎಂಟು ಜನರ ಬಂಧನ</h2>.<p>ಬೆಳಗಾವಿ: ತಾಲ್ಲೂಕಿನ ಧಾಮಣೆ ಗ್ರಾಮದಲ್ಲಿ ಬುಧವಾರ ಜೂಜಾಟದಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಶಹಾಪುರದ ಮಲ್ಲಿಕಾರ್ಜುನ ಮೇದಾರ, ಶ್ರೀರಾಮ ಪೋಟೆ, ಓಂ ಅಪ್ಟೇಕರ, ಸ್ವಪ್ನಿಲ್ ದೇಸಾಯಿ, ವಿನಾಯಕ ಗವಳಿ, ರಾಜು ಬಾಳೇಕುಂದ್ರಿ, ವಡಗಾವಿಯ ಸಾಯಿರಾಜ ಬಿರ್ಜೆ, ಅನಿಕೇತ ಡೋಲೇಕಾರ ಬಂಧಿತರು. ಅವರಿಂದ ₹7,700 ನಗದು ವಶಕ್ಕೆ ಪಡೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>