ಬೆಳಗಾವಿಯ ನಾಥಪೈ ವೃತ್ತದಿಂದ ಖಾಸಬಾಗದ ಬಸವೇಶ್ವರ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಯಲ್ಲೇ ತರಕಾರಿ ಮಾರುತ್ತಿರುವುದು
– ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಟೆಂಡರ್ ಕರೆದಿದ್ದೇವೆ’ ವಿವಿಧ ಕಾರಣಗಳಿಂದ ಮಳಿಗೆಗಳು ಹಂಚಿಕೆಯಾಗಿರಲಿಲ್ಲ. ಸ್ಮಾರ್ಟ್ ಸಿಟಿ ಅಭಿವೃದ್ಧಿ ಸಮಿತಿ ಮೂಲಕ ಟೆಂಡರ್ ಕರೆದಿದ್ದೇವೆ. ಈ ಪ್ರಕ್ರಿಯೆ ಮುಗಿದ ನಂತರ ಎಲ್ಲ ಮಳಿಗೆಗಳು ವ್ಯಾಪಾರಿಗಳಿಗೆ ಹಂಚಿಕೆಯಾಗಲಿವೆ–ಸೋಮಲಿಂಗ ಗೆಣ್ಣೂರ ವ್ಯವಸ್ಥಾಪಕ ನಿರ್ದೇಶಕ ಸ್ಮಾರ್ಟ್ಸಿಟಿ ಯೋಜನೆ
ನಾವು ದಿನವಿಡೀ ದುಡಿದು ಒಂದಿಷ್ಟು ಲಾಭ ಗಳಿಸುವುದೇ ಈಗ ಕಷ್ಟವಾಗಿದೆ. ಹಾಗಾಗಿ ಈ ಮಳಿಗೆಗಳ ಬಾಡಿಗೆಗೆ ವಿಧಿಸುವ ಶುಲ್ಕ ವ್ಯಾಪಾರಿಗಳಿಗೆ ಕೈಗೆಟುಕುವಂತಿರಬೇಕು- ಅನ್ನಪೂರ್ಣ ಗುಂಡ್ಲೂರ, ವ್ಯಾಪಾರಿ ಮಹಿಳೆ
ಏನೇ ತೊಡಕುಗಳಿದ್ದರೂ ತ್ವರಿತವಾಗಿ ಬಗೆಹರಿಸಿ ಮಳಿಗೆಗಳನ್ನು ವ್ಯಾಪಾರಿಗಳಿಗೆ ಹಂಚುವ ಕಾರ್ಯವಾಗಬೇಕು.–ನಬೀಸಾಬ್ ಬಾಗವಾನ್ ವ್ಯಾಪಾರಿ
‘ಬಿಸಿಲಲ್ಲಿ ಮಾರುವುದು ತಪ್ಪುತ್ತದೆ’ನಾನು ಹಲವು ವರ್ಷಗಳಿಂದ ರಸ್ತೆಬದಿಯೇ ತರಕಾರಿ ಮಾರುತ್ತಿದ್ದೇನೆ. ಈಗ ವಯಸ್ಸಾಗಿದೆ. ವಿವಿಧ ಪ್ರಕ್ರಿಯೆ ಮುಗಿಸಿ ಎಲ್ಲ ವ್ಯಾಪಾರಿಗಳಿಗೆ ಮಳಿಗೆಗಳನ್ನು ಹಂಚಿದರೆ ಬಿಸಿಲಿನಲ್ಲಿ ಕುಳಿತು ಮಾರಾಟ ಮಾಡುವುದು ತಪ್ಪುತ್ತದೆ.–ಸರಸ್ವತಿ ಯಳ್ಳೂರ ವ್ಯಾಪಾರಿ ಮಹಿಳೆ
ಹಂಚಿಕೆಯಾದರೆ ಅನುಕೂಲ’ ಐದು ವರ್ಷಗಳಿಂದ ಇಲ್ಲಿ ವಿವಿಧ ತಳಿಗಳ ಸಸಿ ಮಾರುತ್ತಿದ್ದೇನೆ. ಅದರಲ್ಲಿ ಬರುವ ಆದಾಯದಲ್ಲೇ ಬದುಕು ಸಾಗಿಸುತ್ತಿರುವೆ. ವ್ಯಾಪಾರಿ ಮಳಿಗೆಗಳು ಹಂಚಿಕೆಯಾದರೆ ಅನುಕೂಲ–ರಾಮಾ ಸಾತ್ಪುತೆ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.