<p><strong>ಬೆಳಗಾವಿ</strong>: ಒಂದೆಡೆ ಅತಿವೃಷ್ಟಿಯಿಂದ ರಾಜ್ಯದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಮತ್ತೊಂದೆಡೆ ಜಮೀನಿನಲ್ಲಿ ಉಳಿದ ಅಷ್ಟಿಷ್ಟು ಬೆಳೆಗೂ ಉತ್ತಮ ದರ ಸಿಗುತ್ತಿಲ್ಲ. ಹೀಗಾಗಿ ಬೆಂಬಲ ಬೆಲೆ ಯೋಜನೆಯಡಿ ಈರುಳ್ಳಿ ಖರೀದಿಸಲು ಸರ್ಕಾರದಿಂದ ಕೇಂದ್ರಗಳನ್ನು ತೆರೆಯಬೇಕೆಂಬ ಬೇಡಿಕೆ ಹೆಚ್ಚಿದೆ.</p>.<p>‘ಹೆಸರು, ಉದ್ದು, ಸೂರ್ಯಕಾಂತಿ ಮಾದರಿಯಲ್ಲೇ, ಈರುಳ್ಳಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕು. ಕೆಜಿಗೆ ₹50 ದರ ನೀಡಬೇಕು’ ಎಂದು ರೈತ ಮುಖಂಡ ಚೂನಪ್ಪ ಪೂಜೇರಿ ಒತ್ತಾಯಿಸಿದ್ದಾರೆ.</p>.<p><strong>₹100ರಿಂದ ₹1,200 ದರ</strong></p>.<p>ಬೆಳಗಾವಿ ಎಪಿಎಂಸಿಗೆ ಬುಧವಾರ 15,991 ಕ್ವಿಂಟಲ್ ಈರುಳ್ಳಿ ಆವಕವಾಗಿದೆ. ಹುಬ್ಬಳ್ಳಿ ಎಪಿಎಂಸಿಗೆ ನಿತ್ಯ ಆವಕದ ಪ್ರಮಾಣ 12 ಸಾವಿರ ಕ್ವಿಂಟಲ್ ಇದೆ. ರಾಜ್ಯದಲ್ಲಿ ಬೆಳೆದ ಈರುಳ್ಳಿ ದರ ಎರಡೂ ಎಪಿಎಂಸಿಗಳಲ್ಲಿ ಬುಧವಾರ ₹100 ರಿಂದ ₹ 1,200 ರವರೆಗೆ ಇತ್ತು.</p>.<p>ಮಹಾರಾಷ್ಟ್ರದಿಂದ ಬರುತ್ತಿರುವ ಈರುಳ್ಳಿ (ಹಳೇಗಡ್ಡೆ) ದರ ಮಾತ್ರ ಕ್ವಿಂಟಲ್ಗೆ ₹500ರಿಂದ ₹1,800ರವರೆಗೆ ಇದೆ. ಕಳೆದ ವರ್ಷ ಇದೇ ವೇಳೆ ಈರುಳ್ಳಿ ಕ್ವಿಂಟಲ್ಗೆ ₹ 500 ರಿಂದ ₹4,200 ದರಕ್ಕೆ ಮಾರಾಟವಾಗಿತ್ತು.</p>.<p>‘ಮಹಾರಾಷ್ಟ್ರದಲ್ಲಿ ಬೇಸಿಗೆಯಲ್ಲಿ ಬೆಳೆದಿದ್ದ ಈರುಳ್ಳಿಯದ್ದು ಹೇರಳ ಸಂಗ್ರಹವಿದೆ. ಅಲ್ಲಿಂದ ವಿವಿಧ ರಾಜ್ಯಗಳ ಮಾರುಕಟ್ಟೆಗೆ ಸರಬರಾಜು ಆಗುತ್ತಿದೆ. ಬಾಂಗ್ಲಾದೇಶಕ್ಕೆ ರಫ್ತು ನಿಂತಿದ್ದರಿಂದ ರಾಜ್ಯದ ಈರುಳ್ಳಿಗೆ ಬೇಡಿಕೆ ಕುಸಿದಿದೆ’ ಎಂದು ಹುಬ್ಬಳ್ಳಿ ಎಪಿಎಂಸಿ ಕಾರ್ಯದರ್ಶಿ ಕೆ.ಎಚ್.ಗುರುಪ್ರಸಾದ ತಿಳಿಸಿದರು. </p>.<p>‘ಹಿಂದಿನ ವರ್ಷ ಎಕರೆಗೆ 100 ಚೀಲ (ತಲಾ 50 ಕೆಜಿ) ಇಳುವರಿ ಬಂದಿತ್ತು. ಈ ಸಲ ಅತಿವೃಷ್ಟಿಯಿಂದ 35 ಚೀಲ ಇಳುವರಿ ಬಂದಿದೆ. ಅದಕ್ಕೂ ಉತ್ತಮ ಧಾರಣೆ ಸಿಗುತ್ತಿಲ್ಲ’ ಎಂದು ಬಾಗಲಕೋಟೆ ಜಿಲ್ಲೆಯ ಯಂಡಿಗೇರಿಯ ರೈತ ತಿರುಪತಿ ಮಾದರ ತಿಳಿಸಿದರು.</p>.<p>‘₹2 ಲಕ್ಷ ವ್ಯಯಿಸಿ 10 ಎಕರೆಯಲ್ಲಿ ಈರುಳ್ಳಿ ಬೆಳೆದಿರುವೆ. ಸಾಮಾನ್ಯ ದಿನಗಳಲ್ಲಿ 1,000 ಚೀಲಗಳಷ್ಟು (ತಲಾ 50 ಕೆಜಿ) ಇಳುವರಿ ಬರುತ್ತಿತ್ತು. ಈ ಬಾರಿ ಅತಿವೃಷ್ಟಿಯಿಂದ ನಿರೀಕ್ಷಿತ ಫಸಲು ಬಂದಿಲ್ಲ’ ಎಂದು ರಾಮದುರ್ಗ ತಾಲ್ಲೂಕಿನ ಸಾಲಾಪುರದ ರೈತ ಮಂಜುನಾಥ ತೋಟಗಟ್ಟಿ ಹೇಳಿದರು.</p>.<div><blockquote>ಬೆಳಗಾವಿ ಜಿಲ್ಲೆಯಲ್ಲಿ 3310 ಹೆಕ್ಟೇರ್ನಲ್ಲಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಈಗ ಉಳಿದ ಬೆಳೆಗೆ ಬೆಂಬಲ ಬೆಲೆ ನೀಡುವ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ</blockquote><span class="attribution">- ಮಹಾಂತೇಶ ಮುರಗೋಡ ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ ಬೆಳಗಾವಿ</span></div>.<div><blockquote>ಕ್ವಿಂಟಲ್ಗೆ ₹2 ಸಾವಿರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾದರೆ ಮಾತ್ರ ನಮಗೆ ಅನುಕೂಲ. ಈಗ ಕ್ವಿಂಟಲ್ಗೆ ₹600ರಿಂದ ₹700ಕ್ಕೆ ಮಾರುತ್ತಿದೆ</blockquote><span class="attribution"> ಮಂಜುನಾಥ ತೋಟಗಟ್ಟಿ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಒಂದೆಡೆ ಅತಿವೃಷ್ಟಿಯಿಂದ ರಾಜ್ಯದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಮತ್ತೊಂದೆಡೆ ಜಮೀನಿನಲ್ಲಿ ಉಳಿದ ಅಷ್ಟಿಷ್ಟು ಬೆಳೆಗೂ ಉತ್ತಮ ದರ ಸಿಗುತ್ತಿಲ್ಲ. ಹೀಗಾಗಿ ಬೆಂಬಲ ಬೆಲೆ ಯೋಜನೆಯಡಿ ಈರುಳ್ಳಿ ಖರೀದಿಸಲು ಸರ್ಕಾರದಿಂದ ಕೇಂದ್ರಗಳನ್ನು ತೆರೆಯಬೇಕೆಂಬ ಬೇಡಿಕೆ ಹೆಚ್ಚಿದೆ.</p>.<p>‘ಹೆಸರು, ಉದ್ದು, ಸೂರ್ಯಕಾಂತಿ ಮಾದರಿಯಲ್ಲೇ, ಈರುಳ್ಳಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕು. ಕೆಜಿಗೆ ₹50 ದರ ನೀಡಬೇಕು’ ಎಂದು ರೈತ ಮುಖಂಡ ಚೂನಪ್ಪ ಪೂಜೇರಿ ಒತ್ತಾಯಿಸಿದ್ದಾರೆ.</p>.<p><strong>₹100ರಿಂದ ₹1,200 ದರ</strong></p>.<p>ಬೆಳಗಾವಿ ಎಪಿಎಂಸಿಗೆ ಬುಧವಾರ 15,991 ಕ್ವಿಂಟಲ್ ಈರುಳ್ಳಿ ಆವಕವಾಗಿದೆ. ಹುಬ್ಬಳ್ಳಿ ಎಪಿಎಂಸಿಗೆ ನಿತ್ಯ ಆವಕದ ಪ್ರಮಾಣ 12 ಸಾವಿರ ಕ್ವಿಂಟಲ್ ಇದೆ. ರಾಜ್ಯದಲ್ಲಿ ಬೆಳೆದ ಈರುಳ್ಳಿ ದರ ಎರಡೂ ಎಪಿಎಂಸಿಗಳಲ್ಲಿ ಬುಧವಾರ ₹100 ರಿಂದ ₹ 1,200 ರವರೆಗೆ ಇತ್ತು.</p>.<p>ಮಹಾರಾಷ್ಟ್ರದಿಂದ ಬರುತ್ತಿರುವ ಈರುಳ್ಳಿ (ಹಳೇಗಡ್ಡೆ) ದರ ಮಾತ್ರ ಕ್ವಿಂಟಲ್ಗೆ ₹500ರಿಂದ ₹1,800ರವರೆಗೆ ಇದೆ. ಕಳೆದ ವರ್ಷ ಇದೇ ವೇಳೆ ಈರುಳ್ಳಿ ಕ್ವಿಂಟಲ್ಗೆ ₹ 500 ರಿಂದ ₹4,200 ದರಕ್ಕೆ ಮಾರಾಟವಾಗಿತ್ತು.</p>.<p>‘ಮಹಾರಾಷ್ಟ್ರದಲ್ಲಿ ಬೇಸಿಗೆಯಲ್ಲಿ ಬೆಳೆದಿದ್ದ ಈರುಳ್ಳಿಯದ್ದು ಹೇರಳ ಸಂಗ್ರಹವಿದೆ. ಅಲ್ಲಿಂದ ವಿವಿಧ ರಾಜ್ಯಗಳ ಮಾರುಕಟ್ಟೆಗೆ ಸರಬರಾಜು ಆಗುತ್ತಿದೆ. ಬಾಂಗ್ಲಾದೇಶಕ್ಕೆ ರಫ್ತು ನಿಂತಿದ್ದರಿಂದ ರಾಜ್ಯದ ಈರುಳ್ಳಿಗೆ ಬೇಡಿಕೆ ಕುಸಿದಿದೆ’ ಎಂದು ಹುಬ್ಬಳ್ಳಿ ಎಪಿಎಂಸಿ ಕಾರ್ಯದರ್ಶಿ ಕೆ.ಎಚ್.ಗುರುಪ್ರಸಾದ ತಿಳಿಸಿದರು. </p>.<p>‘ಹಿಂದಿನ ವರ್ಷ ಎಕರೆಗೆ 100 ಚೀಲ (ತಲಾ 50 ಕೆಜಿ) ಇಳುವರಿ ಬಂದಿತ್ತು. ಈ ಸಲ ಅತಿವೃಷ್ಟಿಯಿಂದ 35 ಚೀಲ ಇಳುವರಿ ಬಂದಿದೆ. ಅದಕ್ಕೂ ಉತ್ತಮ ಧಾರಣೆ ಸಿಗುತ್ತಿಲ್ಲ’ ಎಂದು ಬಾಗಲಕೋಟೆ ಜಿಲ್ಲೆಯ ಯಂಡಿಗೇರಿಯ ರೈತ ತಿರುಪತಿ ಮಾದರ ತಿಳಿಸಿದರು.</p>.<p>‘₹2 ಲಕ್ಷ ವ್ಯಯಿಸಿ 10 ಎಕರೆಯಲ್ಲಿ ಈರುಳ್ಳಿ ಬೆಳೆದಿರುವೆ. ಸಾಮಾನ್ಯ ದಿನಗಳಲ್ಲಿ 1,000 ಚೀಲಗಳಷ್ಟು (ತಲಾ 50 ಕೆಜಿ) ಇಳುವರಿ ಬರುತ್ತಿತ್ತು. ಈ ಬಾರಿ ಅತಿವೃಷ್ಟಿಯಿಂದ ನಿರೀಕ್ಷಿತ ಫಸಲು ಬಂದಿಲ್ಲ’ ಎಂದು ರಾಮದುರ್ಗ ತಾಲ್ಲೂಕಿನ ಸಾಲಾಪುರದ ರೈತ ಮಂಜುನಾಥ ತೋಟಗಟ್ಟಿ ಹೇಳಿದರು.</p>.<div><blockquote>ಬೆಳಗಾವಿ ಜಿಲ್ಲೆಯಲ್ಲಿ 3310 ಹೆಕ್ಟೇರ್ನಲ್ಲಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಈಗ ಉಳಿದ ಬೆಳೆಗೆ ಬೆಂಬಲ ಬೆಲೆ ನೀಡುವ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ</blockquote><span class="attribution">- ಮಹಾಂತೇಶ ಮುರಗೋಡ ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ ಬೆಳಗಾವಿ</span></div>.<div><blockquote>ಕ್ವಿಂಟಲ್ಗೆ ₹2 ಸಾವಿರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾದರೆ ಮಾತ್ರ ನಮಗೆ ಅನುಕೂಲ. ಈಗ ಕ್ವಿಂಟಲ್ಗೆ ₹600ರಿಂದ ₹700ಕ್ಕೆ ಮಾರುತ್ತಿದೆ</blockquote><span class="attribution"> ಮಂಜುನಾಥ ತೋಟಗಟ್ಟಿ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>