ಸಮೀಪದ ಸತ್ತಿ ಗ್ರಾಮದ ಮನೋಜ ಗಂಗಪ್ಪನವರ ಅವರಿಗೆ ಸೇರಿದ ಎಮ್ಮೆಯನ್ನು ಕಾಳಜಿ ಕೇಂದ್ರಕ್ಕೆ ಕರೆತರುವಾಗ ದೊಡವಾಡ ರಸ್ತೆಯ ಬಳಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಯಿತು. ಅದೇ ಗ್ರಾಮದ ಆನಂದ ಚಿನಗುಂಡಿ ರಕ್ಷಣೆಗೆ ಮುಂದಾಗಿ, ಗ್ರಾಮದ ಕೆಲವರ ಸಹಾಯದಿಂದ ಹಗ್ಗ ಪಡೆದು ಎಮ್ಮೆಗೆ ಕಟ್ಟಿದ ಹಗ್ಗಕ್ಕೆ ಬಿಗಿದು ತಾನೂ ಹಿಡಿದುಕೊಂಡು ನೀರಿನಿಂದ ಮೇಲೆ ಬಂದರು.