ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ ಸಂಸತ್‌ನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ಚಂದ್ರ ಆರ್ಯ ಅವರಿಗೆ ಬೆಳಗಾವಿ ನಂಟು

Last Updated 20 ಮೇ 2022, 13:51 IST
ಅಕ್ಷರ ಗಾತ್ರ

ಬೆಳಗಾವಿ: ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ಕನ್ನಡಿಗರ ಮನ ಗೆದ್ದಿರುವ ಅಲ್ಲಿನ ಸಂಸದ ಚಂದ್ರ ಆರ್ಯ ಅವರಿಗೆ ಕುಂದಾನಗರಿ ಬೆಳಗಾವಿಯ ನಂಟಿದೆ.

ಇಲ್ಲಿನ ಭಾಗ್ಯನಗರದ ಶ್ರೀರಾಮ ಕಾಲೊನಿಯ ಗೋಪಾಲ ಗಾಯತ್ರಿ–ರಮಾ ಗಾಯತ್ರಿ ದಂಪತಿಯ ಪುತ್ರಿ ಸಂಗೀತಾ ಅವರನ್ನು ಚಂದ್ರ ವಿವಾಹವಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಮೂಲದ ಗೋಪಾಲ ಅವರು ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ಬಳಿಕ ಇಲ್ಲಿಗೆ ಬಂದು ವಾಸವಿದ್ದರು. ಅವರು ಹೋದ ವರ್ಷ ಅಕ್ಟೋಬರ್‌ನಲ್ಲಿ ನಿಧನರಾಗಿದ್ದಾರೆ. ಅವರ ಪತ್ನಿ ರಮಾ ಸದ್ಯ ಭಾಗ್ಯನಗರದಲ್ಲಿ ವಾಸವಿದ್ದಾರೆ. ಚಂದ್ರ ಅವರು ಈ ಹಿಂದೆ ಬೆಳಗಾವಿಗೂ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT