ಬೆಳಗಾವಿ: ಇಲ್ಲಿನ ಹೊಸೂರು ಬಸವನಗಲ್ಲಿಯ ಹೋಟೆಲ್ ‘ಮಲ್ಹಾರ’ದಲ್ಲಿ ಬುಧವಾರ ಕೋವಿಡ್ ಲಾಕ್ಡೌನ್ ನಡುವೆಯೂ ಊಟ ನೀಡುತ್ತಿದ್ದ ಆರೋಪದ ಮೇಲೆ ಮಾಲೀಕ ಶ್ರೀಧರ ಪಾಟೀಲ ಹಾಗೂ ಇತರ 17 ಮಂದಿ ವಿರುದ್ಧ ಶಹಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆ 2020ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.
ಅನವಶ್ಯವಾಗಿ ಸಂಚರಿಸುತ್ತಿದ್ದವರಿಂದ 26 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮಾಸ್ಕ್ ಧರಿಸದೆ ಓಡಾಡುತ್ತಿದ್ದ 163 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.