<p><strong>ಬೆಳಗಾವಿ:</strong> ಇಲ್ಲಿನ ಶಹಾಪುರದ ಸರ್ಕಾರಿ ಚಿಂತಾಮಣರಾವ್ ಪ್ರೌಢಶಾಲೆಯಲ್ಲಿ ಶತಮಾನೋತ್ಸವ ಪ್ರಯುಕ್ತ, ಎರಡನೇ ದಿನವಾದ ಭಾನುವಾರವೂ ವಿವಿಧ ಕಾರ್ಯಕ್ರಮ ನಡೆದವು.</p><p>ಶಾಲೆ ಆವರಣದಲ್ಲಿ ಶ್ರೀಮಂತ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು. ಇದರ ಪ್ರಯುಕ್ತ, ಸರಾಫ್ ಗಲ್ಲಿ ಕಾರ್ನರ್ನಿಂದ ಶಾಲೆ ಆವರಣದವರೆಗೆ ನಡೆದ ಭವ್ಯ ಶೋಭಾಯಾತ್ರೆ ಗಮನಸೆಳೆಯಿತು.</p>.<p>ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕದ ಸಂಸದ ಶ್ರೀನಿವಾಸ ಠಾಣೇದಾರ, ‘ನಾನು ಈ ಶಾಲೆ ವಿದ್ಯಾರ್ಥಿಯಾಗಿದ್ದು ಹೆಮ್ಮೆಯ ವಿಷಯ. ಬೆಳಗಾವಿಯಲ್ಲಿ ಕಳೆದ ಬಾಲ್ಯ ಮತ್ತು ಪಡೆದ ಶಿಕ್ಷಣವನ್ನು ಎಂದೂ ಮರೆಯಲಾಗದು’ ಎಂದು ಸ್ಮರಿಸಿದರು.</p><p>‘ಬಡತನದ ಕಾರಣಕ್ಕೆ ನಾನು ಡೆಂಟಲ್ ಆಸ್ಪತ್ರೆಯೊಂದರಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿದ್ದೆ. ಕೆಲಸ ಮಾಡುತ್ತಲೇ ಬಿ.ಎಸ್ಸಿ ಪದವಿ ಗಳಿಸಿ, ಸಿಕ್ಕ ಅವಕಾಶ ಬಳಸಿಕೊಂಡು ಅಮೆರಿಕ ಸೇರಿದೆ. ಅಲ್ಲಿ ಎಂ.ಎಸ್ಸಿ, ಪಿಎಚ್.ಡಿ ಮುಗಿದ ನಂತರ, ವ್ಯವಹಾರದಲ್ಲಿ ತೊಡಗಿದೆ. ಸಂಸದನೂ ಆದೆ’ ಎಂದರು.</p><p>‘ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಕರಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಬೆಳಗಾವಿಯಲ್ಲಿ ನಿರ್ಮಿಸಿದ ಸುವರ್ಣ ವಿಧಾನಸೌಧ ವರ್ಷವಿಡೀ ಸದ್ಬಳಕೆಯಾಗಬೇಕು. ಬೆಳಗಾವಿ ಇನ್ನಷ್ಟು ಬೆಳವಣಿಗೆ ಹೊಂದಬೇಕು’ ಎಂದು ಆಶಿಸಿದರು.</p><p>ಸಂಸದ ಜಗದೀಶ ಶೆಟ್ಟರ್, ‘ಚಿಂತಾಮಣರಾವ್ ಶಾಲೆಯಲ್ಲಿ ಕನ್ನಡ, ಮರಾಠಿ, ಉರ್ದು ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯೊಂದರಲ್ಲಿ ಇಷ್ಟೊಂದು ಸೌಕರ್ಯಗಳಿವೆ ಎಂಬುದೇ ಖುಷಿಯ ವಿಚಾರ’ ಎಂದು ಶ್ಲಾಘಿಸಿದರು.</p><p>ಶಾಸಕ ಅಭಯ ಪಾಟೀಲ, ವಿಜಯರಾಜೇ ಪಟವರ್ಧನ, ಮೇಯರ್ ಮಂಗೇಶ ಪವಾರ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಇಲ್ಲಿನ ಶಹಾಪುರದ ಸರ್ಕಾರಿ ಚಿಂತಾಮಣರಾವ್ ಪ್ರೌಢಶಾಲೆಯಲ್ಲಿ ಶತಮಾನೋತ್ಸವ ಪ್ರಯುಕ್ತ, ಎರಡನೇ ದಿನವಾದ ಭಾನುವಾರವೂ ವಿವಿಧ ಕಾರ್ಯಕ್ರಮ ನಡೆದವು.</p><p>ಶಾಲೆ ಆವರಣದಲ್ಲಿ ಶ್ರೀಮಂತ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು. ಇದರ ಪ್ರಯುಕ್ತ, ಸರಾಫ್ ಗಲ್ಲಿ ಕಾರ್ನರ್ನಿಂದ ಶಾಲೆ ಆವರಣದವರೆಗೆ ನಡೆದ ಭವ್ಯ ಶೋಭಾಯಾತ್ರೆ ಗಮನಸೆಳೆಯಿತು.</p>.<p>ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕದ ಸಂಸದ ಶ್ರೀನಿವಾಸ ಠಾಣೇದಾರ, ‘ನಾನು ಈ ಶಾಲೆ ವಿದ್ಯಾರ್ಥಿಯಾಗಿದ್ದು ಹೆಮ್ಮೆಯ ವಿಷಯ. ಬೆಳಗಾವಿಯಲ್ಲಿ ಕಳೆದ ಬಾಲ್ಯ ಮತ್ತು ಪಡೆದ ಶಿಕ್ಷಣವನ್ನು ಎಂದೂ ಮರೆಯಲಾಗದು’ ಎಂದು ಸ್ಮರಿಸಿದರು.</p><p>‘ಬಡತನದ ಕಾರಣಕ್ಕೆ ನಾನು ಡೆಂಟಲ್ ಆಸ್ಪತ್ರೆಯೊಂದರಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿದ್ದೆ. ಕೆಲಸ ಮಾಡುತ್ತಲೇ ಬಿ.ಎಸ್ಸಿ ಪದವಿ ಗಳಿಸಿ, ಸಿಕ್ಕ ಅವಕಾಶ ಬಳಸಿಕೊಂಡು ಅಮೆರಿಕ ಸೇರಿದೆ. ಅಲ್ಲಿ ಎಂ.ಎಸ್ಸಿ, ಪಿಎಚ್.ಡಿ ಮುಗಿದ ನಂತರ, ವ್ಯವಹಾರದಲ್ಲಿ ತೊಡಗಿದೆ. ಸಂಸದನೂ ಆದೆ’ ಎಂದರು.</p><p>‘ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಕರಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಬೆಳಗಾವಿಯಲ್ಲಿ ನಿರ್ಮಿಸಿದ ಸುವರ್ಣ ವಿಧಾನಸೌಧ ವರ್ಷವಿಡೀ ಸದ್ಬಳಕೆಯಾಗಬೇಕು. ಬೆಳಗಾವಿ ಇನ್ನಷ್ಟು ಬೆಳವಣಿಗೆ ಹೊಂದಬೇಕು’ ಎಂದು ಆಶಿಸಿದರು.</p><p>ಸಂಸದ ಜಗದೀಶ ಶೆಟ್ಟರ್, ‘ಚಿಂತಾಮಣರಾವ್ ಶಾಲೆಯಲ್ಲಿ ಕನ್ನಡ, ಮರಾಠಿ, ಉರ್ದು ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯೊಂದರಲ್ಲಿ ಇಷ್ಟೊಂದು ಸೌಕರ್ಯಗಳಿವೆ ಎಂಬುದೇ ಖುಷಿಯ ವಿಚಾರ’ ಎಂದು ಶ್ಲಾಘಿಸಿದರು.</p><p>ಶಾಸಕ ಅಭಯ ಪಾಟೀಲ, ವಿಜಯರಾಜೇ ಪಟವರ್ಧನ, ಮೇಯರ್ ಮಂಗೇಶ ಪವಾರ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>